ಆ್ಯಪ್ನಗರ

ಲೋಕಸಭಾ ಚುನಾವಣೆ: ನೋಡಲ್‌ ಅಧಿಕಾರಿಗಳ ಸಭೆ

ಹಾವೇರಿ : ಚುನಾವಣೆ ಘೋಷಣೆಯಾದ ದಿನಾಂಕದಿಂದಲೇ ಯಾವುದೇ ಸಂಶಯಕ್ಕೆ ಆಸ್ಪದ ನೀಡದಂತೆ ಅತ್ಯಂತ ಪಾರದರ್ಶಕ ಮತ್ತು ಸಮರ್ಪಕವಾಗಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ ನಿಯೋಜಿತ ನೋಡಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Vijaya Karnataka 23 Feb 2019, 5:00 am
ಹಾವೇರಿ : ಚುನಾವಣೆ ಘೋಷಣೆಯಾದ ದಿನಾಂಕದಿಂದಲೇ ಯಾವುದೇ ಸಂಶಯಕ್ಕೆ ಆಸ್ಪದ ನೀಡದಂತೆ ಅತ್ಯಂತ ಪಾರದರ್ಶಕ ಮತ್ತು ಸಮರ್ಪಕವಾಗಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ ನಿಯೋಜಿತ ನೋಡಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.
Vijaya Karnataka Web lok sabha election nodal officers meeting
ಲೋಕಸಭಾ ಚುನಾವಣೆ: ನೋಡಲ್‌ ಅಧಿಕಾರಿಗಳ ಸಭೆ


ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಮುಂಬರುವ ಲೋಕಸಭಾ ಚುನಾವಣೆಯ ಸಮರ್ಪಕ ನಿರ್ವಹಣೆಗೆ ನಿಯೋಜಿತ ನೋಡಲ್‌ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಸಮರ್ಪಕ ಚುನಾವಣೆಗಾಗಿ 25 ವಿವಿಧ ಸಮಿತಿಗಳನ್ನು ರಚಿಸಿ ಪ್ರತಿ ಸಮಿತಿಗೆ ಹಿರಿಯ ಹಾಗೂ ಅನುಭವಿ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ತಮ್ಮ ಕಾರ್ಯವ್ಯಾಪ್ತಿ ಅರಿತು ಚುನಾವಣೆಯ ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೋಸಿಜರ್‌ ಅನುಸರಿಸಿ ಲೋಪÜವಿಲ್ಲದಂತೆ ಚುನಾವಣೆ ನಡೆಸಲು ಸಹಕರಿಸುವಂತೆ ಹೇಳಿದರು.

ನೋಡಲ್‌ ಅಧಿಕಾರಿಗಳಾಗಿ ನೇಮಕಗೊಂಡವರು ಹಿಂದಿನ ಎಷ್ಟೇ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿ ಅನುಭವ ಪಡೆದಿದ್ದರೂ ಪ್ರತಿ ಚುನಾವಣೆಯೂ ಹೊಸ ಅನುಭವವಾಗಿರುತ್ತದೆ. ಕಾಲ ಕಾಲಕ್ಕೆ ಚುನಾವಣಾ ಆಯೋಗ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕೊಂಚವು ಲೋಪವಾಗದಂತೆ ಎಚ್ಚರಿಕೆಯಿಂದ ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಚುನಾವಣೆಗಾಗಿ ಮತದಾರರ ಜಾಗೃತಿ, ಚುನಾವಣಾ ಸಿಬ್ಬಂದಿ ನಿರ್ವಹಣೆ, ಸಾರಿಗೆ, ತರಬೇತಿ ಚುನಾವಣಾ ಪರಿಕರಗಳ ನಿರ್ವಹಣೆ, ಮಾದರಿ ನೀತಿ ಸಂಹಿತೆ, ಚುನಾವಣಾ ಯೋಜನಾ ತಯಾರಿ, ವೆಚ್ಚ ನಿರ್ವಹಣೆ, ವೀಕ್ಷ ಕರ ಶಿಷ್ಟಾಚಾರ, ಕಾನೂನುಧಿ-ಸುವ್ಯವಸ್ಥೆ, ಮಾಧ್ಯಮ-ಸಂವಹನ, ವೆಬ್‌ ಕಾಸ್ಟಿಂಗ್‌ ಸಾಫ್ಟವೇರ್‌, ಇವಿಎಂ ವ್ಯವಸ್ಥೆ, ಮಾಧ್ಯಮ ದೃಢೀಕರಣ ಮತ್ತು ಪರಿಶೀಲನಾ ಸಮಿತಿ, ಸಂವಹನ ಮತ್ತು ಸಂದೇಶಗಳ ನಿರ್ವಹಣೆ, ಅಂಚೆ ಮತಪತ್ರ, ಸಹಾಯವಾಣಿ ಕೇಂದ್ರ ಸೇರಿದಂತೆ 25 ಕಮೀಟಿಗಳನ್ನು ರಚಿಸಲಾಗಿದ್ದು, ಪ್ರತಿ ಕಮೀಟಿಗೂ ತಲಾ ಒಬ್ಬ ಅಧಿಕಾರಗಳನ್ನು ಉಸ್ತುವಾರಿ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದರು.

ಮತದಾರರ ನೋಂದಣಿ ಹಾಗೂ ಮತದಾನ ಕುರಿತಂತೆ ಜಾಗೃತಿ ಮೂಡಿಸಲು ವ್ಯವಸ್ಥಿತವಾಗಿ ಪ್ರಚಾರಕಾರ್ಯ ಕೈಗೊಳ್ಳಬೇಕು. ಈಗಾಗಲೇ ಫೆಬ್ರುವರಿ 23 ಮತ್ತು 24, ಮಾರ್ಚ 3 ಮತ್ತು 4 ರಂದು ಮಿಂಚಿನ ಮತದಾರರ ನೋಂದಣಿ ಹಮ್ಮಿಕೊಳ್ಳಲಾಗಿದೆ. ಮನೆ ಮನೆಗೆ, ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಪ್ರತಿ ಮತಗಟ್ಟೆಗೆ ಭೇಟಿ ನೀಡಿ ವಿಕಲಚೇತನರಿಗೆ ಸೌಲಭ್ಯ, ಕುಡಿಯುವ ನೀರು, ವಿದ್ಯುತ್‌, ವಿಶ್ರಾಂತಿ ಕೊಠಡಿ, ಪರಿಶೀಲಿಸಬೇಕು. ಸೌಲಭ್ಯಗಳ ಕೊರತೆಕಂಡುಬಂದರೆ ತಕ್ಷ ಣ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಎಸ್ಪಿ ಕೆ.ಪರಶುರಾಮ, ಜಿ.ಪಂ. ಸಿಇಒ ಕೆ.ಲೀಲಾವತಿ, ಅಧಿಕಾರಿಗಳಾದ ಪ್ರಶಾಂತ ನಾಲವಾರ, ಅಂದಾನೆಪ್ಪ ವಡಗೇರಿ, ಹುಲಿರಾಜ, ಶಶಿಕಲಾ ಪಾಳೇದ, ಆರ್‌.ಬಿ.ಹಿರೇಗೌಡರ, ರಾಜು ಕೂಲೇರ, ಬಿ.ಆರ್‌.ರಂಗನಾಥ್‌, ಪ್ರಕಾಶ ರಾಠೋಡ, ಡಾ.ಎಚ್‌.ಎಸ್‌.ರಾಘವೇಂದ್ರಸ್ವಾಮಿ, ಎಚ್‌.ವಿ.ಮೀಸೆ, ಜಾಫರಶರೀಫ ಸುತಾರ, ಜಮಖಾನೆ, ಎಸ್‌.ವೈ.ಕೊಪ್ಪದ, ಮಲ್ಲಿಕಾರ್ಜುನ ಮಠದ, ಎಸ್‌.ಎಸ್‌.ಅಡಿಗ, ಚೈತ್ರಾ, ಕದರಪ್ಪ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ