ಆ್ಯಪ್ನಗರ

ತಾಯಿಮ್ಮದೇವಿ ಜಾತ್ರಾ ಮಹೋತ್ಸವ ನಾಳೆ

ಶಿಗ್ಗಾವಿ: ತಾಲೂಕಿನ ತಡಸ ಗ್ರಾಮದ ಮುಂಡಗೋಡ ರಸ್ತೆಯ ಪುರಾತನ ತಾಯಿಮ್ಮದೇವಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ನ.1 ರಂದು ಸಂಜೆ 4-31ಕ್ಕೆ ನಡೆಯಲಿದೆ. ಅ.31ಕ್ಕೆ ಸಂಜೆ 4ಕ್ಕೆ ತಡಸ ಗ್ರಾಮದೇವಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ತಾಯಿಮ್ಮದೇವಿ ದೇವಸ್ಥಾನದ ಆವರಣಕ್ಕೆ ರಥ ತೆರಳಲಿದೆ.

Vijaya Karnataka 31 Oct 2019, 5:00 am
ಶಿಗ್ಗಾವಿ: ತಾಲೂಕಿನ ತಡಸ ಗ್ರಾಮದ ಮುಂಡಗೋಡ ರಸ್ತೆಯ ಪುರಾತನ ತಾಯಿಮ್ಮದೇವಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ನ.1 ರಂದು ಸಂಜೆ 4-31ಕ್ಕೆ ನಡೆಯಲಿದೆ. ಅ.31ಕ್ಕೆ ಸಂಜೆ 4ಕ್ಕೆ ತಡಸ ಗ್ರಾಮದೇವಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ತಾಯಿಮ್ಮದೇವಿ ದೇವಸ್ಥಾನದ ಆವರಣಕ್ಕೆ ರಥ ತೆರಳಲಿದೆ.
Vijaya Karnataka Web mother mother devi jatra jubilee tomorrow
ತಾಯಿಮ್ಮದೇವಿ ಜಾತ್ರಾ ಮಹೋತ್ಸವ ನಾಳೆ


ದಟ್ಟ ಅರಣ್ಯದ ಮಧ್ಯೆ ಪ್ರತಿಷ್ಠಾಪನೆಗೊಂಡಿರುವ ತಾಯಿಮ್ಮ ದೇವಿ ಭಕ್ತರ ಕಷ್ಟಗಳನ್ನು ಕಳೆದು, ಇಷ್ಠಾರ್ಥ ಈಡೇರಿಸುವ ದೇವಿ. ಧರ್ಮ ಸಂಸ್ಕಾರ ಈ ನಾಡಿನಲ್ಲಿತನ್ನ ಮಹಿಮೆಯಿಂದ ಜನ ಮನದಲ್ಲಿಮನೆ ಮಾಡಿರುವ ಅನೇಕ ಶಕ್ತಿ ದೇವತೆಗಳಲ್ಲಿತಾಯಿಮ್ಮ ದೇವಿ ಒಬ್ಬಳಾಗಿದ್ದಾಳೆ. ಪ್ರತಿವರ್ಷ ದೀಪಾವಳಿ ಹಬ್ಬದ ಆಚರಣೆ ಬಳಿಕ 5ನೇ ದಿನಕ್ಕೆ ನಡೆಯವ ದೇವಿ ರಥೋತ್ಸವಕ್ಕೆ ಭಕ್ತಿ ಸಡಗರ ದೇವಸ್ಥಾನದಲ್ಲಿಇಮ್ಮಡಿಗೊಂಡಿರುತ್ತದೆ.

ಭಕ್ತರು ದೇವಿಗೆ ಭಕ್ತಿ-ಭಾವದಿಂದ ಎರಡು ಬಾಳೆಹಣ್ಣು, ಊದು ಬತ್ತಿ ಹಚ್ಚಿ ಪರಿಹಾರ ಪಡೆದುಕೊಳ್ಳುತ್ತಾರೆ. ಸಂಜೆ ಹೊತ್ತಿಗೆ ರಥೋತ್ಸವದಲ್ಲಿಪಾಲ್ಗೊಳ್ಳುತ್ತಾರೆ.

ಜಾತ್ರಾ ಮಹೋತ್ಸವ :
ತಾಯಿಮ್ಮ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ 31 ರಂದು ಸಂಜೆ 4ಕ್ಕೆ ಗ್ರಾಮದೇವಿ ದೇವಸ್ಥಾನದಿಂದ ತಾಯಿಮ್ಮದೇವಿ ಪಾಲಿಕೆ ಜಾತ್ರಾ ಸ್ಥಳಕ್ಕೆ ತೆರಳುವುದು. ನ.1 ರಂದು ಸಂಜೆ 4-31ಕ್ಕೆ ರಥೋತ್ಸವ ನಡೆಯಲಿದೆ. ನ.2 ರಂದು ಕಡುಬಿನ ಕಾಳಗ ನಡೆಯಲಿದೆ. ಸಂಜೆ 5ಕ್ಕೆ ತಡಸ ಗ್ರಾಮದಲ್ಲಿರಥದ ಮೆರವಣಿಗೆ ಜರುಗಲಿದೆ.

ಜಾತ್ರಾ ಮಹೋತ್ಸವಕ್ಕೆ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಪ್ರಲ್ಹಾದ ಜೋಶಿ, ಮಾಜಿ ಶಾಸಕರಾದ ಸೈಯ್ಯದ ಅಜ್ಜಂಫೀರ ಖಾದ್ರಿ, ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಜಿಪಂ.ಸದಸ್ಯೆ ಮಮತಾ ಜಬಿ ತಡಸ, ತಾಪಂ.ಅಧ್ಯಕ್ಷ ಡಿಕಪ್ಪ ಗಬ್ಬೂರು ಸೇರಿದಂತೆ ಗ್ರಾಪಂ.ಸದಸ್ಯರು, ಜಿಪಂ.ಸದಸ್ಯರು, ರಾಜಕೀಯ ಮುಖಂಡರಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಾತ್ರಾ ಅಂಗವಾಗಿ ವಿವಿಧ ಕಲಾ ತಂಡಗಳು, ಭಜನಾ ಸಂಘಗಳು, ಝಾಂಜ್‌ ಪದಕಗಳು, ಡೊಳ್ಳಿನ ಮಜಲುಗಳು, ಕೋಲಾಟ, ಹೆಜ್ಜೆ ಮೇಳ ಕಲಾ ತಂಡಗಳು ಪಾಲ್ಗೊಳ್ಳಲ್ಲಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ