ಹಾವೇರಿ:ಶಿಗ್ಗಾವಿ ತಾಲೂಕಿನ ಅರಟಾಳ ಗ್ರಾಮದಲ್ಲಿ ನೂಲಹುಣ್ಣಿಮೆ ಅಂಗವಾಗಿ ಜಿಲ್ಲಾ ಕಲಾವಿದರ ಬಳಗ, ಜೈನ ಮಿಲನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ಶಂಕರ ತುಮ್ಮಣ್ಣನವರ ರಚಿಸಿ, ನಿರ್ದೇಶಿಸಿದ ಮುತ್ತಪ್ಪ ಮುತ್ತವ್ವ ಎಂಬ ಕೌಟುಂಬಿಕ ನಾಟಕವನ್ನು ಪ್ರದರ್ಶಿಸಲಾಯಿತು.
ಪುಣ್ಯ ಸಾಗರ ಮಿನಿ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಜೈನ ಮಿಲನದ ನಿರ್ದೇಶಕ ಭರತರಾಜ ಹಜಾರಿ ಉದ್ಘಾಟಿಸಿದರು. ಅನಂತಪ್ಪ ಛಬ್ಬಿ, ಮಹಾವೀರ ಧಾರವಾಡ, ಪದ್ಮಾರಾಜ ಜೈನರ್, ಮನೋಹರ ಸಾತಗೊಂಡ, ಬೂಪಾಲಣ್ಣ ಹೋಳಗಿ ಉಪಸ್ಥಿತರಿದ್ದರು.
ಕಲಾವಿದ ಶಂಕರ ತುಮ್ಮಣ್ಣನವರ ಮಾತನಾಡಿ, ಈ ನಾಟಕವು ಮುಪ್ಪಿನ ಕಾಲದಲ್ಲಿ ಮಗನ ಆಶ್ರಯ ಪಡೆಯಬೇಕೆಂಬ ಆಸೆ ಹೊತ್ತ ಅಪ್ಪನ ಸುತ್ತ ಹೆಣೆದ ಕಥೆ ಹೊಂದಿದೆ ಎಂದರು.
ಮುಖ್ಯ ಪಾತ್ರದಲ್ಲಿ ಶಂಕರ ತುಮ್ಮಣ್ಣನವರ, ಮುತ್ತುರಾಜ ಹಿರೇಮಠ, ವಿರೇಶ ಸಂಕಿನಮಠ, ವಸಂತ ಕಡತಿ ಅಭಿನಯಿಸಿದರು. ಸಹ ಪಾತ್ರದಲ್ಲಿ ವಿಮಲ್ಕುಮಾರ ಬೋಗಾರ, ನಾಗರಾಜ ಬೇನಳ್ಳಿ, ಸಂಗೀತವನ್ನು ಹನುಮಂತಪ್ಪ ಕರಬಾಳಿ ನುಡಿಸಿದರು. ಶಂಕರ ತುಮ್ಮಣ್ಣನರ ನಿರೂಪಿಸಿ, ವಂದಿಸಿದರು.