ಆ್ಯಪ್ನಗರ

ರಾಣೇಬೆನ್ನೂರಲ್ಲಿ ಲಾಕ್‌ಡೌನ್‌ ಯಶಸ್ವಿ

ರಾಣೇಬೆನ್ನೂರ: ಸರಕಾರ ಜಾರಿಗೊಳಿಸಿದ ಭಾನುವಾರದ ಲಾಕ್‌ಡೌನ್‌ ನಗರದಲ್ಲಿಸಂಪೂರ್ಣ ಯಶಸ್ವಿಯಾಗಿದೆ. ಬೆಳಗ್ಗೆಯಿಂದಲೇ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ಎಲ್ಲಾಕಡೆ ಅಂಗಡಿ ಮುಂಗಟ್ಟುಗಳಿಗೆ ಬಾಗಿಲು ಹಾಕಲಾಗಿತ್ತು. ಔಷಧ ಅಂಗಡಿಗಳು, ಪೆಟ್ರೊಲ್‌ ಬಂಕ್‌ಗಳು ಮಾತ್ರ ಬಾಗಿಲು ತೆರೆದಿದ್ದವು.

Vijaya Karnataka 6 Jul 2020, 5:00 am
ರಾಣೇಬೆನ್ನೂರ: ಸರಕಾರ ಜಾರಿಗೊಳಿಸಿದ ಭಾನುವಾರದ ಲಾಕ್‌ಡೌನ್‌ ನಗರದಲ್ಲಿಸಂಪೂರ್ಣ ಯಶಸ್ವಿಯಾಗಿದೆ. ಬೆಳಗ್ಗೆಯಿಂದಲೇ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ಎಲ್ಲಾಕಡೆ ಅಂಗಡಿ ಮುಂಗಟ್ಟುಗಳಿಗೆ ಬಾಗಿಲು ಹಾಕಲಾಗಿತ್ತು. ಔಷಧ ಅಂಗಡಿಗಳು, ಪೆಟ್ರೊಲ್‌ ಬಂಕ್‌ಗಳು ಮಾತ್ರ ಬಾಗಿಲು ತೆರೆದಿದ್ದವು. ಜನಸಂಚಾರ ತುಂಬಾ ವಿರಳವಾಗಿದ್ದು ಅಲ್ಲೊಂದು ಇಲ್ಲೊಂದು ವಾಹನಗಳು ಸಂಚರಿಸುತ್ತಿರುವುದು ಕಂಡುಬಂದಿತು. ಸಾರಿಗೆ ಸಂಸ್ಥೆ ಸೇವೆಯನ್ನು ಬಂದ್‌ ಮಾಡಿದ್ದರಿಂದ ಬಸ್‌ನಿಲ್ದಾಣ ಸಂಪೂರ್ಣ ಖಾಲಿಯಾಗಿತ್ತು. ಎಂ.ಜಿ.ರಸ್ತೆಯ ಸರ್ಕಲ್‌ ಬಳಿ ಅನಗತ್ಯವಾಗಿ ಬೈಕ್‌ಗಳಲ್ಲಿಸಂಚರಿಸುತ್ತಿದ್ದ ಸವಾರರನ್ನು ಪೊಲೀಸರು ತಡೆದು ಎಚ್ಚರಿಸುವುದು ಕಂಡು ಬಂದಿತು. ತಹಸೀಲ್ದಾರ ಬಸನಗೌಡ ಕೋಟೂರ ನಗರದ ಎಲ್ಲೆಡೆ ಸಂಚರಿಸಿ ಪರಿಸ್ಥಿತಿ ಅವಲೋಕಿಸಿದರು.
Vijaya Karnataka Web 5RNR2B_23
ರಾಣೇಬೆನ್ನೂರಿನ ಬಸ್‌ನಿಲ್ದಾಣ ನಿಶ್ಯಬ್ದವಾಗಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ