ರಾಣೇಬೆನ್ನೂರ: ತಾಯಿ ತನ್ನ ಮಗುವಿಗಾಗಿ ಹಂಬಲಿಸುವಂತೆ ರಾಮಕೃಷ್ಣರು ಭಕ್ತರಿಗಾಗಿ ಚಡಪಡಿಸಿದರು ಎಂದು ಕೇರಳ ಹರಿಪಾದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ವೀರಭದ್ರಾನಂದಜಿ ನುಡಿದರು.
ನಗರದ ಲಲಿತ ಭವನದಲ್ಲಿ ಶನಿವಾರ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ನ ಐದನೆಯ ವಾರ್ಷಿಕ ಸಮ್ಮೇಳನದಲ್ಲಿ ಶ್ರೀ ರಾಮಕೃಷ್ಣ ಚಿಂತನಧಾರೆ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಮಕೃಷ್ಣರ ಒಳಗಿರುವುದು ತಾಯಿ ಕಾಳಿಯಾಗಿದ್ದಾಳೆ. ಅನೇಕ ಭಕ್ತರು ರಾಮಕೃಷ್ಣರಲ್ಲಿ ತಾಯಿಯನ್ನೇ ಕಂಡಿದ್ದಾರೆ. ಅಹಂಕಾರಶೂನ್ಯ, ಕಾಮನಾಶೂನ್ಯರಾದ ರಾಮಕೃಷ್ಣರಿಗಿದ್ದ ಒಂದೇ ಕಾಮನೆಯೆಂದರೆ ಭಕ್ತರೊಂದಿಗಿನ ಒಡನಾಟ. ಊಹಿಸಲಸಾಧ್ಯವಾದ, ರೀತಿಯಲ್ಲಿ ಅವರ ಭಕ್ತವಾತ್ಸಲ್ಯ ಭಾವ ವ್ಯಕ್ತವಾಗುತ್ತಿತ್ತು. ತಾಯಿ ತನ್ನ ಮಗುವು ಅಪಾಯಕ್ಕೆ ಸಿಲುಕುವ ಮುನ್ನವೇ ರಕ್ಷಿಸುವಂತೆ ರಾಮಕೃಷ್ಣರು ಭಕ್ತರನ್ನು ರಕ್ಷಿಸುತ್ತಿದ್ದರು ಎಂದರು.
ಆಂಧ್ರಪ್ರದೇಶ ವಿಶಾಖಪಟ್ಟಣದ ರಾಮಕೃಷ್ಣ ಮಿಷನ್ನ ಅಧ್ಯಕ್ಷ ಸ್ವಾಮಿ ಆತ್ಮವಿದಾನಂದಜೀ ಮಹಾರಾಜ್ ಮಾತನಾಡಿ, ಯುಗ ಯುಗದಲ್ಲಿಯೂ ಭಕ್ತಪರಿಪಾಲನೆಗಾಗಿ ಭಗವಂತ ಅವತರಿಸುವಂತೆ ರಾಮಕೃಷ್ಣರು ಈ ಕಲಿಯುಗದಲ್ಲಿ ಸಂಶಯರಾಕ್ಷ ಸನ ನಾಶಕ್ಕಾಗಿ ಅವತರಿಸಿದ್ದಾರೆ. ಭಗವಂತನ ಅಸ್ತಿತ್ವದ ಬಗ್ಗೆಯೇ ಸಂಶಯವಿರುವ ಇಂದಿನ ಜನರಿಗೆ ಸಾಧನೆಯ ಮೂಲಕ ಭಗವಂತನ ದರ್ಶನ ಪಡೆಯಬಹುದು ಎಂಬುದನ್ನು ಅವರು ತಮ್ಮ ಜೀವನದಲ್ಲಿಯೇ ತೋರಿಸಿಕೊಟ್ಟರು. ಸತ್ಯವಾಕ್ಯ ಪರಿಪಾಲನೆಯೇ ಕಲಿಯುಗದಲ್ಲಿ ಅತ್ಯಂತ ಶ್ರೇಷ್ಠವಾದ ಸಾಧನೆ ಎಂದರು.
ಕೊಲ್ಕತ್ತಾ ಬೇಲೂರು ಮಠದ ಸ್ವಾಮಿ ಶಿವಪೂರ್ಣಾನಂದಜೀ ಮಹಾರಾಜ್, ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಸ್ವಾಮಿಗಳು ಆಶೀರ್ವಚನ ನೀಡಿದರು. ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹರಿಹರ ವೀರಶೈವ-ಲಿಂಗಾಯತ ಪೀಠಾಧಿಪತಿ ಶ್ವಾಸಗುರು ವಚನಾನಂದ ಸ್ವಾಮೀಜಿ ಭಕ್ತರಿಗೆ ಯೋಗಾಸನ ಮತ್ತು ಪ್ರಾಣಾಯಾಮ ತರಗತಿ ಹಾಗೂ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀರವರು ಧ್ಯಾನದ ತರಗತಿ ನಡೆಸಿಕೊಟ್ಟರು.
ಬೆಂಗಳೂರಿನ ವಿವೇಕಹಂಸ ಬಳಗದರವರು ಭಗವನ್ನಾಮ ಸಂಕೀರ್ತತನೆ ನೆರವೇರಿಸಿಕೊಟ್ಟರು. ನೂರಕ್ಕೂ ಅಧಿಕ ಸ್ವಾಮೀಜಿಗಳು, ಮಾತಾಜೀಯವರು, ಡಾ.ಆರ್.ಎಂ.ಕುಬೇರಪ್ಪ, ಎ.ಎಂ.ನಾಯಕ, ಬಿ.ಬಿ.ನಂದ್ಯಾಲ, ಡಾ.ಚಂದ್ರಶೇಖರ ಕೇಲಗಾರ ಮತ್ತು ಇತರರು ಉಪಸ್ಥಿತರಿದ್ದರು.
ನಗರದ ಲಲಿತ ಭವನದಲ್ಲಿ ಶನಿವಾರ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ನ ಐದನೆಯ ವಾರ್ಷಿಕ ಸಮ್ಮೇಳನದಲ್ಲಿ ಶ್ರೀ ರಾಮಕೃಷ್ಣ ಚಿಂತನಧಾರೆ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಮಕೃಷ್ಣರ ಒಳಗಿರುವುದು ತಾಯಿ ಕಾಳಿಯಾಗಿದ್ದಾಳೆ. ಅನೇಕ ಭಕ್ತರು ರಾಮಕೃಷ್ಣರಲ್ಲಿ ತಾಯಿಯನ್ನೇ ಕಂಡಿದ್ದಾರೆ. ಅಹಂಕಾರಶೂನ್ಯ, ಕಾಮನಾಶೂನ್ಯರಾದ ರಾಮಕೃಷ್ಣರಿಗಿದ್ದ ಒಂದೇ ಕಾಮನೆಯೆಂದರೆ ಭಕ್ತರೊಂದಿಗಿನ ಒಡನಾಟ. ಊಹಿಸಲಸಾಧ್ಯವಾದ, ರೀತಿಯಲ್ಲಿ ಅವರ ಭಕ್ತವಾತ್ಸಲ್ಯ ಭಾವ ವ್ಯಕ್ತವಾಗುತ್ತಿತ್ತು. ತಾಯಿ ತನ್ನ ಮಗುವು ಅಪಾಯಕ್ಕೆ ಸಿಲುಕುವ ಮುನ್ನವೇ ರಕ್ಷಿಸುವಂತೆ ರಾಮಕೃಷ್ಣರು ಭಕ್ತರನ್ನು ರಕ್ಷಿಸುತ್ತಿದ್ದರು ಎಂದರು.
ಆಂಧ್ರಪ್ರದೇಶ ವಿಶಾಖಪಟ್ಟಣದ ರಾಮಕೃಷ್ಣ ಮಿಷನ್ನ ಅಧ್ಯಕ್ಷ ಸ್ವಾಮಿ ಆತ್ಮವಿದಾನಂದಜೀ ಮಹಾರಾಜ್ ಮಾತನಾಡಿ, ಯುಗ ಯುಗದಲ್ಲಿಯೂ ಭಕ್ತಪರಿಪಾಲನೆಗಾಗಿ ಭಗವಂತ ಅವತರಿಸುವಂತೆ ರಾಮಕೃಷ್ಣರು ಈ ಕಲಿಯುಗದಲ್ಲಿ ಸಂಶಯರಾಕ್ಷ ಸನ ನಾಶಕ್ಕಾಗಿ ಅವತರಿಸಿದ್ದಾರೆ. ಭಗವಂತನ ಅಸ್ತಿತ್ವದ ಬಗ್ಗೆಯೇ ಸಂಶಯವಿರುವ ಇಂದಿನ ಜನರಿಗೆ ಸಾಧನೆಯ ಮೂಲಕ ಭಗವಂತನ ದರ್ಶನ ಪಡೆಯಬಹುದು ಎಂಬುದನ್ನು ಅವರು ತಮ್ಮ ಜೀವನದಲ್ಲಿಯೇ ತೋರಿಸಿಕೊಟ್ಟರು. ಸತ್ಯವಾಕ್ಯ ಪರಿಪಾಲನೆಯೇ ಕಲಿಯುಗದಲ್ಲಿ ಅತ್ಯಂತ ಶ್ರೇಷ್ಠವಾದ ಸಾಧನೆ ಎಂದರು.
ಕೊಲ್ಕತ್ತಾ ಬೇಲೂರು ಮಠದ ಸ್ವಾಮಿ ಶಿವಪೂರ್ಣಾನಂದಜೀ ಮಹಾರಾಜ್, ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಸ್ವಾಮಿಗಳು ಆಶೀರ್ವಚನ ನೀಡಿದರು. ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹರಿಹರ ವೀರಶೈವ-ಲಿಂಗಾಯತ ಪೀಠಾಧಿಪತಿ ಶ್ವಾಸಗುರು ವಚನಾನಂದ ಸ್ವಾಮೀಜಿ ಭಕ್ತರಿಗೆ ಯೋಗಾಸನ ಮತ್ತು ಪ್ರಾಣಾಯಾಮ ತರಗತಿ ಹಾಗೂ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀರವರು ಧ್ಯಾನದ ತರಗತಿ ನಡೆಸಿಕೊಟ್ಟರು.
ಬೆಂಗಳೂರಿನ ವಿವೇಕಹಂಸ ಬಳಗದರವರು ಭಗವನ್ನಾಮ ಸಂಕೀರ್ತತನೆ ನೆರವೇರಿಸಿಕೊಟ್ಟರು. ನೂರಕ್ಕೂ ಅಧಿಕ ಸ್ವಾಮೀಜಿಗಳು, ಮಾತಾಜೀಯವರು, ಡಾ.ಆರ್.ಎಂ.ಕುಬೇರಪ್ಪ, ಎ.ಎಂ.ನಾಯಕ, ಬಿ.ಬಿ.ನಂದ್ಯಾಲ, ಡಾ.ಚಂದ್ರಶೇಖರ ಕೇಲಗಾರ ಮತ್ತು ಇತರರು ಉಪಸ್ಥಿತರಿದ್ದರು.