ಆ್ಯಪ್ನಗರ

ದೇಶದ ಭದ್ರತೆ, ಪ್ರಗತಿಗೆ ಮೋದಿ ಅವಶ್ಯ: ಬೊಮ್ಮಾಯಿ

ಹಿರೇಕೆರೂರು: ದೇಶದ ಭದ್ರತೆಗಾಗಿ, ಸುರಕ್ಷ ತೆಗಾಗಿ ಮತ್ತು ಪ್ರಗತಿಗಾಗಿ ಮೊತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಅತ್ಯವಶ್ಯವಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

Vijaya Karnataka 25 Mar 2019, 5:00 am
ಹಿರೇಕೆರೂರು: ದೇಶದ ಭದ್ರತೆಗಾಗಿ, ಸುರಕ್ಷ ತೆಗಾಗಿ ಮತ್ತು ಪ್ರಗತಿಗಾಗಿ ಮೊತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಅತ್ಯವಶ್ಯವಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
Vijaya Karnataka Web HVR-24HKR 2


ರಟ್ಟೀಹಳ್ಳಿ ಪಟ್ಟಣದಲ್ಲಿ ಭಾನುವಾರ ಜರುಗಿದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿ ದೇಶವನ್ನು ಲೂಟಿ ಮಾಡುವದರಲ್ಲಿ ಸಮಯ ವ್ಯಯ ಮಾಡಿದ್ದರು. ಆದರೆ ಮೋದಿ ಅವರು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಅನೇಕ ಜನಪರ ಯೋಜನೆಗಳಿಂದಾಗಿ ಎಲ್ಲರ ವಿಶ್ವಾಸವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ ರೈಲ್ವೆ ಯೋಜನೆಗಳು, ಅತೀ ಹೆಚ್ಚು ಉಜ್ವಲ ಯೋಜನೆಯ ಬಳಕೆ, ರಸ್ತೆಗಳ ಅಭಿವೃದ್ಧಿ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮೋದಿಯವರ ಯೋಜನೆಗಳು ಸಹಾಯಕವಾಗಿವೆ. ಜನರು ಈಗಾಗಲೇ 2 ಬಾರೀ ನಮ್ಮ ಮೇಲೆ ವಿಶ್ವಾಸವನ್ನು ಇಟ್ಟು ಜಯಶಾಲಿಯನ್ನಾಗಿ ಮಾಡಿದ್ದು ಮೋದಿಯವರ ನವಭಾರತದ ಕನಸ್ಸಿಗೆ ಮತ್ತೊಮ್ಮೆ ತಮ್ಮನ್ನು ಜಯಶಾಲಿಯನ್ನಾಗಿ ಮಾಡಲು ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಯು.ಬಿ.ಬಣಕಾರ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಹಿರೇಕೆರೂರು ತಾಲೂಕು ಬಿಜೆಪಿಗೆ ಅತೀ ಹೆಚ್ಚು ಮತಗಳನ್ನು ನೀಡಿದೆ. ಈ ಬಾರಿಯೂ ಇನ್ನು ಹೆಚ್ಚಿನ ಮತ ಪಡೆಯಬೇಕು. ಇದಕ್ಕೆ ಪಕ್ಷ ದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಬೇಕೆಂದು ಹೇಳಿದರು.

ಪಕ್ಷ ದ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ ಮಾತನಾಡಿ, ಮಾ.27ರಿಂದ ಪಕ್ಷ ದ ಕಾರ್ಯಕರ್ತರು ಮೋದಿಜಿಯವರ ಮತ್ತು ಶಿವಕುಮಾರ ಉದಾಸಿಯವರ ಜನಪರ ಯೋಜನೆಗಳ ಕರಪತ್ರಗಳನ್ನು ಮನೆಮನೆಗಳಿಗೆ ತೆರಳಿ ಜನತೆಗೆ ಮನವರಿಕೆ ಮಾಡಬೇಕು. 5 ವರ್ಷಗಳಲ್ಲಿ ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ, ಆದರೆ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಹಗರಣಗಳ ಸುರಿಮಾಲೆಯನ್ನು ಜನತೆ ಕಂಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಸಂಸದ ಶಿವಕುಮಾರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ, ಎಸ್‌.ಎಸ್‌.ಪಾಟೀಲ್‌, ಕೆಎಂಎಫ್‌ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಎಸ್‌.ಬಿ.ಪಾಟೀಲ, ರೇಣುಕಾ ಕಮತಹಳ್ಳಿ, ಎಸ್‌.ಆರ್‌.ಅಂಗಡಿ, ಸಿದ್ದರಾಜ ಕಲಕೋಟಿ, ಸುಭಾಷ ಹದಡೇರ, ರವೀಂದ್ರ ಮುದಿಯಪ್ಪನವರ, ಶಂಕ್ರುಗೌಡ ಚೆನ್ನಗೌಡ್ರ, ಬಸವರಾಜ ಬೇವಿನಹಳ್ಳಿ, ಕೆ.ಸಿ.ಸಿ.ಬ್ಯಾಂಕ್‌ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ ಮತ್ತಿತರರು ಉಪಸ್ಥಿತರಿದ್ದರು. ದೇವರಾಜ ನಾಗಣ್ಣನವರ ಸ್ವಾಗತಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ