ಆ್ಯಪ್ನಗರ

ಬಿಜೆಪಿಯಿಂದ ಮಾದರಿ ಸರಕಾರ: ಬಳ್ಳಾರಿ

ಬ್ಯಾಡಗಿ: ಆರ್ಥಿಕ ಸಂಕಷ್ಟ, ಚೀನಾದೊಡನೆ ಯುದ್ಧ ಭೀತಿ ಇಂತಹ ಸಂಕಷ್ಟಗಳ ನಡುವೆಯೂ ಪ್ರಧಾನಿ ಮೋದಿ ಅವರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಮೂಲಕ ಮಾದರಿ ಸರಕಾರ ನೀಡುವ ಉದ್ದೇಶ ಹೊಂದಿದ್ದಾರೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯಪಟ್ಟರು.

Vijaya Karnataka 22 Jun 2020, 5:00 am
ಬ್ಯಾಡಗಿ: ಆರ್ಥಿಕ ಸಂಕಷ್ಟ, ಚೀನಾದೊಡನೆ ಯುದ್ಧ ಭೀತಿ ಇಂತಹ ಸಂಕಷ್ಟಗಳ ನಡುವೆಯೂ ಪ್ರಧಾನಿ ಮೋದಿ ಅವರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಮೂಲಕ ಮಾದರಿ ಸರಕಾರ ನೀಡುವ ಉದ್ದೇಶ ಹೊಂದಿದ್ದಾರೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯಪಟ್ಟರು.
Vijaya Karnataka Web 21BYD2_23
ಬ್ಯಾಡಗಿಯಲ್ಲಿಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯಕ್ಕೆ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಭೂಮಿಪೂಜೆ ನೆರವೇರಿಸಿದರು.


ಪಟ್ಟಣದಲ್ಲಿ4 ಕೋಟಿ ರೂ. ವೆಚ್ಚದಲ್ಲಿನಿರ್ಮಿಸಲಾಗುತ್ತಿರುವ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೆಲವು ಕಡೆ ಪ್ರತಿಪಕ್ಷಗಳ ಪ್ರಚೋದನೆಯಿಂದ ದೇಶದಲ್ಲಿಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನವೇ ದೇಶ ಸಾಲದ ಸುಳಿಯಲ್ಲಿಸಿಲುಕಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇದರಿಂದ ಹೊರಬರಲು ಕನಿಷ್ಠ 10 ವರ್ಷ ಬೇಕಾಗಿದೆ. ಸಾರ್ವಜನಿಕರು ಇದನ್ನು ಅಥೈರ್‍ಸಿಕೊಂಡು ನಮ್ಮಗಳ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿಎಪಿಎಂಸಿ ಅಧ್ಯಕ್ಷ ವೀರಭ್ರದಪ್ಪ ಗೊಡಚಿ, ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಬಿಜೆಪಿ ತಾಲೂಕಾಧ್ಯಕ್ಷ ಸುರೇಶ ಆಸಾದಿ, ಶಿವಯೋಗಿ ಶಿರೂರ, ವಿನಯಕುಮಾರ ಹಿರೇಮಠ, ಸರೋಜಾ ಉಳ್ಳಾಗಡ್ಡಿ, ಬಸವರಾಜ ಚತ್ರದ, ಮಹಬೂಬ ಅಗಸನಹಳ್ಳಿ ಇನ್ನಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ