ಹಾವೇರಿ: ಸಿಲೆಂಡರ್ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರದೇಶ ಜಿಲ್ಲಾಕಾಂಗ್ರೆಸ್ ಕಮೀಟಿ ಹಾವೇರಿ ಹಾಗೂ ಮಹಿಳಾ ಕಾಂಗ್ರೆಸ್ ಕಮೀಟಿ ನೇತೃತ್ವದಲ್ಲಿಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಸೋಮವಾರ ಮೈಲಾರ ಮಹಾದೇವಪ್ಪ ಸರ್ಕಲ್ನಲ್ಲಿಸಿಲೆಂಡರ್ ಪಕ್ಕಕ್ಕೆ ಇಟ್ಟು ಸೌದೆಯಿಂದ ಒಲೆ ಹಚ್ಚಿ ನೀರು ಕಾಯಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಈ ವೇಳೆ ಮುಖಂಡರು ಮಾತನಾಡಿ, ಜನಸಾಮಾನ್ಯರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ. ವರ್ಷದಲ್ಲಿನಾಲ್ಕಾರು ಸಲ ಸಿಲೆಂಡರ್, ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಲಾಗುತ್ತಿದ್ದು, ಇದರಿಂದ ಜನತೆ ಸಂಕಷ್ಟಕ್ಕೀಡಾಗುವಂತಾಗಿದೆ. ಕೂಡಲೇ ಕೇಂದ್ರ ಸರಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮುಂದಾಗುವಂತೆ ಆಗ್ರಹಿಸಿದರು.
ಪ್ರಧಾನ ಮಂತ್ರಿ ಮೋದಿ ನೇತೃತ್ವದ ಕೇಂದ್ರ ಸರಕಾರ ಬಡವರ ಪರ ಕೆಲಸ ಮಾಡುವುದಾಗಿ, ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವುದಾಗಿ ಹೇಳಿ ಯಾವುದೇ ಉದ್ಯೋಗ ನೀಡದೆ ಎಲ್ಲಾಬೆಲೆಗಳನ್ನು ಏರಿಕೆ ಮಾಡುತ್ತಲೇ ಬಡ ಜನರನ್ನು ಸಂಕಷ್ಟಕ್ಕೆ ತಳ್ಳಿ ಅವರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ಯಾಸ್ ಸಿಲೆಂಡರ್ 700 ರೂ. ಇದ್ದು ಈಗ ಬೆಲೆ ಏರಿಕೆಯಿಂದ ಒಂದು ಸಾವಿರ ರೂ.ಗೆ ಏರಿಕೆ ಮಾಡಿದ್ದಾರೆ. ಬಡ ಮಹಿಳೆಯರು ಸಿಲೆಂಡರ್ ಖರೀದಿಸಲಾಗದೆ ಮರಳಿ ಸೌದೆಗೆ ಮೊರೆ ಹೋಗುತ್ತಿದ್ದಾರೆ. ಇದ್ದರಿಂದ ಮಹಿಳೆಯರು ದಮ್ಮು, ಅಸ್ತಮ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದರು.
ಅನಿಲ ಬೆಲೆ ಏರಿಕೆಯಿಂದ ಬಡವರ ಪಾಡು ಹೇಳತೀರದಾಗಿದೆ. ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಕೇಂದ್ರ ಸರಕಾರ ಸಿಲೆಂಡರ್ ಬೆಲೆ ಏರಿಕೆ ಕಡಿಮೆ ಮಾಡಬೇಕು. ಇಲ್ಲವಾದರೆ ಬರುವ ದಿನಗಳಲ್ಲಿಕೇಂದ್ರ ಸರಕಾರದ ವಿರುದ್ಧ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿಪ್ರೇಮಾ ಪಾಟೀಲ, ವಸಂತಾ ಬಾಗೂರ, ಹಶಮತ್ ರಿತ್ತಿ, ಪ್ರೇಮಾ ಅಂಗಡಿ, ಶಶಿಕಲಾ ಆರಿಕಟ್ಟಿ, ಉಮೀದ್ ನದಾಫ್, ಬಸಮ್ಮ ಹಿರೇಮಠ, ಸಾವಿತ್ರಿ ಮಿಟಾಯಿಗಾರ, ಲೀಲಾವತಿ ಹೊಸಕಟ್ಟಿ, ಶಮಶಾದ ಕುಪೇಲೂರ, ಲತಾ ದಾನಪ್ಪನವರ, ಶೋಭಾ ಯೋಗಿಕೊಪ್ಪ, ಮಾಲತೇಶ ಬಿಜ್ಜಹಳ್ಳಿ, ಶಾಂತವ್ವ ಹೊನ್ನಣ್ಣವರ, ಎಂ.ಎಂ. ಮೈದೂರ, ಸತೀಶ ಈಳಿಗೇರ, ಕುಮಾರ ರಾಮಾಪುರ, ಗಣೇಶ ಬಿಷ್ಟಣ್ಣನವರ ಸೇರಿದಂತೆ ಉಪಸ್ಥಿತರಿದ್ದರು.
ಈ ವೇಳೆ ಮುಖಂಡರು ಮಾತನಾಡಿ, ಜನಸಾಮಾನ್ಯರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ. ವರ್ಷದಲ್ಲಿನಾಲ್ಕಾರು ಸಲ ಸಿಲೆಂಡರ್, ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಲಾಗುತ್ತಿದ್ದು, ಇದರಿಂದ ಜನತೆ ಸಂಕಷ್ಟಕ್ಕೀಡಾಗುವಂತಾಗಿದೆ. ಕೂಡಲೇ ಕೇಂದ್ರ ಸರಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮುಂದಾಗುವಂತೆ ಆಗ್ರಹಿಸಿದರು.
ಪ್ರಧಾನ ಮಂತ್ರಿ ಮೋದಿ ನೇತೃತ್ವದ ಕೇಂದ್ರ ಸರಕಾರ ಬಡವರ ಪರ ಕೆಲಸ ಮಾಡುವುದಾಗಿ, ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವುದಾಗಿ ಹೇಳಿ ಯಾವುದೇ ಉದ್ಯೋಗ ನೀಡದೆ ಎಲ್ಲಾಬೆಲೆಗಳನ್ನು ಏರಿಕೆ ಮಾಡುತ್ತಲೇ ಬಡ ಜನರನ್ನು ಸಂಕಷ್ಟಕ್ಕೆ ತಳ್ಳಿ ಅವರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ಯಾಸ್ ಸಿಲೆಂಡರ್ 700 ರೂ. ಇದ್ದು ಈಗ ಬೆಲೆ ಏರಿಕೆಯಿಂದ ಒಂದು ಸಾವಿರ ರೂ.ಗೆ ಏರಿಕೆ ಮಾಡಿದ್ದಾರೆ. ಬಡ ಮಹಿಳೆಯರು ಸಿಲೆಂಡರ್ ಖರೀದಿಸಲಾಗದೆ ಮರಳಿ ಸೌದೆಗೆ ಮೊರೆ ಹೋಗುತ್ತಿದ್ದಾರೆ. ಇದ್ದರಿಂದ ಮಹಿಳೆಯರು ದಮ್ಮು, ಅಸ್ತಮ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದರು.
ಅನಿಲ ಬೆಲೆ ಏರಿಕೆಯಿಂದ ಬಡವರ ಪಾಡು ಹೇಳತೀರದಾಗಿದೆ. ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಕೇಂದ್ರ ಸರಕಾರ ಸಿಲೆಂಡರ್ ಬೆಲೆ ಏರಿಕೆ ಕಡಿಮೆ ಮಾಡಬೇಕು. ಇಲ್ಲವಾದರೆ ಬರುವ ದಿನಗಳಲ್ಲಿಕೇಂದ್ರ ಸರಕಾರದ ವಿರುದ್ಧ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿಪ್ರೇಮಾ ಪಾಟೀಲ, ವಸಂತಾ ಬಾಗೂರ, ಹಶಮತ್ ರಿತ್ತಿ, ಪ್ರೇಮಾ ಅಂಗಡಿ, ಶಶಿಕಲಾ ಆರಿಕಟ್ಟಿ, ಉಮೀದ್ ನದಾಫ್, ಬಸಮ್ಮ ಹಿರೇಮಠ, ಸಾವಿತ್ರಿ ಮಿಟಾಯಿಗಾರ, ಲೀಲಾವತಿ ಹೊಸಕಟ್ಟಿ, ಶಮಶಾದ ಕುಪೇಲೂರ, ಲತಾ ದಾನಪ್ಪನವರ, ಶೋಭಾ ಯೋಗಿಕೊಪ್ಪ, ಮಾಲತೇಶ ಬಿಜ್ಜಹಳ್ಳಿ, ಶಾಂತವ್ವ ಹೊನ್ನಣ್ಣವರ, ಎಂ.ಎಂ. ಮೈದೂರ, ಸತೀಶ ಈಳಿಗೇರ, ಕುಮಾರ ರಾಮಾಪುರ, ಗಣೇಶ ಬಿಷ್ಟಣ್ಣನವರ ಸೇರಿದಂತೆ ಉಪಸ್ಥಿತರಿದ್ದರು.