ಆ್ಯಪ್ನಗರ

‘ಬಿಎಸ್‌ವೈ ಸಿಎಂ ಆಗಿ ಇರೋವರೆಗೆ ನಾನು ಮಂತ್ರಿ ಆಗಲ್ಲ’; ಬಸನ ಗೌಡ ಪಾಟೀಲ್‌ ಖಡಕ್‌ ನುಡಿ

ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಈಗ ಮೋದಿ ಮತ್ತು ಬಿಜೆಪಿ ಗಾಳಿ ಐತಿ. ಅದು ಡಲ್‌ ಆದ್ರ ಸೋನಿಯಾ ಮಾತಾಕಿ ಜೈ, ಅಪ್ಪಾಜಿ ದೇವೇಗೌಡಾ ಕಿ ಜೈ ಅಂತಾರ. ಅಮಿತ್‌ ಶಾ ಭಾಷಣವನ್ನು ಮಾಧ್ಯಮದವರು ತಮ್ಮ ಮನಸ್ಸಿಗೆ ಬಂದಂಗ ತಿಳಕೊಂಡು ಹೇಳ್ತಾ ಇದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Vijaya Karnataka Web 19 Jan 2021, 8:23 am
ಹಾವೇರಿ: ಸಿಎಂ ಬಿಎಸ್‌ವೈ ವಿರುದ್ಧ ಪದೇಪದೇ ಕೆಂಡಕಾರುತ್ತಿರೋ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇದೀಗ ಮತ್ತೊಮ್ಮೆ ಗುಡುಗಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ನಾನು ಮಂತ್ರಿಯಾಗುವುದಿಲ್ಲ. ನನಗೆ ನನ್ನದೇ ಆದ ತತ್ವ ಸಿದ್ಧಾಂತಗಳಿವೆ. ಕಾಲ ಬಂದಾಗ ಎಲ್ಲವನ್ನೂ ಹೇಳುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
Vijaya Karnataka Web basana gowda pateel yatnal


ಹಾವೇರಿಯಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಲ್ಲಿ ಸಿಎಂ ಯಡಿಯೂರಪ್ಪ ಮೂಲ ಬಿಜೆಪಿಗರಿಗೆ ಅನ್ಯಾಯ ಮಾಡಿದ್ದಾರೆ. ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಿಲ್ಲ. ಇದರಲ್ಲಿ ದಿಲ್ಲಿ ಹೈಕಮಾಂಡ್‌ ಪಾತ್ರ ಏನೂ ಇಲ್ಲ. ಕೇಳಿದರೆ ದಿಲ್ಲಿ ಕಡೆಗೆ ಬೆರಳು ಮಾಡುವುದು ಸರಿಯಲ್ಲ ಆಕ್ಷೇಪ ವ್ಯಕ್ತಪಡಿಸಿದರು.
‘ಆ ದೇವ್ರು ನಮಗೆ ಅಧಿಕಾರ ಕೊಟ್ಟ ಅರ್ಧದಲ್ಲೇ ಕಿತ್ತುಕೊಂಡ, ಇಲ್ಲದೇ ಹೋಗಿದ್ರೆ..’; ಎಚ್‌ಡಿ ರೇವಣ್ಣ
ಏಪ್ರಿಲ್‌ಗೆ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಇರುವುದಿಲ್ಲ ಎನ್ನುವ ಸಿದ್ಧರಾಮಯ್ಯ ಅವರ ಹೇಳಿಕೆಯಲ್ಲಿ ನಿಜ ಇರಬೇಕು. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಮಧ್ಯೆ ಸಂಬಂಧ ಚಲೋ ಐತಿ. ಪರಸ್ಪರ ಮಾತನಾಡಿಕೊಂಡಿರಬಹುದು ಈ ಮಾಹಿತಿ ಆಧರಿಸಿಯೇ ಬದಲಾವಣೆ ಬಗ್ಗೆ ಹೇಳಿರಬಹುದು ಎಂದರು. ಇನ್ನು ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಈಗ ಮೋದಿ ಮತ್ತು ಬಿಜೆಪಿ ಗಾಳಿ ಐತಿ. ಅದು ಡಲ್‌ ಆದ್ರ ಸೋನಿಯಾ ಮಾತಾಕಿ ಜೈ, ಅಪ್ಪಾಜಿ ದೇವೇಗೌಡಾ ಕಿ ಜೈ ಅಂತಾರ. ಅಮಿತ್‌ ಶಾ ಭಾಷಣವನ್ನು ಮಾಧ್ಯಮದವರು ತಮ್ಮ ಮನಸ್ಸಿಗೆ ಬಂದಂಗ ತಿಳಕೊಂಡು ಹೇಳ್ತಾ ಇದ್ದಾರೆ ಎಂದರು.
‘ನಾರಾಯಣ ಗೌಡ ಯಾರು ಗೊತ್ತಿಲ್ವಾ?’; ಸಚಿವ ಸುಧಾಕರ್‌ ಕಾರು ತಡೆದು ಘೇರಾವ್ ಹಾಕಿದ ಕರವೇ ಕಾರ್ಯಕರ್ತರು..!
ಇನ್ನು ‘ಒಂದೆರಡು ಟಿ.ವಿ. ಅದಾವ್‌, ಅವರಿಗೆ ರಾಜಾಹುಲಿ ಅಂದ್ರ ಬಾಳ ಪ್ರೀತಿ. ಸೂರ್ಯ ಚಂದ್ರ ಇರುವವರೆಗೂ ಯಡಿಯೂರಪ್ಪ ಸಿಎಂ ಆಗೇ ಇರ್ತಾರ ಅಂತ ಡಂಗುರ ಸಾರ್ತಾರ ಎಂದು ಲೇವಡಿ ಮಾಡಿದರು. ಅಲ್ಲದೇ ಸಚಿವ ಯೋಗೇಶ್ವರ ಹ್ಯಾಂಗ್‌ ಮಂತ್ರಿ ಆದ್ರು ಅನ್ನೋದು ಎಲ್ಲರಿಗೂ ಗೊತ್ತೈತಿ. ಸಿಡಿ ವಿಚಾರ ಯೋಗೇಶ್ವರ ಮತ್ತು ಡಿ.ಕೆ. ಶಿವಕುಮಾರ ಅವರಿಗೇ ಗೊತ್ತು. ಯಾರು ಅದರ ಬಗ್ಗೆ ಮಾತಾಡ್ತಾರೊ ಅವರಿಗೇ ಗೊತ್ತೈತಿ ಅವರನ್ನ ಕೇಳ್ರಿ ಎಂದು ತಿಳಿಸಿದರು.
ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಭಾಳ ಉಪದ್ಯಾಪಿ ಅದಾನ. ಬಾಳಾ ಠಾಕ್ರೆ ಹೆಸರು ಕೆಡಸಾಕ ನಿಂತಾನ. ಹಿಂದುತ್ವ ಬಿಟ್ಟ, ಈಗ ಭಾಷಾ ಪ್ರಚೋದನೆ ಮೂಲಕ ರಾಜಕೀಯ ಸ್ಟಂಟ್‌ ನಡಿಸ್ಯಾನ.
ಬಸನಗೌಡ ಪಾಟೀಲ ಯತ್ನಾಳ, ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ