ಆ್ಯಪ್ನಗರ

ನೆರೆ ಚಿಂತೆ, ನೆರವಿನ ಒರತೆ

ಹಾವೇರಿ: ಜಿಲ್ಲಾದ್ಯಂತ ಕಳೆದ ಒಂದು ವಾರದಿಂದ ಅಬ್ಬರಿಸಿದ್ದ ವರುಣ ಭಾನುವಾರ ಬಹುತೇಕ ಶಾಂತನಾಗಿದ್ದರೂ ನೆರೆ ಹಾವಳಿ ಕಡಿಮೆಯಾಗಿಲ್ಲ. ಧರ್ಮಾ ಮತ್ತು ವರದಾ ನದಿ ನೀರಿನ ಮಟ್ಟ ಸ್ವಲ್ಪ ಇಳಿಕೆಯಾಗಿದೆ. ಆದರೆ, ತುಂಗಾಭದ್ರಾ ಹಾಗೂ ಕುಮದ್ವತಿ ನದಿಯ ನೀರಿನ ಹರಿಯುವ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ.

Vijaya Karnataka 12 Aug 2019, 5:00 am
ಹಾವೇರಿ: ಜಿಲ್ಲಾದ್ಯಂತ ಕಳೆದ ಒಂದು ವಾರದಿಂದ ಅಬ್ಬರಿಸಿದ್ದ ವರುಣ ಭಾನುವಾರ ಬಹುತೇಕ ಶಾಂತನಾಗಿದ್ದರೂ ನೆರೆ ಹಾವಳಿ ಕಡಿಮೆಯಾಗಿಲ್ಲ. ಧರ್ಮಾ ಮತ್ತು ವರದಾ ನದಿ ನೀರಿನ ಮಟ್ಟ ಸ್ವಲ್ಪ ಇಳಿಕೆಯಾಗಿದೆ. ಆದರೆ, ತುಂಗಾಭದ್ರಾ ಹಾಗೂ ಕುಮದ್ವತಿ ನದಿಯ ನೀರಿನ ಹರಿಯುವ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ.
Vijaya Karnataka Web HVR-11 HAVERI 3 A--


ಜಿಲ್ಲಾದ್ಯಂತ ಭಾನುವಾರ ಒಟ್ಟು 59.1 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಈ ಪೈಕಿ ಹಿರೇಕೆರೂರ ತಾಲೂಕಿನಲ್ಲಿ ಅತಿ ಹೆಚ್ಚು (20.6), ಹಾನಗಲ್ಲ (8.4), ಶಿಗ್ಗಾವಿ (12.6), ಸವಣೂರ (6.5), ಹಾವೇರಿ (5), ರಾಣೇಬೆನ್ನೂರ ಮತ್ತು ಬ್ಯಾಡಗಿ ತಲಾ (3) ಮಿ.ಮೀ. ಮಳೆಯಾಗುವ ಮೂಲಕ ವರುಣನ ಪ್ರಭಾವ ತಗ್ಗಿದೆ. ಸೂರ್ಯದೇವ ಭಾನುವಾರ ದರ್ಶನ ನೀಡಿದ್ದಾನೆ.

ಇನ್ನೂ ಮುಳುಗಿವೆ ಸೇತುವೆ: ಹಾವೇರಿ ತಾಲೂಕಿನ ಕರಜಗಿ-ಕಲಕೋಟಿ ಸಂಪರ್ಕ ಸೇತುವೆ, ಹಾಂವಶಿ-ಶಾಕಾರ, ನೀರಲಗಿ, ಹಾಲಗಿ-ಮರೋಳ, ಹೊಸರಿತ್ತಿ, ಕೊಣತಂಬಗಿ, ಸಂಗೂರ, ಬೆಳವಗಿ, ಸವಣೂರ ತಾಲೂಕಿನ ಕಳಸೂರು, ಮೆಳ್ಳಾಗಟ್ಟಿ, ಹಾನಗಲ್ಲ ತಾಲೂಕಿನಲ್ಲಿ ಕೂಡಲ, ಲಕ್ಮಾಪುರ, ಶೇಷಗಿರಿ, ಹಿರೇಕೆರೂರ ತಾಲೂಕಿನ ತಿಪ್ಪಾಯಿಕೊಪ್ಪ, ಹಿರೇಮೊರಬ, ಚಿಕ್ಕಮೊರಬ, ರಟ್ಟಿಹಳ್ಳಿ ತಾಲೂಕಿನ ಎಲಿವಾಳ, ಮಾಸೂರು, ಮಾಳಗಿ, ಹೆಡಿಗೊಂಡ, ಬಡಸಂಗಾಪುರ, ಕುಡಪಲಿ, ಬ್ರಿಡ್ಜ ಕಂ ಬ್ಯಾರೇಜ್‌ ಸಂಪೂರ್ಣ ಜಲಾವ್ರತಗೊಂಡಿವೆ. ತೋಡಗಂಟಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ರಾಣೇಬೆನ್ನೂರ ತಾಲೂಕಿನ ಹಿರೇಮಾಗನೂರ, ಚಿಕ್ಕಮಾಗನೂರ, ಲಿಂಗದಹಳ್ಳಿ, ಸೇರಿದಂತೆ ತುಂಗಾಭದ್ರಾ ಮತ್ತು ಕುಮದ್ವತಿ ನದಿಯ ಸೇತುವೆಗಳು, ಬ್ರಿಡ್ಜ್‌ ಕಂ ಬ್ಯಾರೇಜ್‌, ಹಳ್ಳದ ರಸ್ತೆಗಳು ಸಂಪೂರ್ಣ ಮುಳುಗಿವೆ.

ನೆರವಿನ ಮಹಾಪೂರ: ಜಿಲ್ಲಾದ್ಯಂತ ನೆರೆ ಸಂತ್ರಸ್ತರಿಗೆ ಮಠಗಳು, ಸಂಘ ಸಂಸ್ಥೆಗಳು, ವಿವಿಧ ಸಂಘಟನೆಗಳು ನೆರವಿಗೆ ಧಾವಿಸುತ್ತಿವೆ. ನಗದು, ಬಟ್ಟೆ, ಅಡುಗೆ ಸಾಮಗ್ರಿಗಳನ್ನು ಪೂರೈಸುತ್ತಿವೆ.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಬೊಮ್ಮಾಯಿ, ಶಾಸಕ ನೆಹರು ಓಲೇಕಾರ, ಸಂಸದ ಶಿವಕುಮಾರ ಉದಾಸಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿ.ಪಂ. ಅಧ್ಯಕ್ಷರು, ಸದಸ್ಯರು, ಶಾಸಕರು, ಜನಪ್ರತಿನಿಧಿಗಳು ನಿರಾಶ್ರಿತರ ಸ್ಥಳಗಳಿಗೆ ಭೇಟಿ ನೀಡಿ ಸಂಕಷ್ಟಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡುತ್ತಿದ್ದಾರೆ.

ಕುಮದ್ವತಿ, ತುಂಗಭದ್ರಾ ಅಬ್ಬರ: ಶಿವಮೊಗ್ಗ, ಶಿಕಾರಿಪುರದಲ್ಲಿ ಮಳೆ ಹೆಚ್ಚಾಗಿದ್ದು, ಭದ್ರಾ ಡ್ಯಾಂನಿಂತ ಹೊರ ಹರಿವು ಹೆಚ್ಚಳವಾಗಿದೆ. ಹೀಗಾಗಿ ಕುಮದ್ವತಿ ಮತ್ತು ತುಂಗಭದ್ರಾ ನದಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಸಾವಿರಾರು ಹೆಕ್ಟರ್‌ ಪ್ರದೇಶ ಬೆಳೆ ಹಾನಿಯಾಗಿದೆ. ಇನ್ನೂ ಹತ್ತಾರು ಗ್ರಾಮಗಳು ಮುಳುಗುವ ಭೀತಿಯಲ್ಲಿವೆ.

ಗೋಶಾಲೆ ಆರಂಭ: ನೆರೆ ಹಾವಳಿಯಲ್ಲಿ ಸಿಲುಕಿರುವ ಜಾನುವಾರುಗಳ ರಕ್ಷಣೆಗೆ ಮುಂದಾಗಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿ ಒಟ್ಟು 3 ಗೋಶಾಲೆಗಳನ್ನು ತೆರೆದು ಆರೈಕೆ ಮಾಡುತ್ತಿದೆ. ಹಿರೇಕೆರೂರು ತಾಲೂಕಿನ ಮಾಸೂರಲ್ಲಿ ಒಂದು ಗೋಶಾಲೆ ತೆರೆದಿದ್ದು, 9 ಜಾನುವಾರುಗಳನ್ನು ರಕ್ಷಿಸಲಾಗಿದೆ. ಶಿಗ್ಗಾವಿ ತಾಲೂಕಿನ ಚಾಕಾಪುರದ ಗೋಶಾಲೆಯಲ್ಲಿ 48 ಜಾನುವಾರು ಮತ್ತು ಹಾವೇರಿ ತಾಲೂಕಿನ ವರದಾಹಳ್ಳಿಯ ಗೋಶಾಲೆಯಲ್ಲಿ 72 ಜಾನುವಾರುಗಳನ್ನು ಪೋಷಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ