ಆ್ಯಪ್ನಗರ

ರಾಷ್ಟ್ರೀಯ ಸೇವಾ ಯೋಜನೆ ಸಂಕಲ್ಪ ಅರಿಯಬೇಕು

ಹಾವೇರಿ: ನನಗಾಗಿ ಅಲ್ಲ, ನಿಮಗಾಗಿ ಎಂಬ ತತ್ವದ ಹಿನ್ನೆಲೆಯಲ್ಲಿರೂಪುಗೊಂಡ ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಉದ್ಧೇಶ ಮತ್ತು ಸಂಕಲ್ಪವನ್ನು ಪ್ರತಿಯೊಬ್ಬರೂ ಅರಿತು ಮುನ್ನಡೆಯಬೇಕೆಂದು ಜಿ.ಹೆಚ್‌. ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಬಿ.ಸಿ. ಬನ್ನೂರ ಹೇಳಿದರು.

Vijaya Karnataka 27 Sep 2019, 5:00 am
ಹಾವೇರಿ: ನನಗಾಗಿ ಅಲ್ಲ, ನಿಮಗಾಗಿ ಎಂಬ ತತ್ವದ ಹಿನ್ನೆಲೆಯಲ್ಲಿರೂಪುಗೊಂಡ ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಉದ್ಧೇಶ ಮತ್ತು ಸಂಕಲ್ಪವನ್ನು ಪ್ರತಿಯೊಬ್ಬರೂ ಅರಿತು ಮುನ್ನಡೆಯಬೇಕೆಂದು ಜಿ.ಹೆಚ್‌. ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಬಿ.ಸಿ. ಬನ್ನೂರ ಹೇಳಿದರು.
Vijaya Karnataka Web national service plan resolution
ರಾಷ್ಟ್ರೀಯ ಸೇವಾ ಯೋಜನೆ ಸಂಕಲ್ಪ ಅರಿಯಬೇಕು


ನಗರದ ಜಿ.ಎಚ್‌. ಕಾಲೇಜಿನಲ್ಲಿ ಎನ್ನೆಸ್ಸೆಸ್‌ ಘಟಕ 1ಮತ್ತು 2ರ ವತಿಯಿಂದ ನಡೆದ ಸುವರ್ಣ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಕಾಲೇಜುಗಳಲ್ಲಿವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿಹುದುಗಿರುವ ಅದಮ್ಯ ಚೈತನ್ಯವು ಪೋಲಾಗುವುದನ್ನು ತಡೆಗಟ್ಟಿ ಸಮುದಾಯದ ಪ್ರಗತಿಗೆ ಬಳಸುವುದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆ ಸೃಷ್ಟಿಯಾಯಿತು. ಕಾಲೇಜು ಮಟ್ಟದಲ್ಲಿಈ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ಜವಾಬ್ದಾರಿ ಯೋಜನಾ ಅಧಿಕಾರಿಯದಾಗಿದೆ ಎಂದರು.

ಪ್ರಾಚಾರ್ಯ ಡಾ. ಎಂ.ಎಸ್‌. ಯರಗೊಪ್ಪ ಅಧ್ಯಕ್ಷತೆ ವಹಿಸಿದ್ದರು. ಪ.ಪೂ. ಪ್ರಾಚಾರ್ಯ ಪ್ರೊ. ಜೆ.ಆರ್‌. ಸಿಂಧೆ, ಪ್ರೊ. ಡಿ.ಎ. ಕೊಲ್ಲಾಪುರೆ, ಡಾ. ಎಮ್‌.ಜಿ. ಯರನಾಳ, ಡಾ.ಜಗದೀಶ ಹೊಸಮನಿ, ಪ್ರೊ. ಎಚ್‌.ಐ. ಖತೀಬ, ಡಾ. ಈ.ಬಿ. ಸೇಡಂಕರ, ಡಾ.ಎಮ್‌.ಪಿ. ಕಣವಿ ಸೇರಿದಂತೆ ಉಪಸ್ಥಿತರಿದ್ದರು.

ಶಿಕ್ಷಕ ಕೆ.ಆರ್‌. ಹಿರೇಮಠ ಅವರು, ಜಾನಪದ ಗೀತೆಯ ಮೂಲಕ ಸ್ವಚ್ಛ ಭಾರತದ ನಿರ್ಮಾಣಕ್ಕೆ ಕೈ ಜೋಡಿಸುವಂತೆ ಪ್ರೇರಣಾ ಗೀತೆಯನ್ನು ಹಾಡಿದರು. ಎನ್‌.ಎಸ್‌.ಎಸ್‌. ಅಧಿಕಾರಿ ಪ್ರೊ. ಎಸ್‌.ಎಸ್‌. ಸಣ್ಣಶಿವಣ್ಣವರ ಸ್ವಾಗತಿಸಿದರು. ಪ್ರೊ. ರಮೇಶ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಕಿರಣಕುಮಾರ ದೊಡ್ಡಮನಿ ನಿರೂಪಿಸಿದರು. ನಿಖಿಲ್‌ ಬನ್ನೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ