ಆ್ಯಪ್ನಗರ

ದೇಶದ ಜನತೆಯಿಂದ ಪ್ರಬುದ್ಧ ತೀರ್ಮಾನ

ಬ್ಯಾಡಗಿ : ದೇಶದಲ್ಲಿ ಮತ್ತೊಮ್ಮೆ ಪ್ರಜಾಪ್ರಭುತ್ವಕ್ಕೆ ಜಯ ದೊರೆತಿದೆ. ಪ್ರತಿಪಕ್ಷ ಗಳು ಟೀಕೆಗಳ ಸಾಗರವನ್ನೇ ಹರಿಸಿದರೂ ದೇಶದ ಜನತೆ ಪ್ರಬುದ್ಧರಾಗಿ ಮತ ಚಲಾಯಿಸಿದ್ದು, ಮೋದಿಯ ಆಡಳಿದಲ್ಲಿ ದೇಶ ಮತ್ತೊಮ್ಮೆ ಸುಭದ್ರವಾಗಿರಲಿದೆ ಎಂದು ವರ್ತಕ ಬಸಣ್ಣ ಕಡೆಕೊಪ್ಪ ಹೇಳಿದರು.

Vijaya Karnataka 25 May 2019, 5:00 am
ಬ್ಯಾಡಗಿ : ದೇಶದಲ್ಲಿ ಮತ್ತೊಮ್ಮೆ ಪ್ರಜಾಪ್ರಭುತ್ವಕ್ಕೆ ಜಯ ದೊರೆತಿದೆ. ಪ್ರತಿಪಕ್ಷ ಗಳು ಟೀಕೆಗಳ ಸಾಗರವನ್ನೇ ಹರಿಸಿದರೂ ದೇಶದ ಜನತೆ ಪ್ರಬುದ್ಧರಾಗಿ ಮತ ಚಲಾಯಿಸಿದ್ದು, ಮೋದಿಯ ಆಡಳಿದಲ್ಲಿ ದೇಶ ಮತ್ತೊಮ್ಮೆ ಸುಭದ್ರವಾಗಿರಲಿದೆ ಎಂದು ವರ್ತಕ ಬಸಣ್ಣ ಕಡೆಕೊಪ್ಪ ಹೇಳಿದರು.
Vijaya Karnataka Web HVR-24BYD1A
ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಬ್ಯಾಡಗಿಯಲ್ಲಿ ಆಟೊ ಚಾಲಕರ ಸಂಘದಿಂದ ವಿಜಯೋತ್ಸವ ಆಚರಿಸಿ, ಪ್ರಧಾನಿ ಮೋದಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು.


ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದ ಹಿನ್ನಲೆಯಲ್ಲಿ ಪಟ್ಟಣದ ಆಟೊ ಚಾಲಕರ ಸಂಘ ಹಳೆ ಪುರಸಭೆ ಹತ್ತಿರ ಏರ್ಪಡಿಸಿದ್ದ ವಿಜಯೋತ್ಸವ ಕಾರ‍್ಯಕ್ರಮದಲ್ಲಿ ಸಿಹಿ ಹಂಚಿ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಅವರು ಮಾತನಾಡಿದರು.

ಮೌನೇಶ ಬಡಿಗೇರ ಮಾತನಾಡಿ, ದೇಶ ಇಂದು ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ ಎಂದರೆ ಅದಕ್ಕೆ ಮೋದಿಯ ದೂರದೃಷ್ಟಿಯುಳ್ಳ ಭ್ರಷ್ಟಾಚಾರ ಮುಕ್ತ ಆಡಳಿತವೆ ಕಾರಣ. ಮೋದಿಯ 5 ವರ್ಷದ ಆಡಳಿತಕ್ಕೆ ಜನರೂ ನೂರಕ್ಕೆ ನೂರರಷ್ಟು ಅಂಕ ನೀಡಿದ್ದು ಅವರ ಜನಪ್ರಿಯತೆಗೆ ಸಾಕ್ಷಿ ಎಂದರು.

ಆಟೊ ಸಂಘದ ಸದಸ್ಯ ಪ್ರಕಾಶ ಬೇನಾಳ ಮಾತನಾಡಿ, ಮೋದಿಯೆಂಬ ವಿಶ್ವನಾಯಕನ ಹೊಡೆತಕ್ಕೆ ಸಿಲುಕಿ 2014 ರಿಂದಲೇ ಕಾಂಗ್ರೆಸ್‌ ಹಿನ್ನಡೆ ಶುರುವಾಗಿದ್ದು ಕಾಂಗ್ರೆಸ್‌ ಮುಕ್ತ ಭಾರತದ ಕನಸು ನನಸಾಗಲು ಇನ್ನೇನು ಕೇಲವೆ ವರ್ಷಗಳು ಬಾಕಿ ಉಳಿದಿವೆ ಎಂದರು.

ಆಟೊ ಸಂಘದ ಸದಸ್ಯರಾದ ಚಂದ್ರು ಗುಂಡೇನಹಳ್ಳಿ, ರಾಜು ಬೊಮ್ಮನಾಳ, ಸಿದ್ಧು ಹಿರೇಮಠ, ದೇವ ರಾಜ ಅರ್ದ ಗೇರಿ ಅರುಣ ಅರ್ದಗೇರಿ ಕಲ್ಲಪ್ಪ ದೇವರಗುಡ್ಡ, ಹರೀಶ ಸುಣಗಾರ, ಸುನಿಲ್‌ ಪೂಜಾರ ಬಸವರಾಜ ಹಾನ ಗಲ್‌, ರವಿ ತರೆದಹಳ್ಳಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ