ಆ್ಯಪ್ನಗರ

ಮತ ಬಹಿಷ್ಕಾರಕ್ಕೆ ಇನ್ನೂ ಕೊಟ್ಟಿಲ್ಲ ಮದ್ದು

ಬ್ಯಾಡಗಿ: ಆಣೂರು ಕೆರೆ ಯೋಜನೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಬ್ಯಾಡಗಿ ತಾಲೂಕಿನ ವಿವಿಧ ಗ್ರಾಮಸ್ಥರು, ಹೋರಾಟದ ಮುಂದುವರಿದ ಭಾಗವಾಗಿ ಮತದಾನ ಬಹಿಷ್ಕಾರ ಎಚ್ಚರಿಕೆ ನೀಡಿದರೂ ಚುನಾವಣೆ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಲು ಮುಂದಾಗದಿರುವುದು ಅಚ್ಚರಿ ಮೂಡಿಸಿದೆ.

Vijaya Karnataka 11 Apr 2019, 5:00 am
ಬ್ಯಾಡಗಿ: ಆಣೂರು ಕೆರೆ ಯೋಜನೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಬ್ಯಾಡಗಿ ತಾಲೂಕಿನ ವಿವಿಧ ಗ್ರಾಮಸ್ಥರು, ಹೋರಾಟದ ಮುಂದುವರಿದ ಭಾಗವಾಗಿ ಮತದಾನ ಬಹಿಷ್ಕಾರ ಎಚ್ಚರಿಕೆ ನೀಡಿದರೂ ಚುನಾವಣೆ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಲು ಮುಂದಾಗದಿರುವುದು ಅಚ್ಚರಿ ಮೂಡಿಸಿದೆ.
Vijaya Karnataka Web no drug is yet to be dismissed
ಮತ ಬಹಿಷ್ಕಾರಕ್ಕೆ ಇನ್ನೂ ಕೊಟ್ಟಿಲ್ಲ ಮದ್ದು


ತಾಲೂಕಿನಲ್ಲಿ ಉಂಟಾಗಿರುವ ಜಲ ಕ್ಷಾಮಕ್ಕೆ ಮದ್ದು ನೀಡಬೇಕಾದ ತಾಲೂಕಾಡಳಿತ ಚುನಾವಣೆ ಕಾರ್ಯದಲ್ಲಿ ಬ್ಯುಸಿಯಾಗಿದೆ. ನೀತಿ ಸಂಹಿತೆ ನೆಪದಿಂದ ಕೆರೆ ತುಂಬಿಸುವ ಯೋಜನೆ ಜಾರಿಯಾಗುತ್ತಿಲ್ಲ.

10 ಗ್ರಾಮಗಳಲ್ಲಿ ಮಹಿಷ್ಕಾರ: ಕೆರೆ ತುಂಬಿಸಿದಿದ್ದರೆ ಮತದಾನ ಬಹಿಷ್ಕಾರ ಎಂದು ಘೋಷಿಸಿರುವ ತಾಲೂಕಿನ ಆಣೂರ, ಬನ್ನಿಹಟ್ಟಿ, ಕೆರವಡಿ, ಕೊಲ್ಲಾಪುರ, ನಾಗಲಾಪೂರ, ಶಿಡೆನೂರ, ಬಿಸಲಹಳ್ಳಿ, ಮಾಸಣಗಿ ಅಂಗರಗಟ್ಟಿ ಸೇರಿದಂತೆ 10 ಕ್ಕೂ ಹೆಚ್ಚು ಗ್ರಾಮಗಳು ಈಗಾಗಲೆ ಮತದಾನದಿಂದ ದೂರ ಉಳಿಯಲು ಸಜ್ಜಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಜಾಗೃತಿಗೆ ಸೀಮಿತ: ಆರಂಭದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮತದಾನ ಬಹಿಷ್ಕಾರ ಶಮನಕ್ಕೆ ಸಭೆ ನಡೆಯಿತಾದರೂ ವಿಫಲಗೊಂಡಿತು. ನಂತರ ಯಾವೊಬ್ಬ ಚುನಾವಣೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ಮತದಾರರ ಮನವೊಲಿಸಲು ಮುಂದಾಗಿಲ್ಲ. ಚುನಾವಣಾ ಆಯೋಗ ಮತದಾನ ಪ್ರಮಾಣ ಹೆಚ್ಚಳ ಮಾಡುವಲ್ಲಿ ಕೋಟಿಗಟ್ಟಲೆ ಹಣ ವ್ಯಯ ಮಾಡಿ ಜಾಗೃತಿ ಕಾರ‍್ಯಕ್ರಮಗಳನ್ನು ಮಾಡಿದ್ದು ಬಿಟ್ಟರೆ ಬಹಿಷ್ಕಾರ ಶಮನಕ್ಕೆ ಯತ್ನ ನಡೆದಿಲ್ಲ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ