ಆ್ಯಪ್ನಗರ

ಸಚಿವ ಮಾಧುಸ್ವಾಮಿ ಕೈ ಬಿಡಲು ಒತ್ತಾಯ

ಹಿರೇಕೆರೂರು: ಕೋಲಾರದಲ್ಲಿಕೆರೆ ವೀಕ್ಷಣೆಗೆ ಬಂದಾಗ ಮಾಧುಸ್ವಾಮಿಯವರು ರೈತ ಮಹಿಳೆಗೆ ಏಕವಚನದಲ್ಲಿಮಾತನಾಡಿ, ರಾಜ್ಯದ ಮಹಿಳೆಯರಿಗೆ ಅಗೌರವ ತೋರಿದ್ದಾರೆ. ಇಂತಹ ಸಚಿವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರೇಕೆರೂರು ಘಟಕದವತಿಯಿಂದ ತಹಸೀಲ್ದಾರ್‌ ಕೆ.ಗುರುಬಸವರಾಜ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 23 May 2020, 5:00 am
ಹಿರೇಕೆರೂರು: ಕೋಲಾರದಲ್ಲಿಕೆರೆ ವೀಕ್ಷಣೆಗೆ ಬಂದಾಗ ಮಾಧುಸ್ವಾಮಿಯವರು ರೈತ ಮಹಿಳೆಗೆ ಏಕವಚನದಲ್ಲಿಮಾತನಾಡಿ, ರಾಜ್ಯದ ಮಹಿಳೆಯರಿಗೆ ಅಗೌರವ ತೋರಿದ್ದಾರೆ. ಇಂತಹ ಸಚಿವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರೇಕೆರೂರು ಘಟಕದವತಿಯಿಂದ ತಹಸೀಲ್ದಾರ್‌ ಕೆ.ಗುರುಬಸವರಾಜ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web minister madhuswamy insists on leaving his hand
ಸಚಿವ ಮಾಧುಸ್ವಾಮಿ ಕೈ ಬಿಡಲು ಒತ್ತಾಯ


ಜಿಲ್ಲಾಧ್ಯಕ್ಷ ಆರ್‌.ವಿ.ಕೆಂಚಳ್ಳೆರ ಮಾತನಾಡಿ, ಏಕ ವಚನದಲ್ಲಿಅಗೌರವದಿಂದ ಕಂಡು ಈಗ ಕಾಟಾಚಾರಕ್ಕೆ ಕ್ಷಮೆಯಾಚಿಸಿದ ಮಂತ್ರಿಗಳನ್ನು ಮಾನ್ಯ ಮುಖ್ಯಮಂತ್ರಿಗಳು ಸಚಿವ ಸಂಪುಟದಿಂದ ಕೈಬಿಡಬೇಕು. ಸಚಿವರಾಗಿ ಸಾರ್ವಜನಿಕ ಸೇವೆ ಸಲ್ಲಿಸುವರು ದುರಂಕಾರದ ಮಾತುಗಳನ್ನು ಆಡಿರುವುದು ರೈತ ಸಂಘಟನೆ ಬಲವಾಗಿ ಖಂಡಿಸುತ್ತದೆ ಎಂದರು.

ಆರ್‌.ವಿ.ಕೆಂಚಳ್ಳೇರ, ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಹನುಮಂತಪ್ಪ ಜೋಗೇರ, ಶಾಂತನಗೌಡ ಪಾಟೀಲ, ಶಂಕರಗೌಡ ಮಕ್ಕಳ್ಳಿ, ಯಶವಂತ ತಿಮ್ಮಲಾಪುರ, ಕಲ್ಲಪ್ಪ ಅಣ್ಣಿಗೇರಿ, ಈರಪ್ಪ ಮಳ್ಳುರ, ಈರನಗೌಡ ಬಾಳಬಿಂಡ, ನಾಗರಾಜ ನೀರಲಗಿ, ಬಸವರಾಜ ಗುಮ್ಮನಾಳ, ಜಗದೀಶ ಮುದಿಗೌಡ್ರ ಮತ್ತಿತರರು ಇದ್ದರು.

ಫೊಟೋ ಶೀರ್ಷಿಕೆ: ಮೇ.22.ಎಚ್‌.ಕೆ.ಆರ್‌. 01-ಕೋಲಾರ ಸಚಿವ ಮಾಧುಸ್ವಾಮಿಯವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರೇಕೆರೂರು ಘಟಕದ ವತಿಯಿಂದ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ