ಆ್ಯಪ್ನಗರ

ಜೀವಿಸುವ ಸಲುವಾಗಿ ಬದುಕಬೇಕು: ಶಿವಲಿಂಗ ಶಿವಾಚಾರ್ಯರು

ರಾಣೇಬೆನ್ನೂರ: ಸಕಲ ಜೀವರಾಶಿಗಳಲ್ಲಿ ಚಿಂತನ ಮಂಥನ ಮಾಡುವ ಏಕೈಕ ಜೀವಿಯಾಗಿರುವ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸತ್ಯ, ಪ್ರಾಮಾಣಿಕ, ನ್ಯಾಯ, ನೀತಿಯ ದಾರಿಯಲ್ಲಿಯೇ ಸಾಗಿ ಉತ್ತಮ ಹೆಸರು ಮಾಡಬೇಕು ಎಂದು ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು ನುಡಿದರು.

Vijaya Karnataka 29 May 2019, 5:00 am
ರಾಣೇಬೆನ್ನೂರ: ಸಕಲ ಜೀವರಾಶಿಗಳಲ್ಲಿ ಚಿಂತನ ಮಂಥನ ಮಾಡುವ ಏಕೈಕ ಜೀವಿಯಾಗಿರುವ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸತ್ಯ, ಪ್ರಾಮಾಣಿಕ, ನ್ಯಾಯ, ನೀತಿಯ ದಾರಿಯಲ್ಲಿಯೇ ಸಾಗಿ ಉತ್ತಮ ಹೆಸರು ಮಾಡಬೇಕು ಎಂದು ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು ನುಡಿದರು.
Vijaya Karnataka Web HVR-28RNR2


ತಾಲೂಕಿನ ಅರೇಮಲ್ಲಾಪುರ ಗ್ರಾಮದ ಶ್ರೀ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಗ್ರಾಮದ ಸರ್ವಜನರ ವತಿಯಿಂದ ಏರ್ಪಡಿಸಲಾಗಿದ್ದ ಮರಿಯಪ್ಪ ನರಸಪ್ಪ ಹಲವಾಗಲ ಅವರ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಉಸಿರಿಗೆ ಬೆಲೆ ಇದೆ. ಆದರೆ ಉಳಿಗಾಲವಿಲ್ಲ. ಈ ಉಸಿರು ಉದ್ದಾರಕ್ಕೂ, ಹಾಳಾಗುವುದಕ್ಕು ಕಾರಣವಾಗಿದೆ. ಅನೇಕ ಮನುಷ್ಯರು ತಮ್ಮ ಜೀವಿತಾವಧಿಯಲ್ಲಿ ಮಾಡಬಾರದ್ದನ್ನು ಮಾಡಿ, ಇಹಲೋಕ ತ್ಯಜಿಸುತ್ತಾರೆ. ಕೆಲವರು ಬದುಕಿದಂತೆ ಅವರ ಅನುಪಮ ಸೇವೆ ಬಿಟ್ಟು ಹೋಗುತ್ತಾರೆ. ಬದುಕುವುದಕ್ಕಾಗಿ ಜೀವಿಸುವ ಬದಲು ಜೀವಿಸುವ ಸಲುವಾಗಿ ಬದುಕಬೇಕು. ಬಾಹ್ಯ ಸೌಂದರ್ಯದಿಂದ ಏನನ್ನೂ ಸಾಧಿಸಲಾಗದು. ಆಂತರಿಕ ಸೌಂದರ್ಯದಿಂದ ಸಂಸ್ಕೃತಿಯನ್ನು ಕಾಪಾಡಬೇಕು. ದಾರ್ಶನಿಕರು ಬಾಹ್ಯದ ಬದಲು ಆಂತರಿಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಜೀವನ ನವನವೀನವಾಗಬೇಕು. ಅಂತಹ ಬದುಕು ಸಾಗಿಸಿದವರಲ್ಲಿ ಮರಿಯಪ್ಪ ಹಲವಾಗಲ ಒಬ್ಬರಾಗಿದ್ದಾರೆ ಎಂದರು.

ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಮಾತನಾಡಿದರು. ನೆಗಳೂರಿನ ಗುರುಶಾಂತ ಶಿವಾಚಾರ್ಯರು, ಸ್ಥಳೀಯ ಶರಣಬಸವೇಶ್ವರ ಮಠದ ಪ್ರಣವಾನಂದರಾಮಶ್ರೀಗಳು, ದಾವಣಗೇರಿಯ ಗುರುದೇವ ಶ್ರೀಗಳು ಆಶೀರ್ವಚನ ನೀಡಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಎಸ್‌.ಎಸ್‌.ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ಪರಮೇಶಪ್ಪ ಮೇಗಳಮನಿ, ಏಕನಾಥ ಬಾನುವಳ್ಳಿ, ಪುಟ್ಟಪ್ಪ ಮರಿಯಮ್ಮನವರ, ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಬಸನಗೌಡ ಮರದ, ಮಾರುತಿ ರಾಠೋಡ, ಮಂಜುನಗೌಡ ಪಾಟೀಲ, ಶಿವಾನಂದ ಕನ್ನಪ್ಪಳವರ, ಸಂತೋಷ ಪಾಟೀಲ, ಕೃಷ್ಣಪ್ಪ ಕಂಬಳಿ, ಮಂಜುನಾಥ ಹಲವಾಗಲ ಮತ್ತು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ