ರಾಷ್ಟ್ರ ಪ್ರೇಮ, ರಾಷ್ಟ್ರಭಕ್ತಿ ಒಡಮೂಡಬೇಕು
ಹಾವೇರಿ: ಮಾತೃಭೂಮಿಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬರಲ್ಲೂ ರಾಷ್ಟ್ರ ಪ್ರೇಮ ಮತ್ತು ರಾಷ್ಟ್ರಭಕ್ತಿ ಒಡಮೂಡಬೇಕು. ಸುಭದ್ರವಾದ ದೇಶ ಕಟ್ಟಲು ಸಾಧ್ಯ ಎಂದು ಜಿಲ್ಲಾಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಳದಂಡಿ ಹೇಳಿದರು.
Vijaya Karnataka 25 Jan 2020, 5:00 am
ಹಾವೇರಿ: ಮಾತೃಭೂಮಿಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬರಲ್ಲೂ ರಾಷ್ಟ್ರ ಪ್ರೇಮ ಮತ್ತು ರಾಷ್ಟ್ರಭಕ್ತಿ ಒಡಮೂಡಬೇಕು. ಸುಭದ್ರವಾದ ದೇಶ ಕಟ್ಟಲು ಸಾಧ್ಯ ಎಂದು ಜಿಲ್ಲಾಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಳದಂಡಿ ಹೇಳಿದರು.
ನಗರದ ಜಿ.ಎಚ್. ಕಾಲೇಜಿನಲ್ಲಿಶುಕ್ರವಾರ ಎನ್.ಸಿ.ಸಿ 3, 27 ಘಟಕ ವತಿಯಿಂದ ನಡೆದ ಎನ್.ಸಿ.ಸಿ. ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಯುತ್ತಿರುವ ಯುವ ಸಮೂಹ ಸಂಘಟನಾತ್ಮಕವಾಗಿ ದೇಶರಕ್ಷಣೆಗೆ ಮುಂದಾಗಬೇಕು. ನಾಡಿನಲ್ಲಿಹುಟ್ಟಿದ ಪ್ರತಿಯೊಬ್ಬ ಪ್ರಜೆಗೂ ತನ್ನ ನಾಡು-ನುಡಿ-ಗಡಿಯ ಕುರಿತಾಗಿ ಸ್ವಾಭಿಮಾನ ಮತ್ತು ಅಭಿಮಾನಗಳಿರಬೇಕು. ಕೇವಲ ಮಾತಿನ ಮಲ್ಲರಾಗದೇ ಸಂಕಷ್ಟ ಬಂದಾಗ ಮುಂದೆ ನಿಂತು ಹೋರಾಡುವ ಪ್ರವೃತ್ತಿ ಬೆಳೆಯಬೇಕು ಎಂದರು.
ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧಾತ್ಮಕತೆ ಕಾಣುತ್ತಿದ್ದು ವಿದ್ಯಾರ್ಥಿಗಳಾದವರು ನಿರಂತರ ಅಧ್ಯಯನ ಮತ್ತು ಪರಿಶ್ರಮದ ಮೂಲಕ ಎಲ್ಲಹಂತಗಳ ದೇಶ ಸೇವೆಗೆ ಮುಂದಾಗಬೇಕು. ಎನ್.ಸಿ.ಸಿ. ಘಟಕಗಳು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ವಿಶಿಷ್ಠ ಯೋಜನೆಗಳ ಮೂಲಕ ವಿದ್ಯಾರ್ಥಿಗಳಲ್ಲಿದೇಶಪ್ರೇಮವನ್ನು ಚಿಗುರೊಡೆಯುವಂತಹ ವಾತಾವರಣ ನಿರ್ಮಿಸುತ್ತಿದೆ. ಎನ್ಸಿಸಿ ಕೆಡೆಟ್ಗಳು ಸಂಪೂರ್ಣವಾಗಿ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿಸ್ತು, ಸಂಯಮ ಮತ್ತು ಬದ್ಧತೆಯ ಕಾರ್ಯ ನಿರ್ವಹಣೆಗಳ ಸಂಯೋಜನೆಯಿಂದ ವ್ಯಕ್ತಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮುನ್ನಡೆಯುವ ಅಗತ್ಯತೆ ಇದೆ ಎಂದರು. ಪ್ರಾಚಾರ್ಯ ಡಾ. ಎಮ್.ಎಸ್. ಯರಗೊಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿಪಪೂ ಪ್ರಾಚಾರ್ಯ ಪ್ರೊ. ಜೆ.ಆರ್. ಶಿಂಧೆ, ಪ್ರೊ. ಡಿ.ಎ. ಕೊಲ್ಲಾಪುರೆ ಇದ್ದರು.
ಕಾರ್ಯಕ್ರಮದನ್ವಯ ಎನ್.ಸಿ.ಸಿ. ಕೆಡೆಟ್ಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಕೆಡೆಟ್ಗಳು ವಿವಿಧ ರೀತಿಯ ಕವಾಯತ ಪ್ರದರ್ಶಿಸಿದರು. ವಿವಿಧ ಪರೀಕ್ಷೆಗಳಲ್ಲಿಕೆಡೆಟ್ಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಆರಂಭದಲ್ಲಿಸೌಮ್ಯ ಮತ್ತು ಭುವನೇಶ್ವರಿ ಪ್ರಾರ್ಥಿಸಿದರು. ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಬಸವರಾಜ ಲೋಕಾಪೂರ ಸ್ವಾಗತಿಸಿದರು. ಐಶ್ವರ್ಯ ಮನೇಗಾರ ಮತ್ತು ಭುವನೇಶ್ವರಿ ನಿರೂಪಿಸಿದರು. ರಕ್ಷಿತಾ ಮಹೇಂದ್ರಕರ ವಂದಿಸಿದರು.
ನಗರದ ಜಿ.ಎಚ್. ಕಾಲೇಜಿನಲ್ಲಿಶುಕ್ರವಾರ ಎನ್.ಸಿ.ಸಿ 3, 27 ಘಟಕ ವತಿಯಿಂದ ನಡೆದ ಎನ್.ಸಿ.ಸಿ. ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಯುತ್ತಿರುವ ಯುವ ಸಮೂಹ ಸಂಘಟನಾತ್ಮಕವಾಗಿ ದೇಶರಕ್ಷಣೆಗೆ ಮುಂದಾಗಬೇಕು. ನಾಡಿನಲ್ಲಿಹುಟ್ಟಿದ ಪ್ರತಿಯೊಬ್ಬ ಪ್ರಜೆಗೂ ತನ್ನ ನಾಡು-ನುಡಿ-ಗಡಿಯ ಕುರಿತಾಗಿ ಸ್ವಾಭಿಮಾನ ಮತ್ತು ಅಭಿಮಾನಗಳಿರಬೇಕು. ಕೇವಲ ಮಾತಿನ ಮಲ್ಲರಾಗದೇ ಸಂಕಷ್ಟ ಬಂದಾಗ ಮುಂದೆ ನಿಂತು ಹೋರಾಡುವ ಪ್ರವೃತ್ತಿ ಬೆಳೆಯಬೇಕು ಎಂದರು.
ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧಾತ್ಮಕತೆ ಕಾಣುತ್ತಿದ್ದು ವಿದ್ಯಾರ್ಥಿಗಳಾದವರು ನಿರಂತರ ಅಧ್ಯಯನ ಮತ್ತು ಪರಿಶ್ರಮದ ಮೂಲಕ ಎಲ್ಲಹಂತಗಳ ದೇಶ ಸೇವೆಗೆ ಮುಂದಾಗಬೇಕು. ಎನ್.ಸಿ.ಸಿ. ಘಟಕಗಳು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ವಿಶಿಷ್ಠ ಯೋಜನೆಗಳ ಮೂಲಕ ವಿದ್ಯಾರ್ಥಿಗಳಲ್ಲಿದೇಶಪ್ರೇಮವನ್ನು ಚಿಗುರೊಡೆಯುವಂತಹ ವಾತಾವರಣ ನಿರ್ಮಿಸುತ್ತಿದೆ. ಎನ್ಸಿಸಿ ಕೆಡೆಟ್ಗಳು ಸಂಪೂರ್ಣವಾಗಿ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿಸ್ತು, ಸಂಯಮ ಮತ್ತು ಬದ್ಧತೆಯ ಕಾರ್ಯ ನಿರ್ವಹಣೆಗಳ ಸಂಯೋಜನೆಯಿಂದ ವ್ಯಕ್ತಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮುನ್ನಡೆಯುವ ಅಗತ್ಯತೆ ಇದೆ ಎಂದರು. ಪ್ರಾಚಾರ್ಯ ಡಾ. ಎಮ್.ಎಸ್. ಯರಗೊಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿಪಪೂ ಪ್ರಾಚಾರ್ಯ ಪ್ರೊ. ಜೆ.ಆರ್. ಶಿಂಧೆ, ಪ್ರೊ. ಡಿ.ಎ. ಕೊಲ್ಲಾಪುರೆ ಇದ್ದರು.
ಕಾರ್ಯಕ್ರಮದನ್ವಯ ಎನ್.ಸಿ.ಸಿ. ಕೆಡೆಟ್ಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಕೆಡೆಟ್ಗಳು ವಿವಿಧ ರೀತಿಯ ಕವಾಯತ ಪ್ರದರ್ಶಿಸಿದರು. ವಿವಿಧ ಪರೀಕ್ಷೆಗಳಲ್ಲಿಕೆಡೆಟ್ಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಆರಂಭದಲ್ಲಿಸೌಮ್ಯ ಮತ್ತು ಭುವನೇಶ್ವರಿ ಪ್ರಾರ್ಥಿಸಿದರು. ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಬಸವರಾಜ ಲೋಕಾಪೂರ ಸ್ವಾಗತಿಸಿದರು. ಐಶ್ವರ್ಯ ಮನೇಗಾರ ಮತ್ತು ಭುವನೇಶ್ವರಿ ನಿರೂಪಿಸಿದರು. ರಕ್ಷಿತಾ ಮಹೇಂದ್ರಕರ ವಂದಿಸಿದರು.