ಆ್ಯಪ್ನಗರ

ನಾಡು, ನುಡಿ ಬಗ್ಗೆ ಎಲ್ಲರಿಗೂ ಗೌರವ ಇರಲಿ

ರಟ್ಟೀಹಳ್ಳಿ: ಹರಿದು ಹಂಚಿ ಹೋಗಿದ್ದ ನಾಡನ್ನು ಅನೇಕ ಹಿರಿಯ ಹೋರಾಟದಿಂದ ದೇವರಾಜ ಅರಸು ಅವರ ಕಾಲದಲ್ಲಿಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಲಾಗಿದೆ. ಕನ್ನಡಿಗರಲ್ಲಒಂದಾಗಿರಬೇಕೆಂದು ಅಂದು ಕನಸ್ಸು ಕಂಡಿದ್ದರು. ಅವರ ಆಶೆ ಈಡೇರಿದೆ. ಕನ್ನಡ ನಾಡು,ನುಡಿ, ನೆಲಜಲದ

Vijaya Karnataka 2 Nov 2019, 5:00 am
ರಟ್ಟೀಹಳ್ಳಿ: ಹರಿದು ಹಂಚಿ ಹೋಗಿದ್ದ ನಾಡನ್ನು ಅನೇಕ ಹಿರಿಯ ಹೋರಾಟದಿಂದ ದೇವರಾಜ ಅರಸು ಅವರ ಕಾಲದಲ್ಲಿಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಲಾಗಿದೆ. ಕನ್ನಡಿಗರಲ್ಲಒಂದಾಗಿರಬೇಕೆಂದು ಅಂದು ಕನಸ್ಸು ಕಂಡಿದ್ದರು. ಅವರ ಆಶೆ ಈಡೇರಿದೆ. ಕನ್ನಡ ನಾಡು,ನುಡಿ, ನೆಲಜಲದ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ,ಗೌರವ ಇರಬೇಕೆಂದು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಮಾಜಿ ಶಾಸಕ ಯು.ಬಿ.ಬಣಕಾರ ಹೇಳಿದರು.
Vijaya Karnataka Web nada nudi have respect for everyone
ನಾಡು, ನುಡಿ ಬಗ್ಗೆ ಎಲ್ಲರಿಗೂ ಗೌರವ ಇರಲಿ


ರಟ್ಟೀಹಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿತಾಲೂಕು ಆಡಳಿತದಿಂದ ಜರುಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಭಾಗವಹಿಸಿ ಮಾತನಾಡಿದರು. ಕನ್ನಡ ಉಳಿಯಬೇಕಾದರೆ ಕನ್ನಡ ಶಾಲೆಗಳು ಉಳಿಯಬೇಕು. ಕನ್ನಡದಲ್ಲಿಓದಿದ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ. ಕನ್ನಡವನ್ನು ಉಳಿಸಿ ಬೆಳೆಸುವುದರ ಜತೆಗೆ ಕನ್ನಡಕ್ಕೆ ತೊಂದರೆಯಾಗದಂತೆ ನಡೆದುಕೊಳ್ಳಬೇಕೆಂದು ಹೇಳಿದರು.

ಧ್ವಜಾರೋಹಣ ನೇರವೇರಿಸಿದ ತಹಸೀಲ್ದಾರ್‌ ಆರ್‌.ಎಚ್‌.ಭಗವಾನ್‌ ಮಾತನಾಡಿ, ನಮ್ಮ ಕನ್ನಡ ನಾಡು ತನ್ನದೇ ಆಸ ಹಿರಿಮೆ ಗರಿಮೆ ಸಿರಿವಂತ ಪರಂಪರೆ ಹೊಂದಿದೆ. ಭಾರತದಲ್ಲಿಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು ಕನ್ನಡದ ಹೆಮ್ಮೆ. ನಮ್ಮಲ್ಲರಿಗೂ ಕನ್ನಡಾಭಿಮಾನ ಇರಲೇಬೇಕು. ನಮ್ಮ ನಾಡು,ನುಡಿ,ಭಾಷೆ ನಮ್ಮ ಹೆಮ್ಮೆ. ಜೀವನದಲ್ಲಿಕನ್ನಡವನ್ನು ಅಳವಡಿಸಿಕೊಂಡು ಹೋಗಬೇಕೆಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ರೇಣುಕಾ ಕಮತಳ್ಳಿ, ಜಿ.ಪಂ.ಸದಸ್ಯೆ ಸುಮಿತ್ರಾ ಪಾಟೀಲ, ತಾ.ಪಂ.ಮಾಜಿ ಅಧ್ಯಕ್ಷ ಮಹೇಶ ಗುಬ್ಬಿ, ಹೇಮಣ್ಣ ಮುದರಡ್ಡೇರ, ಗ್ರಾ.ಪಂ.ಉಪಾಧ್ಯಕ್ಷ ಗೋಪಾಲ ಮಡಿವಾಳರ, ಇಒ ಶ್ರೀನಿವಾಸ, ಹಾಲಪ್ಪ ಬಳಿಗಾವಿ, ಉಪ ತಹಸೀಲ್ದಾರ್‌ ಎಂ.ಎಸ್‌.ಬೆನ್ನೂರುಮಠ, ಎಸ್‌.ಆರ್‌.ಮೆಸ್ತಾ, ಸಿಆರ್‌ಪಿ ಹೆಚ್‌.ಬಿ.ಮಕರಿ, ಸಿ.ಎಸ್‌.ಚಕ್ರಸಾಲಿ,ಕನ್ನಡ ಪರ ಸಂಘಟನೆಯ ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ