ಆ್ಯಪ್ನಗರ

ದಿಂಗಾಲೇಶ್ವರ ಶ್ರೀ ಉತ್ತರಾಧಿಕಾರಿಯಾಗಲಿ: ಓಲೇಕಾರ

ಹಾವೇರಿ: ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿಯಾಗಲು ದಿಂಗಾಲೇಶ್ವರ ಸ್ವಾಮೀಜಿಗೆ ಸಮಿತಿಯವರು ಅವಕಾಶ ಮಾಡಿಕೊಡಬೇಕೆಂದು ಹಾವೇರಿ ವಿಧಾನಸಭೆ ಶಾಸಕ ನೆಹರು ಓಲೇಕಾರ ಒತ್ತಾಯಿಸಿದರು.

Vijaya Karnataka 22 Feb 2020, 5:00 am
ಹಾವೇರಿ: ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿಯಾಗಲು ದಿಂಗಾಲೇಶ್ವರ ಸ್ವಾಮೀಜಿಗೆ ಸಮಿತಿಯವರು ಅವಕಾಶ ಮಾಡಿಕೊಡಬೇಕೆಂದು ಹಾವೇರಿ ವಿಧಾನಸಭೆ ಶಾಸಕ ನೆಹರು ಓಲೇಕಾರ ಒತ್ತಾಯಿಸಿದರು.
Vijaya Karnataka Web may dingaleshwara be the successor of sri olekkara
ದಿಂಗಾಲೇಶ್ವರ ಶ್ರೀ ಉತ್ತರಾಧಿಕಾರಿಯಾಗಲಿ: ಓಲೇಕಾರ


ನಗರದ ಪ್ರವಾಸಿ ಮಂದಿರದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಫೆ.23 ರಂದು ಮೂರುಸಾವಿರ ಮಠದಲ್ಲಿನಡೆಯುವ ಸತ್ಯದರ್ಶನ ಸಭೆಯಲ್ಲಿದಿಂಗಾಲೇಶ್ವರ ಅವರಿಗೆ ಉತ್ತರಾಧಿಕಾರ ನೀಡಬೇಕೆಂದು ಒತ್ತಾಯಿಸಲು ಹಾವೇರಿ ತಾಲೂಕು ಮತ್ತು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿಭಕ್ತರು ಹೋಗುತ್ತಿದ್ದಾರೆ. ಅವರೊಂದಿಗೆ ನಾನು ಹುಬ್ಬಳ್ಳಿಗೆ ಹೋಗಿ ದಿಂಗಾಲೇಶ್ವರ ಶ್ರೀಗಳಿಗೆ ಉತ್ತರಾಧಿಕಾರ ನೀಡಬೇಕು ಎಂದು ಸಮಿತಿಗೆ ಒತ್ತಾಯಿಸುತ್ತೇನೆ ಎಂದರು.

ದೇಶದ್ರೋಹ ಹೇಳಿಕೆ:
ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿಅಮೂಲ್ಯ ಎಂಬ ಯುವತಿ ಪಾಕ್‌ ಪರ ಘೋಷಣೆ ಕೂಗಿದ್ದು ದೇಶದ್ರೋಹಿ ಹೇಳಿಕೆಯಾಗಿದೆ. ಕಾರ್ಯಕ್ರಮದ ಆಯೋಜಿಕರೇ ಹೇಳಿಕೆ ಖಂಡಿಸಿ ಆ ಮಹಿಳೆಯಿಂದ ಮೈಕ್‌ ಕಸಿದು ವೇದಿಕೆಯಿಂದ ಹೊರಗೆ ಕಳಿಸಿದ್ದಾರೆ. ದೇಶದಲ್ಲಿಇದ್ದುಕೊಂಡು ಇನ್ನೊಂದು ದೇಶದ ಪರ ಘೋಷಣೆ ಕೂಗುವುದು ಸರಿಯಲ್ಲ. ದೇಶದಲ್ಲಿಅಶಾಂತಿ ಉಂಟು ಮಾಡುವವರಿಗೆ ಸರಕಾರ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಬೆಳೆ ಹಾನಿ ಪರಿಹಾರ:
ಜಿಲ್ಲೆಯಲ್ಲಿಬೆಳೆ ಹಾನಿ ಪರಿಹಾರ ಸರಿಯಾಗಿ ರೈತರಿಗೆ ಮುಟ್ಟಿಲ್ಲಎಂಬ ದೂರುಗಳು ಬಂದಿವೆ. ಅದರಲ್ಲೂಹಾವೇರಿ ತಾಲೂಕಿನಲ್ಲಿಯೂ ಇವೆ. ಶೀಘ್ರದಲ್ಲಿಯೇ ಬೆಳೆಹಾನಿ ಪರಿಹಾರ ಮಾಹಿತಿ ತರಿಸಿಕೊಂಡು ಶೀಘ್ರದಲ್ಲಿತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ರೈತರಿಗೆ ಬೆಳೆಹಾನಿ ಪರಿಹಾರ ಸಿಗುವಂತೆ ಮಾಡುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ