ಆ್ಯಪ್ನಗರ

ಪ್ರಕೃತಿ ಸಮತೋಲನಾ ಪಾದಯಾತ್ರೆ ಶ್ರೇಷ್ಠ

ಗುತ್ತಲ: ಪಾದಯಾತ್ರೆಯನ್ನು ಸಾಮಾನ್ಯವಾಗಿ ಅನೇಕ ಜನ ಮಾಡುತ್ತಾರೆ ಆದರೆ ನೆಗಳೂರ ಶ್ರೀಗಳು ಕೈಗೊಂಡಿರುವ ಬಾಳೆಹೊನ್ನೂರಿನ (ರಂಭಾಪುರಿ ಪೀಠಕ್ಕೆ) ವರಗಿನ ಪ್ರಕೃತಿ ಸಮತೋಲನಾ ಪಾದಯಾತ್ರೆಯಲ್ಲಿಭಾಗವಹಿಸಿರುವ ತಾವೆಲ್ಲೂರು ಅತ್ಯಂತ ಭಾಗ್ಯವಂತರು ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

Vijaya Karnataka 9 Sep 2019, 5:00 am
ಗುತ್ತಲ: ಪಾದಯಾತ್ರೆಯನ್ನು ಸಾಮಾನ್ಯವಾಗಿ ಅನೇಕ ಜನ ಮಾಡುತ್ತಾರೆ ಆದರೆ ನೆಗಳೂರ ಶ್ರೀಗಳು ಕೈಗೊಂಡಿರುವ ಬಾಳೆಹೊನ್ನೂರಿನ (ರಂಭಾಪುರಿ ಪೀಠಕ್ಕೆ) ವರಗಿನ ಪ್ರಕೃತಿ ಸಮತೋಲನಾ ಪಾದಯಾತ್ರೆಯಲ್ಲಿಭಾಗವಹಿಸಿರುವ ತಾವೆಲ್ಲೂರು ಅತ್ಯಂತ ಭಾಗ್ಯವಂತರು ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
Vijaya Karnataka Web 8GTL1_23


ಸಮೀಪದ ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾರ್ಚಾರ ಸ್ವಾಮೀಜಿ ಶನಿವಾರ ಬಾಳೆಹೊನ್ನುರಿನ(ರಂಭಾಪುರಿ ಪೀಠಕ್ಕೆ) ಪಾದಯಾತ್ರೆಯ ಕಾರ್ಯಕ್ರಮದಲ್ಲಿಭಾಗವಹಿಸಿ ಮಾತನಾಡಿದ ಸದಾಶಿವ ಶ್ರೀ, ಪಾದಯಾತ್ರೆಯಿಂದ ಮನಸ್ಸು ನಿರ್ಮಲವಾಗುತ್ತದೆ. ಮನಸ್ಸು ನಿರ್ಮಲವಾದರೆ ನಮ್ಮ ದೇಹಕ್ಕೆ ಚೈತನ್ಯ ಬರುತ್ತದೆ ಎಂದರು.

ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಕ್ಕಿಆಲೂರಿನÜ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಾಣೇಬೆನ್ನೂರ ಶನಿಶ್ವರ ಮಠದ ಶಿವಯೋಗೀ ಸ್ವಾಮೀಜಿ ಮಾತನಾಡಿದರು

ತಿಪ್ಪಾಯಿಕೊಪ್ಪದ ಮಹಾಂತ ದೇವರು, ಅಕ್ಕಿಆಲೂರಿನ ಶಿವಬಸವೇಶ್ವರ ಸ್ವಾಮೀಜಿ, ಹೆರೂರ ಗುಬ್ಬಿ ನಂಜುಂಡೇಶ್ವರ ಸ್ವಾಮೀಜಿ, ಹಿರೇಮುಗದೂರಿನ ಪ್ರಮುಖರಾದ ಬಸವರಾಜ ಕನವಳ್ಳಿ, ಬಿ ಡಿ ಕೊಳುರ, ಗದಿಗಯ್ಯಸ್ವಾಮಿ ಹಿರೇಮಠ, ಶಂಭುಲಿಂಗಯ್ಯ ಮಠದ, ಕಾಂತರಡ್ಡಿ ಶಟ್ಟೇಪ್ಪನವರ, ರುದ್ರಗೌಡ ಮರಿಗೌಡ್ರ, ರೇಣುಖಯ್ಯ ಪಾಟೀಲ ಸೇರಿದಂತೆ ನೂರಾರು ಪಾದಯಾತ್ರಾರ್ಥಿಗಳಿದ್ದರು.

ನಂತರ ಗುತ್ತಲಕ್ಕೆ ಆಗಮಿಸಿದ ಬಳಿಕ ಕಲ್ಮಠದ ಗುರುಸಿದ್ಧ ಸ್ವಾಮೀಜಿ ಹಾಗೂ ಮಠದ ಭಕ್ತರು ನೆಗಳೂರ ಶ್ರೀಗಳು ಹಾಗೂ ಪಾದಯಾತ್ರಾರ್ಥಿಗಳನ್ನು ಮೆರವಣಿಗೆ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಸಿ.ಬಿ ಕುರುವತ್ತಿಗೌಡ್ರ, ಈರಪ್ಪ ಲಮಾಣಿ, ಲಿಂಗೇಶ ಬೆನ್ನೂರ, ಶಿವಣ್ಣ ನಂದಿಗೊಣ್ಣನವರ, ಕೋಟ್ರೇಶಪ್ಪ ಅಂಗಡಿ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ