ಆ್ಯಪ್ನಗರ

ಕಲಿಕೆಗೆ ನಲಿ-ಕಲಿ ಬೋಧನæ ಉಪಯುಕ್ತ

ಅಕ್ಕಿಆಲೂರು : ಮಕ್ಕಳಿಗೆ ಸರಾಗವಾಗಿ ಕಲಿಕೆಗೆ ನಲಿ-ಕಲಿ ಬೋಧನಾ ವಿಧಾನ ಅತ್ಯಂತ ಉಪಯುಕ್ತವಾಗಿದೆ. ನಲಿಯುತ, ಕಲಿಯುತ ಮಕ್ಕಳು ಕಲಿಕೆಯಲ್ಲಿವೇಗ ಪಡೆಯುತ್ತಾರೆ ಎಂದು ನಲಿ-ಕಲಿ ಸಂಪನ್ಮೂಲ ವ್ಯಕ್ತಿ ಎಸ್‌.ಎಸ್‌.ಹಿರೇಮಠ ಹೇಳಿದರು.

Vijaya Karnataka 14 Sep 2019, 5:00 am
ಅಕ್ಕಿಆಲೂರು : ಮಕ್ಕಳಿಗೆ ಸರಾಗವಾಗಿ ಕಲಿಕೆಗೆ ನಲಿ-ಕಲಿ ಬೋಧನಾ ವಿಧಾನ ಅತ್ಯಂತ ಉಪಯುಕ್ತವಾಗಿದೆ. ನಲಿಯುತ, ಕಲಿಯುತ ಮಕ್ಕಳು ಕಲಿಕೆಯಲ್ಲಿವೇಗ ಪಡೆಯುತ್ತಾರೆ ಎಂದು ನಲಿ-ಕಲಿ ಸಂಪನ್ಮೂಲ ವ್ಯಕ್ತಿ ಎಸ್‌.ಎಸ್‌.ಹಿರೇಮಠ ಹೇಳಿದರು.
Vijaya Karnataka Web nali kali teaching is useful for learning
ಕಲಿಕೆಗೆ ನಲಿ-ಕಲಿ ಬೋಧನæ ಉಪಯುಕ್ತ


ಹಿರೇಕಾಂಶಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನಡೆದ ಚಿಕ್ಕಾಂಶಿ ಹೊಸೂರು, ಶಿರಗೋಡ, ಗೆಜ್ಜಿಹಳ್ಳಿ, ಸಮ್ಮಸಗಿ ಕ್ಲಸ್ಟರ್‌ ಮಟ್ಟದ ನಲಿ-ಕಲಿ ಸಮಾಲೋಚನಾ ಸಭೆಯಲ್ಲಿಭಾಗವಹಿಸಿ ಅವರು ಮಾತನಾಡಿದರು. ಶಿಕ್ಷಕರು ನಲಿ-ಕಲಿ ವಿಧಾನದ ಮೂಲಕ ಮಕ್ಕಳಲ್ಲಿಕಲಿಕೆ ಬಗೆಗೆ ಉತ್ಸಾಹ ಮೂಡಿಸಬಹುದಾಗಿದೆ ಎಂದರು.

ಸಿಆರ್‌ಪಿ ಟಿ.ಶಿವಕುಮಾರ್‌ ಮಾತನಾಡಿ, ಶಿಕ್ಷಕರು ಕಲಿಸಿದ ಶ್ರಮಕ್ಕೆ ಮಕ್ಕಳು ಮುಂದೆ ಅವರ ಜೀವನದ ಬುನಾದಿ ಹಾಕಿಕೊಂಡಾಗ ಮಾತ್ರ ಶ್ರಮ ಸಾರ್ಥಕವಾಗುತ್ತದೆ. ಮಕ್ಕಳು ಮುಗ್ಧ ಮನಸ್ಸಿನಿಂದ ಕೂಡಿದ್ದು ಅವರ ಮುಗ್ಧತೆ ಅಥೈರ್‍ಸಿಕೊಂಡು ಸಮಾಧಾನದಿಂದ ಕಲಿಸಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿಸಂಪನ್ಮೂಲ ವ್ಯಕ್ತಿ ಎಸ್‌.ಎಸ್‌.ಹಿರೇಮಠ ಶಿಕ್ಷಕರಿಗೆ ನೃತ್ಯದ ಮೂಲಕ ಮಕ್ಕಳನ್ನು ಕಲಿಕೆಗೆ ಹೇಗೆ ಆಕರ್ಷಿಸಬೇಕು ಎಂದು ತರಬೇತಿ ನೀಡಿದರು.

ಸಭೆಯಲ್ಲಿಸಂಪನ್ಮೂಲ ವ್ಯಕ್ತಿಗಳಾದ ಬಿ.ಎಂ.ಬೇವಿನಮರದ, ಸುಧಾ ಹಾನಗಲ್‌, ಜೆ.ರೇಣುಕಾ, ಶಿಕ್ಷಕರಾದ ರಂಗಸ್ವಾಮಿ ಶೆಟ್ಟಿ, ಮಲ್ಲೇಶ ಹುಲಬಿಕೊಂಡ, ಸುನಿತಾ ತಳವಾರ, ಪಿ.ಯು.ಕುಬ್ಬಿ, ಸುಧಾ ಹುಲ್ಲತ್ತಿ, ಮಾರುತಿ ಬಾರ್ಕಿ, ಸರಸ್ವತಿ ಲಮಾಣಿ, ಡಿ.ಎಚ್‌.ಮಾದರ, ಚಂದ್ರಕಲಾ ಬಟ್ಟಲಕಟ್ಟಿ, ಎಲ್‌.ವಿಜಯ, ಕುಸಮಾ ದಾಸರ ಇನ್ನು ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ