ಆ್ಯಪ್ನಗರ

ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಬ್ಯಾಡಗಿ: ಗ್ರಾಮೀಣ ಭಾಗದ ಐಪಿ ಸೆಟ್‌ಗಳಿಗೆ ಸಮರ್ಪಕವಾಗಿ (ತ್ರಿಫೇಸ್‌) ವಿದ್ಯುತ್‌ ಪೂರೈಕೆ ಮಾಡದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡರು ಹೆಸ್ಕಾಂ ಕಚೇರಿಗೆ ಬೀಗ ಜಡಿದು ಗುರುವಾರ ಪ್ರತಿಭಟನೆ ನಡೆಸಿದರು.

Vijaya Karnataka 23 Aug 2019, 5:00 am
ಬ್ಯಾಡಗಿ: ಗ್ರಾಮೀಣ ಭಾಗದ ಐಪಿ ಸೆಟ್‌ಗಳಿಗೆ ಸಮರ್ಪಕವಾಗಿ (ತ್ರಿಫೇಸ್‌) ವಿದ್ಯುತ್‌ ಪೂರೈಕೆ ಮಾಡದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡರು ಹೆಸ್ಕಾಂ ಕಚೇರಿಗೆ ಬೀಗ ಜಡಿದು ಗುರುವಾರ ಪ್ರತಿಭಟನೆ ನಡೆಸಿದರು.
Vijaya Karnataka Web HVR-22BYD6A


ಗುರುವಾರ ಮಧ್ಯಾಹ್ನ ಹೆಸ್ಕಾಂ ಕಚೇರಿಗೆ ಆಗಮಿಸಿದ ರೈತರು ಅಧಿಕಾರಿಗಳನ್ನು ಹೊರಗೆ ಕಳಿಸಿ ನಂತರ ಕಚೇರಿಗೆ ಹಾಕಿ ಬೀಗ ಜಡಿದು 5 ತಾಸಿಗೂ ಹೆಚ್ಚು ಕಾಲ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಗ್ರಾಮೀಣ ಭಾಗದಲ್ಲಿ ಸಮರ್ಪಕವಾಗಿ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. ತಾಲೂಕಿನ ಬುಡಪನಹಳ್ಳಿ, ಕಲ್ಲೇದೇವರು, ಮೋಟೆಬೆನ್ನೂರ ರೈತರ ಹೊಲಗಳಲ್ಲಿ ಐಪಿ ಸೆಟ್‌ಗಳಲ್ಲಿ ಕರೆಂಟ್‌ ಸಂಚರಿಸಿ ತಿಂಗಳುಗಳೇ ಕಳೆದಿವೆ. ಇದರಿಂದ ರೈತರು ಬೆಳೆಗಳಿಗೆ ನೀರು ಹರಿಸದೆ ಬೆಳೆಗಳು ಹಾಳಾಗುತ್ತಿವೆ ಎಂದು ಆರೋಪಿಸಿದರು.

ತಾಲೂಕಾಧ್ಯಕ್ಷ ರುದ್ರನಗೌಡ ಕಾಡನಗೌಡ್ರ ಮಾತನಾಡಿ, ತಾಲೂಕಿನ ಎಂಟಕ್ಕೂ ಹೆಚ್ಚಿನ ಗ್ರಾಮಗಳು ವಿದ್ಯುತ್‌ ಸಮಸ್ಯೆ ಎದುರಿಸುತ್ತ ಕತ್ತಲಲ್ಲಿ ಮುಳುಗಿವೆ. ವಿದ್ಯುತ್‌ ಇಲ್ಲದೇ ಬೋರ್‌ವೆಲ್‌ ನೀರು ಬೀಳದೇ ಅಳಿದುಳಿದ ಬೆಳೆಗಳು ನಾಶವಾಗುತ್ತಿವೆ. ಅಧಿಕಾರಿಗಳಿಗೆ ಇವೆಲ್ಲ ಸಮಸ್ಯೆಗಳು ಕಾಣುತ್ತಿಲ್ಲ ಆರೋಪಿಸಿದರು.

ಗಂಗಣ್ಣ ಎಲಿ ಮಾತನಾಡಿ, ಜನ ಮತ್ತು ಜಾನುವಾರುಗಳಿಗೆ ಕುಡಿಯಲೂ ನೀರು ಸಿಗುತ್ತಿಲ್ಲ, ಈ ಬಗ್ಗೆ ಅಧಿಕಾರಿಗಳಿಗೆ ಜ್ಞಾನವಿದ್ದರೂ ಕ್ರಮಕೈಗೊಳ್ಳಲು ವಿನಾಕಾರಣ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು.

ಮೋಟೆಬೆನ್ನೂರ ರೈತ ಮುಖಂಡ ಜಾನ್‌ ಪುನೀತ್‌ ಮಾತನಾಡಿ, ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿಯವರ ಹುಟ್ಟೂರು ಮೋಟೆಬೆನ್ನೂರಲ್ಲೇ ವಿದ್ಯುತ್‌ ಪೂರ‍್ಯಕೆಗೆ ಅಧಿಕಾರಿಗಳು ನಿರ್ಲಕ್ಷ ್ಯ ತೋರಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಂಜುಂಡ ಸ್ವಾಮಿ ಹಾವೇರಿಮಠ ಫಕ್ಕಿರಗೌಡ ತಂಗೌಡ್ರ, ಸುರೇಶ ಛಲವಾದಿ ಇತರರಿದ್ದರು.

ಬಿಲ್‌ ಪಾವತಿಸದೇ ವಾಪಸ್‌: ಪ್ರತಿಭಟನೆ ಸುದ್ದಿ ತಿಳಿಯದೇ ವಿದ್ಯುತ್‌ ಬಿಲ್‌ ಕಟ್ಟಲು ಬಂದ ಗ್ರಾಹಕರು ಕಚೇರಿಯಲ್ಲಿ ಸಿಬ್ಬಂದಿ ಇಲ್ಲದ ಕಾರಣ ಕಾದು ಕಾದು ಸುಸ್ತಾಗಿ ಬಿಲ್‌ ಕಟ್ಟದೇ ವಾಪಸ್‌ ನಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ