ಆ್ಯಪ್ನಗರ

ರೈತ ಸಮಸ್ಯೆ ಪರಿಹಾರಕ್ಕೆ ಸಭೆ

ಹಾವೇರಿ : ನಗರದ ತಹಶೀಲ್ದಾರ ಕಛೇರಿಯಲ್ಲಿ ರೈತರ ಸಮಸ್ಯೆಗಳ ಪರಿಹಾರ ಕ್ರಮಕ್ಕಾಗಿ ಉಪವಿಭಾಗಾಧಿಕಾರಿ ಎನ್‌. ತಿಪ್ಪೇಸ್ವಾಮಿ ಅವರ ಅಧ್ಯಕ್ಷ ತೆಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರ ಸಭೆ ನಡೆಯಿತು.

Vijaya Karnataka 6 Jul 2019, 5:00 am
ಹಾವೇರಿ : ನಗರದ ತಹಶೀಲ್ದಾರ ಕಛೇರಿಯಲ್ಲಿ ರೈತರ ಸಮಸ್ಯೆಗಳ ಪರಿಹಾರ ಕ್ರಮಕ್ಕಾಗಿ ಉಪವಿಭಾಗಾಧಿಕಾರಿ ಎನ್‌. ತಿಪ್ಪೇಸ್ವಾಮಿ ಅವರ ಅಧ್ಯಕ್ಷ ತೆಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರ ಸಭೆ ನಡೆಯಿತು.
Vijaya Karnataka Web meeting for farmer problem solving
ರೈತ ಸಮಸ್ಯೆ ಪರಿಹಾರಕ್ಕೆ ಸಭೆ


ಈ ವೇಳೆ ರೈತ ಮುಖಂಡ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ಈ ಹಿಂದೆ ಹಲವಾರು ಪ್ರತಿಭಟನೆಗಳ ಮೂಲಕ ರೈತ ಸಂಘಟನೆಗಳು ಜಿಲ್ಲೆಯ ರೈತರ ಪರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದು, ಅನ್ನದಾತನ ಸಮಸ್ಯೆಗಳಿಗೆ ಸರ್ಕಾರದ ಅಧಿಕಾರಿಗಳಿಂದ ಸರಿಯಾದ ಮಾರ್ಗದರ್ಶನ ಸಿಕ್ಕಿಲ್ಲ ಎಂದರು.

ಬರಗಾಲದ ಪರಿಸ್ಥಿತಿಯಲ್ಲಿ ರೈತರಿಗೆ ಯಾವುದೇ ಬ್ಯಾಂಕ್‌-ಖಾಸಗಿ ಕಂಪನಿಗಳು ನೋಟಿಸ್‌ ನೀಡಬಾರದಂತೆ ಮುಖ್ಯಮಂತ್ರಿಗಳು ಸೂಚಿಸಿದರು ಬ್ಯಾಂಕ್‌ನಿಂದ ರೈತರಿಗೆ ನಿರಂತರ ನೋಟಿಸ್‌ ಬರುತ್ತಿವೆ ಎಂದರು.

ರೈತರು ಯಾವುದೇ ಮಜಾ ಮಾಡಲು ಸಾಲ ಮಾಡಿಲ್ಲ. ಜೀವನ ನಡೆಸಲು ಹಣದ ತೊಂದರೆಯಿಂದ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ರೈತರಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದು. ಮುದ್ರಾ ಯೋಜನೆಗೆ ಸಾಲ ಕೊಡಲು ಬ್ಯಾಂಕ್‌ಗಳು ವಿಳಂಬ ಮಾಡದೇ ಹೈನುಗಾರಿಕೆಗೆ ಸಾಲ ನೀಡಬೇಕು ಎಂದು ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಎನ್‌. ತಿಪ್ಪೇಸ್ವಾಮಿ ಮಾತನಾಡಿ, ಬ್ಯಾಂಕ್‌ ಹಾಗೂ ಪೈನಾನ್ಸ್‌ ಕಂಪನಿಯವರು ರೈತರಿಗೆ ಯಾವುದೇ ಕಡ್ಡಾಯ ಸಾಲ ವಸೂಲಾತಿ ಮಾಡಬಾರದು. ರೈತರ ಜೊತೆ ಸ್ಪಂದಿಸಿ ಯಾವುದೇ ರೀತಿ ಸಾಲ ವಸೂಲಾತಿಗಾಗಿ ಕಿರಿಕುಳ ನೀಡಬಾರದು. ಇಂತಹ ಘಟನೆ ನಡೆದರೆ ದೂರವಾಣಿಯ ಮೂಲಕ ನಮ್ಮ ಗಮನಕ್ಕೆ ತನ್ನಿರಿ ಅವರ ಮೇಲೆ ಸೂಕ್ತ ಕ್ರಮಕ್ಕೆ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಎಲ್ಲ ಖಾಸಗಿ ಫೈನಾನ್ಸ್‌ ಕಂಪನಿಯ ಮುಖ್ಯಸ್ಥರ ಸಭೆಯನ್ನು ನಾಲ್ಕೈದು ದಿನಗಳಲ್ಲಿ ಮತ್ತೆ ಸಭೆ ಸೇರಿ ಅವರಿಗೆ ನಿರ್ದೆಶನ ನೀಡಲಾಗುವುದು ಎಂದರು.

ರೈತರ ಮುಖಂಡರಾದ ಚಂದ್ರಶೇಖರ ರೂಪಿನ, ಫಕ್ಕಿರೇಶ ಕಾಳಿ, ಜಗದೀಶ ಕೂಸಗೂರ, ಸಿದ್ದಪ್ಪ ನೂಲಗೇರಿ, ಚಂದ್ರು ಗುತ್ತೂರ, ಹನುಮಂತಪ್ಪ ಸುಣಗಾರ, ಬಿಡಿ ಪಾಟೀಲ, ಮಂಜಯ್ಯ ಹಿರೇಮಠ, ಬಸವರಾಜ ಪಾಣಿಗಟ್ಟಿ, ಫಕ್ಕೀರಪ್ಪ ಒಡಯಂಪೂರ ಸೇರಿದಂತೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ