ಹಿರೇಕೆರೂರು : ಅನಾದಿ ಕಾಲದಿಂದ ನಮ್ಮ ಪೂರ್ವಜರು ಸತ್ಕಾರ್ಯಗಳ ಮೂಲಕ ಧರ್ಮಾಚರಣೆಗಳನ್ನು ಭಯ ಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದಾರೆ. ಅಂತಹ ಧರ್ಮಾಚರಣೆಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದ್ದು, ಮಠ-ಮಂದಿರಗಳು ಮಾನವನ ಬದುಕಿಗೆ ಕಣ್ಣು ಇದ್ದಂತೆ ಮಾಜಿ ಶಾಸಕ ಯು.ಬಿ.ಬಣಕಾರ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಚಿಕ್ಕೇರೂರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರ ದೇವರ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ದೈವಭಕ್ತಿಯನ್ನು ಆರಾಧಿಸುವ ಪರಂಪರೆ ನಮ್ಮದಾಗಬೇಕು. ಸಾಮಾಜಿಕವಾಗಿ, ಕೌಟುಂಬಿಕವಾಗಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ದೇವರ ಹಾಗೂ ದೇವಾಲಯಗಳ ಅವಶ್ಯಕತೆ ನಮಗಿದೆ. ಸಮಾಜದಲ್ಲಿ ನಾವು ಕೆಡಕನ್ನು ಮಾಡದೇ ಒಳ್ಳೆಯ ಕೆಲಸಗಳನ್ನು ಮಾಡಲು ಮಠ-ಮಂದಿರಗಳು ಮಾರ್ಗದರ್ಶನ ನೀಡುತ್ತವೆ. ದೇವಸ್ಥಾನಗಳಿಗೆ ಕಳಸ ಎಷ್ಟು ಭಕ್ತಿಯ ಪ್ರಾಮುಖ್ಯತೆ ಹೊಂದಿದೆಯೊ ಅದೇ ರೀತಿ ನಾವು ಮತ್ತು ಸಮಾಜ ಒಳ್ಳೆಯ ದಾರಿಯಲ್ಲಿ ನಡೆದರೆ ಮಾನವನಿಗೆ ಅದೇ ಭೂಷಣ ಎಂದು ಹೇಳಿದರು.
ಧರ್ಮಲೋಕ ಜೀವನವನ್ನು ಸುಸ್ಥಿತಿಯಲ್ಲಿಡುವ ಒಂದು ನ್ಯಾಯ ವಿಧಾನ ಇದ್ದಂತೆ. ನಮ್ಮ ನಡೆ ನುಡಿಗಳೇ ನಮ್ಮ ಧರ್ಮವನ್ನು ಹೇಳುತ್ತವೆ. ಅದನ್ನು ತಿಳಿದುಕೊಂಡೇ ನಡೆಯಬೇಕು, ನುಡಿಯಬೇಕು. ಧರ್ಮದಿಂದ ಸುಖ, ಸಂಪತ್ತು ಲಭಿಸುತ್ತದೆ. ಧರ್ಮದಿಂದಲೇ ಇಷ್ಟಾರ್ಥಗಳು ನಮಗೆ ದೊರೆಯುತ್ತವೆ. ದೇವರಲ್ಲಿ ನಂಬಿಕೆ ಇರಬೇಕು. ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ನುಡಿದರು.
ಗ್ರಾಮದಲ್ಲಿ ಭಕ್ತರ ಸಹಾಯದಿಂದ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಬಸವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಗೋಪುರ ಕಳಸಾರೋಹಣ ನೆರವೇರಿಸಿದ್ದರಿಂದ ಭಕ್ತರಲ್ಲಿ ಭಕ್ತಿಯನ್ನು ಇಮ್ಮಡಿಗೊಳಿಸಿದೆ ಎಂದು ಶ್ಲಾಘಿಸಿದರು.
ತೋಗರ್ಸಿ ಮಳಿಮಠದ ಶ್ರೀ ಮಹಾಂತ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ನಮ್ಮ ಸುತ್ತ, ಮುತ್ತ ಇರುವ ಪುರಾತನ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳು ಆಗಬೇಕಾಗಿದೆ ಎಂದು ನುಡಿದರು.
ಹಿರೇಮಾಗಡಿ ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಮಳೆಯಾಗದೆ ಬರಗಾಲ ಆವರಿಸಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಭಕ್ತರು ಧೃತಿಗೆಡದೆ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಳಿಸಿ ಕಳಸಾರೋಹಣ ನೆರವೇರಿಸಿ ಧಾರ್ಮಿಕ ಕಾರ್ಯಕ್ರಮ ಮಾಡುತ್ತಿರುವುದು ಭಕ್ತಿ ಇಮ್ಮಡಿಗೊಳಿಸಿದೆ ಎಂದರು.
ಮೃತ್ಯುಂಜಯ ಹಿರೇಮಠ ಅಧ್ಯಕ್ಷ ತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯ ಶಿವರಾಜ ಹರಿಜನ, ತಾಪಂ ಸದಸ್ಯೆ ಸುಲೋಚನಾ ಶಾಂತನಗೌಡ್ರ, ಎಪಿಎಂಸಿ ಸದಸ್ಯ ದೊಡ್ಡಗೌಡ ಪಾಟೀಲ್, ಗ್ರಾ.ಪಂ ಅಧ್ಯಕ್ಷ ಗೀತಾ ಕಡೇಮನಿ, ಹಿರಿಯ ನ್ಯಾಯವಾದಿ ಪಿ.ವಿ.ಕೆರೂಡಿ, ತಾ.ಪಂ ಮಾಜಿ ಅದ್ಯಕ್ಷ ಹೂವಪ್ಪ ರಾಗಿಕೊಪ್ಪದ, ಮುರಿಗಯ್ಯ ಹಿರೇಮಠ, ವೀರೇಶಪ್ಪ ಎಣ್ಣಿ, ಪಾರ್ವತೆಮ್ಮ ಚಂಚಿ, ಸೋಮಶೇಖರ ಎಣ್ಣಿ, ಬಸವರಾಜ ಮಂಗಣಿ, ವಸಂತ ದಂದೂರು, ಗಂಗಾಧರಪ್ಪ ಮುಗಳಗೇರಿ, ಪ್ರಭಣ್ಣ ಮಳಿಗಾರ, ವಿರೂಪಾಕ್ಷ ಪ್ಪ ದಂದೂರು, ಸಂತೋಷ್ ಚಂಚಿ, ಜಗದೀಶ ದಂದೂರು, ಸಂತೋಷ ಬಳಿಗಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಧರ್ಮಚಿಂತಕ ಎಂ.ಬಿ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರವಿಂದ ಬಳಿಗಾರ ಸ್ವಾಗತಿಸಿದರು, ಪವನ್ ಮುಗಳಗೇರಿ ನಿರೂಪಿಸಿದರು, ವಸಂತ ದಂದೂರು ವಂದಿಸಿದರು. ಇದೇ ಸಂದರ್ಭದಲ್ಲಿ ಲಿಂ.ಡಾ.ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಗಾನಸಭಾಭೂಷಣ ಪ್ರವಚನ ರತ್ನ, ಮುದಕಯ್ಯ ಸ್ವಾಮಿಗಳು ಇವರಿಂದ ಪ್ರವಚನ ಜರುಗಿತು.
ಅವರು ಶುಕ್ರವಾರ ತಾಲೂಕಿನ ಚಿಕ್ಕೇರೂರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವೇಶ್ವರ ದೇವರ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ದೈವಭಕ್ತಿಯನ್ನು ಆರಾಧಿಸುವ ಪರಂಪರೆ ನಮ್ಮದಾಗಬೇಕು. ಸಾಮಾಜಿಕವಾಗಿ, ಕೌಟುಂಬಿಕವಾಗಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ದೇವರ ಹಾಗೂ ದೇವಾಲಯಗಳ ಅವಶ್ಯಕತೆ ನಮಗಿದೆ. ಸಮಾಜದಲ್ಲಿ ನಾವು ಕೆಡಕನ್ನು ಮಾಡದೇ ಒಳ್ಳೆಯ ಕೆಲಸಗಳನ್ನು ಮಾಡಲು ಮಠ-ಮಂದಿರಗಳು ಮಾರ್ಗದರ್ಶನ ನೀಡುತ್ತವೆ. ದೇವಸ್ಥಾನಗಳಿಗೆ ಕಳಸ ಎಷ್ಟು ಭಕ್ತಿಯ ಪ್ರಾಮುಖ್ಯತೆ ಹೊಂದಿದೆಯೊ ಅದೇ ರೀತಿ ನಾವು ಮತ್ತು ಸಮಾಜ ಒಳ್ಳೆಯ ದಾರಿಯಲ್ಲಿ ನಡೆದರೆ ಮಾನವನಿಗೆ ಅದೇ ಭೂಷಣ ಎಂದು ಹೇಳಿದರು.
ಧರ್ಮಲೋಕ ಜೀವನವನ್ನು ಸುಸ್ಥಿತಿಯಲ್ಲಿಡುವ ಒಂದು ನ್ಯಾಯ ವಿಧಾನ ಇದ್ದಂತೆ. ನಮ್ಮ ನಡೆ ನುಡಿಗಳೇ ನಮ್ಮ ಧರ್ಮವನ್ನು ಹೇಳುತ್ತವೆ. ಅದನ್ನು ತಿಳಿದುಕೊಂಡೇ ನಡೆಯಬೇಕು, ನುಡಿಯಬೇಕು. ಧರ್ಮದಿಂದ ಸುಖ, ಸಂಪತ್ತು ಲಭಿಸುತ್ತದೆ. ಧರ್ಮದಿಂದಲೇ ಇಷ್ಟಾರ್ಥಗಳು ನಮಗೆ ದೊರೆಯುತ್ತವೆ. ದೇವರಲ್ಲಿ ನಂಬಿಕೆ ಇರಬೇಕು. ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ನುಡಿದರು.
ಗ್ರಾಮದಲ್ಲಿ ಭಕ್ತರ ಸಹಾಯದಿಂದ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಬಸವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಗೋಪುರ ಕಳಸಾರೋಹಣ ನೆರವೇರಿಸಿದ್ದರಿಂದ ಭಕ್ತರಲ್ಲಿ ಭಕ್ತಿಯನ್ನು ಇಮ್ಮಡಿಗೊಳಿಸಿದೆ ಎಂದು ಶ್ಲಾಘಿಸಿದರು.
ತೋಗರ್ಸಿ ಮಳಿಮಠದ ಶ್ರೀ ಮಹಾಂತ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ನಮ್ಮ ಸುತ್ತ, ಮುತ್ತ ಇರುವ ಪುರಾತನ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳು ಆಗಬೇಕಾಗಿದೆ ಎಂದು ನುಡಿದರು.
ಹಿರೇಮಾಗಡಿ ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಮಳೆಯಾಗದೆ ಬರಗಾಲ ಆವರಿಸಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಭಕ್ತರು ಧೃತಿಗೆಡದೆ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಳಿಸಿ ಕಳಸಾರೋಹಣ ನೆರವೇರಿಸಿ ಧಾರ್ಮಿಕ ಕಾರ್ಯಕ್ರಮ ಮಾಡುತ್ತಿರುವುದು ಭಕ್ತಿ ಇಮ್ಮಡಿಗೊಳಿಸಿದೆ ಎಂದರು.
ಮೃತ್ಯುಂಜಯ ಹಿರೇಮಠ ಅಧ್ಯಕ್ಷ ತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯ ಶಿವರಾಜ ಹರಿಜನ, ತಾಪಂ ಸದಸ್ಯೆ ಸುಲೋಚನಾ ಶಾಂತನಗೌಡ್ರ, ಎಪಿಎಂಸಿ ಸದಸ್ಯ ದೊಡ್ಡಗೌಡ ಪಾಟೀಲ್, ಗ್ರಾ.ಪಂ ಅಧ್ಯಕ್ಷ ಗೀತಾ ಕಡೇಮನಿ, ಹಿರಿಯ ನ್ಯಾಯವಾದಿ ಪಿ.ವಿ.ಕೆರೂಡಿ, ತಾ.ಪಂ ಮಾಜಿ ಅದ್ಯಕ್ಷ ಹೂವಪ್ಪ ರಾಗಿಕೊಪ್ಪದ, ಮುರಿಗಯ್ಯ ಹಿರೇಮಠ, ವೀರೇಶಪ್ಪ ಎಣ್ಣಿ, ಪಾರ್ವತೆಮ್ಮ ಚಂಚಿ, ಸೋಮಶೇಖರ ಎಣ್ಣಿ, ಬಸವರಾಜ ಮಂಗಣಿ, ವಸಂತ ದಂದೂರು, ಗಂಗಾಧರಪ್ಪ ಮುಗಳಗೇರಿ, ಪ್ರಭಣ್ಣ ಮಳಿಗಾರ, ವಿರೂಪಾಕ್ಷ ಪ್ಪ ದಂದೂರು, ಸಂತೋಷ್ ಚಂಚಿ, ಜಗದೀಶ ದಂದೂರು, ಸಂತೋಷ ಬಳಿಗಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಧರ್ಮಚಿಂತಕ ಎಂ.ಬಿ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರವಿಂದ ಬಳಿಗಾರ ಸ್ವಾಗತಿಸಿದರು, ಪವನ್ ಮುಗಳಗೇರಿ ನಿರೂಪಿಸಿದರು, ವಸಂತ ದಂದೂರು ವಂದಿಸಿದರು. ಇದೇ ಸಂದರ್ಭದಲ್ಲಿ ಲಿಂ.ಡಾ.ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಗಾನಸಭಾಭೂಷಣ ಪ್ರವಚನ ರತ್ನ, ಮುದಕಯ್ಯ ಸ್ವಾಮಿಗಳು ಇವರಿಂದ ಪ್ರವಚನ ಜರುಗಿತು.