ಆ್ಯಪ್ನಗರ

ರಾಷ್ಟ್ರೀಯ ಶಿಕ್ಷಣ ನೀತಿ ಚರ್ಚೆ ಅಗತ್ಯ

ಹಾವೇರಿ: ದೇಶದಲ್ಲಿಜಾರಿಗೆ ಬರಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಬಗ್ಗೆ ಹೆಚ್ಚಿನ ಅಧ್ಯಯನ ಹಾಗೂ ಚರ್ಚೆ ನಡೆಯಬೇಕಾಗಿದೆ ಎಂದು ಗ್ರಾಪಂ ಪಿಡಿಒ ಡಾ.ಪರಶುರಾಮ ರೋಗಣ್ಣನವರ ಹೇಳಿದರು.

Vijaya Karnataka 21 Sep 2020, 5:00 am
ಹಾವೇರಿ: ದೇಶದಲ್ಲಿಜಾರಿಗೆ ಬರಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಬಗ್ಗೆ ಹೆಚ್ಚಿನ ಅಧ್ಯಯನ ಹಾಗೂ ಚರ್ಚೆ ನಡೆಯಬೇಕಾಗಿದೆ ಎಂದು ಗ್ರಾಪಂ ಪಿಡಿಒ ಡಾ.ಪರಶುರಾಮ ರೋಗಣ್ಣನವರ ಹೇಳಿದರು.
Vijaya Karnataka Web 20 MANJU 3_23
ಹಾವೇರಿ ತಾಲೂಕಿನ ಅಗಡಿಯ ಶ್ರೀ ಶೇಷಾಚಲ ಸದ್ಗುರು ಪ್ರೌಢಶಾಲೆಯಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಚರ್ಚಾ ಕಾರ್ಯಕ್ರಮ ಜರುಗಿತು.


ತಾಲೂಕಿನ ಅಗಡಿಯ ಶ್ರೀ ಶೇಷಾಚಲ ಸದ್ಗುರು ಪ್ರೌಢಶಾಲೆಯಲ್ಲಿಗ್ರಾಪಂ ಹಾಗೂ ಸ್ಪೂರ್ತಿ ವಿದ್ಯಾಕುಟೀರ ಸಂಯುಕ್ತಾಶ್ರಯದಲ್ಲಿಜರುಗಿದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಚರ್ಚಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಶಿಕ್ಷಣ ನೀತಿಯನ್ನು ವಿಶಾಲ ಮನೋಭಾವದೊಂದಿಗೆ ಸ್ವೀಕರಿಸಿ ಧನಾತ್ಮಕವಾದ ವಿಚಾರಗಳನ್ನು ಕಾರ್ಯಗತಗೊಳಿಸಲು ಅಗತ್ಯವಾಗಿದೆ ಎಂದು ಹೇಳಿದರು.

ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ, ಶಾಲಾ ಹಂತದಿಂದಲೇ ಕೃಷಿ ಶಿಕ್ಷಣ ನೀಡುವುದರಿಂದ ಗ್ರಾಮ ಭಾರತದ ಸಬಲೀಕರಣ, ಕೃಷಿ ಉದ್ಯಮಶೀಲತೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು. ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, 15 ಲಕ್ಷ ಶಿಕ್ಷಕರ, 2,70,000 ಸಾರ್ವಜನಿಕರ ಅಭಿಪ್ರಾಯ ಹಾಗೂ ಶಿಕ್ಷಣ ತಜ್ಞರ ಸಲಹೆಗಳನ್ನು ಪಡೆದು 5 ವರ್ಷಗಳ ಸುದೀರ್ಘ ಚರ್ಚೆ ನಂತರ ಇದನ್ನು ಜಾರಿಗೆ ತರಲಾಗಿದೆ. ಕಲಿಕೆಯ ಹಂತದಲ್ಲೇ ವಿದ್ಯಾರ್ಥಿಯನ್ನು ಸ್ವಾವಲಂಬಿಯಾಗಿಸುವ ಜ್ಞಾನಾಧಾರಿತ ನೀತಿಯಾಗಿದ್ದು ಜೀವನ ಮೌಲ್ಯ, ಜೀವನ ಕೌಶಲ ಹಾಗೂ ಜ್ಞಾನದ ಶಕ್ತಿ ತತ್ವಗಳನ್ನು ಒಳಗೊಂಡಿದೆ ಎಂದರು.

ಎಚ್‌.ಎಂ.ಪಾಟೀಲ, ಮಂಜುನಾಥ ಕಮ್ಮಾರ, ಎಸ್‌.ಪಿ ಗೋಣಿ ತಿಳವಳ್ಳಿ, ಅಕ್ಕಮ್ಮ ಮುದ್ದಿ ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯೋಪಾದ್ಯಾಯ ರಾಘವೇಂದ್ರ ನಾಡಿಗೇರ ಮಾತನಾಡಿದರು. 50 ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು. ಫರೀದಾಬಾನು ರಿತ್ತಿ ಪ್ರಾರ್ಥಿಸಿ, ರೇಣುಕಾ ಹಲಕಣ್ಣನವರ ಸ್ವಾಗತಿಸಿದರು. ಸೌಮ್ಯ ಬಸೇಗಣ್ಣಿ ನಿರೂಪಿಸಿ, ಎಂ.ಜೆ.ತಾಸ್ಕನವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ