ರಾಣೇಬೆನ್ನೂರ: ಸರಕಾರ ಜಾರಿಗೊಳಿಸಿದ ಭಾನುವಾರದ ಲಾಕ್ಡೌನ್ ನಗರದಲ್ಲಿಸಂಪೂರ್ಣ ಯಶಸ್ವಿಯಾಗಿದೆ. ಬೆಳಗ್ಗೆಯಿಂದಲೇ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ಎಲ್ಲಾಕಡೆ ಅಂಗಡಿ ಮುಂಗಟ್ಟುಗಳಿಗೆ ಬಾಗಿಲು ಹಾಕಲಾಗಿತ್ತು. ಔಷಧ ಅಂಗಡಿಗಳು, ಪೆಟ್ರೊಲ್ ಬಂಕ್ಗಳು ಮಾತ್ರ ಬಾಗಿಲು ತೆರೆದಿದ್ದವು. ಜನಸಂಚಾರ ತುಂಬಾ ವಿರಳವಾಗಿದ್ದು ಅಲ್ಲೊಂದು ಇಲ್ಲೊಂದು ವಾಹನಗಳು ಸಂಚರಿಸುತ್ತಿರುವುದು ಕಂಡುಬಂದಿತು. ಸಾರಿಗೆ ಸಂಸ್ಥೆ ಸೇವೆಯನ್ನು ಬಂದ್ ಮಾಡಿದ್ದರಿಂದ ಬಸ್ನಿಲ್ದಾಣ ಸಂಪೂರ್ಣ ಖಾಲಿಯಾಗಿತ್ತು. ಎಂ.ಜಿ.ರಸ್ತೆಯ ಸರ್ಕಲ್ ಬಳಿ ಅನಗತ್ಯವಾಗಿ ಬೈಕ್ಗಳಲ್ಲಿಸಂಚರಿಸುತ್ತಿದ್ದ ಸವಾರರನ್ನು ಪೊಲೀಸರು ತಡೆದು ಎಚ್ಚರಿಸುವುದು ಕಂಡು ಬಂದಿತು. ತಹಸೀಲ್ದಾರ ಬಸನಗೌಡ ಕೋಟೂರ ನಗರದ ಎಲ್ಲೆಡೆ ಸಂಚರಿಸಿ ಪರಿಸ್ಥಿತಿ ಅವಲೋಕಿಸಿದರು.
ರಾಣೇಬೆನ್ನೂರಲ್ಲಿ ಲಾಕ್ಡೌನ್ ಯಶಸ್ವಿ
ರಾಣೇಬೆನ್ನೂರ: ಸರಕಾರ ಜಾರಿಗೊಳಿಸಿದ ಭಾನುವಾರದ ಲಾಕ್ಡೌನ್ ನಗರದಲ್ಲಿಸಂಪೂರ್ಣ ಯಶಸ್ವಿಯಾಗಿದೆ. ಬೆಳಗ್ಗೆಯಿಂದಲೇ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ಎಲ್ಲಾಕಡೆ ಅಂಗಡಿ ಮುಂಗಟ್ಟುಗಳಿಗೆ ಬಾಗಿಲು ಹಾಕಲಾಗಿತ್ತು. ಔಷಧ ಅಂಗಡಿಗಳು, ಪೆಟ್ರೊಲ್ ಬಂಕ್ಗಳು ಮಾತ್ರ ಬಾಗಿಲು ತೆರೆದಿದ್ದವು.
Vijaya Karnataka 6 Jul 2020, 5:00 am