ಆ್ಯಪ್ನಗರ

ಲೋಕ್‌ ಅದಾಲತ್‌: 328 ಪ್ರಕರಣ ಇತ್ಯರ್ಥ

ಹಿರೇಕೆರೂರು: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಬೃಹತ್‌ ಲೋಕ್‌ ಅದಾಲತ್‌ನಲ್ಲಿ 328 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, 1.40ಕೋಟಿ ರೂ. ಹಣ ವಸೂಲಾಯಿತು.

Vijaya Karnataka 15 Jul 2019, 5:00 am
ಹಿರೇಕೆರೂರು: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಬೃಹತ್‌ ಲೋಕ್‌ ಅದಾಲತ್‌ನಲ್ಲಿ 328 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, 1.40ಕೋಟಿ ರೂ. ಹಣ ವಸೂಲಾಯಿತು.
Vijaya Karnataka Web lok adalat 328 cases settled
ಲೋಕ್‌ ಅದಾಲತ್‌: 328 ಪ್ರಕರಣ ಇತ್ಯರ್ಥ


ನ್ಯಾಯಾಲಯದ ಆವರಣದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಕೆ.ಎಂ.ಪುಟ್ಟಸ್ವಾಮಿ, ಕಿರಿಯ ದಿವಾಣಿ ನ್ಯಾಯಾಧೀಶ ಡಿ.ಸಚಿನ್‌ ಇನ್ನೊಬ್ಬ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಎಸ್‌.ಕೆ.ಜನಾರ್ಧನ್‌ ಅವರ ಮುಂದೆ ಬಂದ ವ್ಯಾಜ್ಯಪೂರ್ವ ಹೆಸ್ಕಾಂ, ಎಸ್‌ಬಿಐ ಬ್ಯಾಂಕ್‌ ಸೇರಿದ 44 ಪ್ರಕರಣಗಳು ಹಾಗೂ 3 ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದ 284 ಪ್ರಕರಣಗಳು ಸೇರಿದಂತೆ ಒಟ್ಟು 328 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡವು.

ಹೆಸ್ಕಾಂ ವಿದ್ಯುತ್‌ ಬಿಲ್‌ ಬಾಕಿ ಸೇರಿದಂತೆ ಭಾರತೀಯ ಸ್ಟೇಟ್‌ ಬ್ಯಾಂಕಿಗೆ ಕಟ್‌ಬಾಕಿ ಸಾಲದ ಮರುಪಾವತಿ ಹಣವಾಗಿ 1.40 ಕೋಟಿ ರೂ. ಹಣ ವಸೂಲಾಯಿತು ಎಂದು ತಾಲೂಕಾ ಕಾನೂನು ಸೇವಾ ಸಮಿತಿ ಮಾಹಿತಿ ನೀಡಿತು.

ವರ್ಷದಲ್ಲಿ ಮೂರು ಬಾರಿ ನಡೆಯುವ ಲೋಕ ಅದಾಲತ್‌ನ್ನು ಕೋರ್ಟ್‌ ಸಿಬ್ಬಂದಿ ಶನಿವಾರ ನ್ಯಾಯಾಲಯದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿಸಿದರು. ಅಪ್ಪರ ಸರಕಾರಿ ವಕೀಲ ಎಸ್‌.ಬಿ.ತಿಪ್ಪಣ್ಣನವರ, ಎಸ್‌ಬಿಐ ಬ್ಯಾಂಕ್‌ ವ್ಯವಸ್ಥಾಪಕಿ ಕೆ.ಪುಷ್ಪಲತಾ ಹಾಗೂ ಲೋಕ್‌ ಅದಾಲತ್ತಿನಡಿಯಲ್ಲಿ ಬರುವ ಪ್ರಕರಣಗಳ ಒಕಾಲತ್ತುವಹಿಸಿದ್ದ ಹಿರಿಯ ನ್ಯಾಯವಾದಿಗಳಾದ ಪಿ.ವಿ.ಕೆರೂಡಿ, ಬಿ.ಎಂ.ಹೊಳಿಯಪ್ಪನವರ, ಯು.ಬಿ.ಜೋಗಿಹಳ್ಳಿ, ಎಸ್‌.ಪಿ.ಖಂಡೇಬಾಗೂರು, ಎನ್‌.ಹೆಚ್‌.ಕಡೇಮನಿ, ಹೆಚ್‌.ಎಸ್‌.ಕೋಣನವರ, ಜಿ.ವಿ.ಕುಲಕರ್ಣಿ, ವಿ.ವಿ.ಮುಚುಡಿ, ಬಿ.ಜಿ.ಪಾಟೀಲ್‌, ಎಲ್‌.ಹೆಚ್‌.ಕಳ್ಳಿಮನಿ, ಕೆ.ಬಿ.ಬಾಳಿಕಾಯಿ, ಪಿ.ಹೆಚ್‌.ಪಾಟೀಲ್‌, ಎಸ್‌.ಎನ್‌.ಮುಲ್ಲಾ, ರಾಜು ಹೊಟ್ಟಿಗೌಡ್ರ, ಎಸ್‌.ಆರ್‌.ಅಂಗಡಿ, ಪಿ.ಬಿ.ಗುಬ್ಬಿ, ಎಸ್‌.ಹೆಚ್‌.ಗೌಡರ್‌, ಐ.ಬಿ.ಗುಬ್ಬಿ, ಗಿರೀಶ ಬಣಕಾರ, ಮಾರುತಿ ಜೋಕನಾಳ, ಎಂ.ಬಿ.ಪಾಟೀಲ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ