ಆ್ಯಪ್ನಗರ

ಖಾಲಿ ರಸ್ತೆಯಲ್ಲಿ ಪುರಸಭೆಯ ಫಾಗಿಂಗ್‌

ಹಾನಗಲ್ಲ: ಜನರ ಸಹಕಾರದ ಪರಿಣಾಮವಾಗಿ ರವಿವಾರದ ಜನತಾ ಕಫ್ರ್ಯೂ ಹಾನಗಲ್ಲನಲ್ಲಿಯಶಸ್ವಿಯಾಗಿತ್ತು. ತಾಲೂಕಿನ ಗ್ರಾಮೀಣ ಭಾಗದಲ್ಲೂಜನರು ಮನೆಯಿಂದ ಹೊರಗೆ ಬರಲಿಲ್ಲ.

Vijaya Karnataka 23 Mar 2020, 5:00 am
ಹಾನಗಲ್ಲ: ಜನರ ಸಹಕಾರದ ಪರಿಣಾಮವಾಗಿ ರವಿವಾರದ ಜನತಾ ಕಫ್ರ್ಯೂ ಹಾನಗಲ್ಲನಲ್ಲಿಯಶಸ್ವಿಯಾಗಿತ್ತು. ತಾಲೂಕಿನ ಗ್ರಾಮೀಣ ಭಾಗದಲ್ಲೂಜನರು ಮನೆಯಿಂದ ಹೊರಗೆ ಬರಲಿಲ್ಲ.
Vijaya Karnataka Web municipal fogging on an empty road
ಖಾಲಿ ರಸ್ತೆಯಲ್ಲಿ ಪುರಸಭೆಯ ಫಾಗಿಂಗ್‌


ರವಿವಾರ ಇಡೀ ದಿನ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು. ಹೀಗಾಗಿ ಪ್ರಮುಖ ರಸ್ತೆ, ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು. ಸಾರಿಗೆ ಸೇರಿದಂತೆ ಖಾಸಗಿ ಪ್ರಯಾಣಿಕ ವಾಹನ ಸಂಚಾರ ನಿಲ್ಲಿಸಲಾಗಿತ್ತು. ಆಟೊ, ಕಟಮಾ ರಸ್ತೆಗೆ ಇಳಿಯಲಿಲ್ಲ. ಅಗತ್ಯದ ಸಾಮಗ್ರಿಗಳನ್ನು ಖರೀದಿಸಿ ಸಂಗ್ರಹಿಸಿಕೊಳ್ಳಲು ಜನರು ಮುಗಿಬಿದ್ದ ಕಾರಣ ಶನಿವಾರ ಸಂಜೆ ಮಾರುಕಟ್ಟೆ ಪ್ರದೇಶ ಬ್ಯೂಸಿಯಾಗಿತ್ತು.

ಜನತಾ ಕಫ್ರ್ಯೂ ಕಾರಣಕ್ಕೆ ತಾಲೂಕಿನ ದೊಡ್ಡ ಗ್ರಾಮಗಳಾದ ಅಕ್ಕಿಆಲೂರ, ಬಮ್ಮನಹಳ್ಳಿ, ಬೆಳಗಾಲಪೇಟೆ, ನರೇಗಲ್‌, ಆಡೂರ, ಮಾಸನಕಟ್ಟಿ ಮತ್ತಿತರ ಗ್ರಾಮಗಳಲ್ಲಿಜನ ಸಂಚಾರ ಸ್ಥಗಿತಗೊಂಡಿತ್ತು. ಸಂಜೆ 5 ಗಂಟೆಗೆ ಜನರು ತಮ್ಮ ಮನೆ ಮುಂದೆ ನಿಂತು ಚಪ್ಪಾಳೆ ತಟ್ಟಿದರು. ತಮ್ಮಲ್ಲಿದ್ದ ವಾದನಗಳ ಮೂಲಕ ಶಬ್ದ ಮಾಡಿದರು.

ಫಾಗಿಂಗ್‌: ರವಿವಾರ ಇಡೀ ದಿನ ಜನರು ಮನೆಯಲ್ಲಿದ್ದರೆ, ಇತ್ತ ಪುರಸಭೆ ಸಿಬ್ಬಂದಿ ಪಟ್ಟಣ ಸ್ವಚ್ಚತೆಗೆ ಮುಂದಾಗಿದ್ದರು. ವಾಹನ, ಜನ ಸಂಚಾರ ಇಲ್ಲದ್ದನ್ನು ಬಳಸಿಕೊಂಡ ಪುರಸಭೆ ಪೌರ ಕಾರ್ಮಿಕರು, ಪ್ರಮುಖ ರಸ್ತೆಯಲ್ಲಿಫಾಗಿಂಗ್‌ ಮಾಡಿದರು.

ವಿವಿಧ ಬಡಾವಣೆಗಳಿಗೆ ತೆರಳಿ ಚರಂಡಿ ಸ್ವಚ್ಚತೆಯನ್ನು ಕೈಗೊಂಡಿದ್ದರು. ಅಲ್ಲಲ್ಲಿಹರಡಿಕೊಂಡಿದ್ದ ತ್ಯಾಜ್ಯ ವಿಲೇವರಿ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ಎಚ್‌.ಎನ್‌.ಬಜಕ್ಕನವರ, ನೈರ್ಮಲ್ಯ ಅಭಿಯಂತರ ಅಮೂಲ್ಯಾ ಸಿ.ನೇತೃತ್ವ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ