ಆ್ಯಪ್ನಗರ

ಸಹಾಯಕ ಕೋಚ್‌ ಆಗಿ ಮಂದಾರ ಶೆಟ್ಟಿ ಆಯ್ಕೆ

ಬ್ಯಾಡಗಿ (ಹಾವೇರಿ): ಪಟ್ಟಣದ ಯುವ ಕ್ರೀಡಾ ಪ್ರತಿಭೆ ಮಂದಾರ ಶೆಟ್ಟಿ ಜು.20 ರಿಂದ ಆರಂಭವಾದ ಪ್ರೋ ಕಬಡ್ಡಿ ಏಳನೇ ಆವೃತ್ತಿಯ (ಸೀಸನ್‌-7) ಹರಿಯಾಣ ಸ್ಟೀಲರ್ಸ್‌ ತಂಡದ ಸಹಾಯಕ ತರಬೇತುದಾರನಾಗಿ ಆಯ್ಕೆಯಾಗಿದ್ದಾರೆ.

Vijaya Karnataka 21 Jul 2019, 5:00 am
ಬ್ಯಾಡಗಿ (ಹಾವೇರಿ): ಪಟ್ಟಣದ ಯುವ ಕ್ರೀಡಾ ಪ್ರತಿಭೆ ಮಂದಾರ ಶೆಟ್ಟಿ ಜು.20 ರಿಂದ ಆರಂಭವಾದ ಪ್ರೋ ಕಬಡ್ಡಿ ಏಳನೇ ಆವೃತ್ತಿಯ (ಸೀಸನ್‌-7) ಹರಿಯಾಣ ಸ್ಟೀಲರ್ಸ್‌ ತಂಡದ ಸಹಾಯಕ ತರಬೇತುದಾರನಾಗಿ ಆಯ್ಕೆಯಾಗಿದ್ದಾರೆ.
Vijaya Karnataka Web mandara shetty as assistant coach
ಸಹಾಯಕ ಕೋಚ್‌ ಆಗಿ ಮಂದಾರ ಶೆಟ್ಟಿ ಆಯ್ಕೆ


ಈ ಮೊದಲು ಹಾವೇರಿ ಜಿಲ್ಲಾ ಅಮೆಚೂರ್‌ ಕಬಡ್ಡಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದ ಮಂದಾರ ಭಾರತೀಯ ಕ್ರೀಡಾ ಪ್ರಾಧಿಕಾರದ ಧಾರವಾಡ ಕ್ರೀಡಾ ವಸತಿ ನಿಲಯದಲ್ಲಿ ಆಟಗಾರನಾಗಿ ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದರು. ಇವರಿಗೆ ರೈಲ್ವೆ ಇಲಾಖೆ ಉದ್ಯೋಗ ನೀಡಿ ಗೌರವಿಸಿತ್ತು. ಬೆಂಗಳೂರಿನ ಅಚ್ಚು ಮತ್ತು ಗಾಲಿ (ರೈಲ್ವೇಸ್‌) ತಂಡದ ಆಟಗಾರನಾಗಿ ಸೇರ್ಪಡೆಗೊಂಡ ಮಂದಾರ್‌ ಇದೀಗ ಕೋಚ್‌ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಕೋಚ್‌ ಆಗಿ ಅನುಭವ: ಇಲ್ಲಿಯವರೆಗೂ ಆಟಗಾರನಾಗಿದ್ದ ಮಂದಾರ ತಮ್ಮ ಕ್ರೀಡಾ ಸಾಧನೆ ಮೊಟಕುಗೊಳಿಸದೇ ತರಬೇತುದಾರ ಆಗಬೇಕೆಂಬ ಮಹದಾಸೆಯೊಂದಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ಬೆಂಗಳೂರು ಸೆಂಟರ್‌ನಲ್ಲಿ ಎನ್‌ಐಎಸ್‌ ಪದವಿ ಪಡೆದುಕೊಂಡು ಹತ್ತು ಹಲವು ಪಂದ್ಯಾವಳಿಗಳಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಪಡೆದುಕೊಂಡರು.

ಒಲಿದ ಅದೃಷ್ಟ: ಪ್ರೋ ಕಬಡ್ಡಿ ಸೀಸನ್‌-7ರಲ್ಲಿ ಮಂದಾರ ಶೆಟ್ಟಿ ಅವರಿಗೆ ಸಹಾಯಕ ಕೋಚ್‌ ಆಗಿ ತಂಡವನ್ನು ಮುನ್ನಡೆಸಲು ಅವಕಾಶ ಸಿಕ್ಕಿದ್ದು ಅದೃಷ್ಟದ ಬಾಗಿಲು ತೆರೆದಿದೆ. ಪಟ್ಟಣದ ಕಬಡ್ಡಿ ಪ್ರತಿಭೆಯೊಂದು ಅತೀ ಚಿಕ್ಕ ವಯಸ್ಸಿನಲ್ಲಿಯೇ ಪ್ರೋ ಕಬಡ್ಡಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇಲ್ಲಿನ ಕ್ರೀಡಾಪಟುಗಳಿಗೆ ಎಲ್ಲಿಲ್ಲದ ಸಂತಸವನ್ನುಂಟು ಮಾಡಿದೆ. ಅವರ ಈ ಸಾಧನೆಗೆ ರಾಜ್ಯ ಅಮೆಚೂರ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಎಂ.ಹನುಮಂತೇಗೌಡ, ಕಾರ‍್ಯದರ್ಶಿ ಎ.ಮುನಿರಾಜು, ಸಂಘಟನಾ ಕಾರ‍್ಯದರ್ಶಿ ಬಿ.ಸಿ.ರಮೇಶ ಸೇರಿದಂತೆ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆ (ಬ್ಯಾಡಗಿ) ಪದಾಧಿಕಾರಿಗಳು ಹಾಗೂ ತೀರ್ಪುಗಾರರ ಮಂಡಳಿಯ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ