ಆ್ಯಪ್ನಗರ

ಮೋದಿ ದೇಶಕಂಡ ಅಪ್ರತಿಮ ಚಾಣಾಕ್ಷ

ಹಿರೇಕೆರೂರು : ಐದು ವರ್ಷ ಯಾವುದೇ ಹಗರಣಗಳಿಲ್ಲದೆ ಅತ್ಯುತ್ತಮವಾಗಿ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ದೇಶಕಂಡ ಅಪ್ರತಿಮ ಚಾಣಾಕ್ಷ ಎಂದು ಮಾಜಿ ಶಾಸಕ ಯು.ಬಿ.ಬಣಕಾರ ಹೇಳಿದರು.

Vijaya Karnataka 1 Jun 2019, 5:00 am
ಹಿರೇಕೆರೂರು : ಐದು ವರ್ಷ ಯಾವುದೇ ಹಗರಣಗಳಿಲ್ಲದೆ ಅತ್ಯುತ್ತಮವಾಗಿ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ದೇಶಕಂಡ ಅಪ್ರತಿಮ ಚಾಣಾಕ್ಷ ಎಂದು ಮಾಜಿ ಶಾಸಕ ಯು.ಬಿ.ಬಣಕಾರ ಹೇಳಿದರು.
Vijaya Karnataka Web HVR-31HKR 4
ನರೇಂದ್ರ ಮೋದಿ ಪ್ರಧಾನ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ರಟ್ಟೀಹಳ್ಳಿ ತಾಲೂಕಿನ ಹಿರೇಮೊರಬ ಗ್ರಾಮದಲ್ಲಿ ಮಾಜಿ ಶಾಸಕ ಯು.ಬಿ.ಬಣಕಾರ ನೇತೃತ್ವದಲ್ಲಿ ಗ್ರಾಮ ಘಟಕದ ಬಿಜೆಪಿ ಕಾರ್ಯಕರ್ತರು ಕೇಕ್‌ ಕತ್ತರಿಸಿ ವಿಜಯೋತ್ಸವ ಆಚರಿಸಿದರು.


ಅವರು ರಟ್ಟೀಹಳ್ಳಿ ತಾಲೂಕಿನ ಹಿರೇಮೊರಬ ಗ್ರಾಮದಲ್ಲಿ ಗುರುವಾರ ಸಂಜೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಅಂಗವಾಗಿ ಕೇಕ್‌ ಕತ್ತರಿಸಿ ವಿಜಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನರೇಂದ್ರ ಮೋದಿ ಅತ್ಯಂತ ಬುದ್ಧಿವಂತ ಹಾಗೂ ಅಪಾರ ಜ್ಞಾನವುಳ್ಳವರಾಗಿದ್ದಾರೆ. ಅವರ ಐದು ವರ್ಷದ ಅವಧಿಯಲ್ಲಿ ಇಡಿ ಭಾರತ ರಕ್ಷ ಣಾತ್ಮಕವಾಗಿ ಅಭಿವೃದ್ಧಿಯಿಂದ ಹಾಗೂ ಆರ್ಥಿಕವಾಗಿ ದಾಪುಗಾಲತ್ತ ದೇಶ ಮುನ್ನುಗ್ಗುತ್ತಿದೆ. ಈಗ ಲೋಕಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದಿದೆ. ಎರಡನೇ ಅವಧಿಗೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಈ ಐದು ವರ್ಷದ ಅವದಿಯಲ್ಲಿ ದೇಶ ಇನ್ನಷ್ಟು ಅಭಿವೃದ್ಧಿಗೊಳ್ಳಲಿದೆ. ಅಷ್ಟೆ ಅಲ್ಲದೆ ಬಡವರ ಪರ ಪರಿಣಾಮಕಾರಿಯಾದ ಜನಪರ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಘಟಕದ ಅಧ್ಯಕ್ಷ ಎಸ್‌.ಆರ್‌.ಅಂಗಡಿ, ಜಿ.ಪಂ ಮಾಜಿ ಸದಸ್ಯ ಬಸವರಾಜ ಬೇವಿನಹಳ್ಳಿ, ರುದ್ರಗೌಡ ಪುಟ್ಟತಮ್ಮನವರ, ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್‌.ಬಿ.ಪಾಟೀಲ್‌, ಶಿವಪ್ಪ ಶಿವಣ್ಣನವರ, ಶಂಭಪ್ಪ ಗಂಗಾಯಿಕೊಪ್ಪ, ನಾಗಪ್ಪ ಸಿದ್ದಲಿಂಗಪ್ಪನವರ, ಕರೇಗೌಡ ಗೌಡರ್‌, ಕುಮಾರ ಮಾಳಗಿಮನಿ, ರೇಣುಕಪ್ಪ ಮಾವಿನಕಾಯಿ, ಕುಮಾರ ಮಾವಿನಕಾಯಿ, ಹನುಮಂತಪ್ಪ ಬಣಕಾರ, ಹನುಮಂತಪ್ಪ ಪೂಜಾರ, ಬೂದೇಪ್ಪ ರೋತಿ, ವೀರಭದ್ರಪ್ಪ ಕೋಟಿಹಾಳ, ಮಲ್ಲನಗೌಡ ಪಾಟೀಲ್‌, ಸಿದ್ದಪ್ಪ ತೋಟಗಂಟಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ