ಆ್ಯಪ್ನಗರ

ಧರ್ಮ, ಧಾರ್ಮಿಕತೆ ಯಾರೂ ಮರೆಯಬೇಡಿ

ಶಿಗ್ಗಾವಿ: ಧಾರ್ಮಿಕ ಕಾರ್ಯಗಳಲ್ಲಿಪಾಲ್ಗೊಳ್ಳುವ ಸುಖವೇ ಬೇರೆ, ಅದರಿಂದ ದೊರೆಯುವ ಫಲ ಇಡೀ ಕುಟುಂಬವನ್ನು ಸಲಹುತ್ತದೆ. ಭಗವಂತನ ನಾಮಸ್ಮರಣೆ ನಿರಂತರ ಮಾಡಿದಾಗ ಸುತ್ತಲಿನ ಸಮಾಜ ನೆಮ್ಮದಿಯ ಬದುಕು ಕಂಡುಕೊಳ್ಳುತ್ತದೆ. ಹೀಗಾಗಿ ಧರ್ಮ ಮತ್ತು ಧಾರ್ಮಿಕತೆಯನ್ನು ಯಾರೂ ಮರೆಯಬಾರದು ಎಂದು ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾ ಸ್ವಾಮಿಜಿ ಹೇಳಿದರು.

Vijaya Karnataka 2 Dec 2019, 5:00 am
ಶಿಗ್ಗಾವಿ: ಧಾರ್ಮಿಕ ಕಾರ್ಯಗಳಲ್ಲಿಪಾಲ್ಗೊಳ್ಳುವ ಸುಖವೇ ಬೇರೆ, ಅದರಿಂದ ದೊರೆಯುವ ಫಲ ಇಡೀ ಕುಟುಂಬವನ್ನು ಸಲಹುತ್ತದೆ. ಭಗವಂತನ ನಾಮಸ್ಮರಣೆ ನಿರಂತರ ಮಾಡಿದಾಗ ಸುತ್ತಲಿನ ಸಮಾಜ ನೆಮ್ಮದಿಯ ಬದುಕು ಕಂಡುಕೊಳ್ಳುತ್ತದೆ. ಹೀಗಾಗಿ ಧರ್ಮ ಮತ್ತು ಧಾರ್ಮಿಕತೆಯನ್ನು ಯಾರೂ ಮರೆಯಬಾರದು ಎಂದು ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾ ಸ್ವಾಮಿಜಿ ಹೇಳಿದರು.
Vijaya Karnataka Web no one forgets religion religion
ಧರ್ಮ, ಧಾರ್ಮಿಕತೆ ಯಾರೂ ಮರೆಯಬೇಡಿ


ಪಟ್ಟಣದ ವಿರಕ್ತಮಠದ ಸಂಗನಬಸವ ಕಲ್ಯಾಣ ಮಂಟಪದಲ್ಲಿಶಿಗ್ಗಾವಿ- ಸವಣೂರು ಹಾಗೂ ಬಂಕಾಪುರ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರು ಏರ್ಪಡಿಸಿದ ದೈವಜ್ಞ ದರ್ಶನ ಬೋಧನೆ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಒಳ್ಳೆಯ ಹಾಗೂ ಕೆಟ್ಟ ನಡುವಳಿಕೆಗಳನ್ನು ನಮ್ಮ ಆಯ್ಕೆಯನ್ನಾಗಿಸಿ ಜೀವನದಲ್ಲಿನಡೆದುಕೊಳ್ಳಬೇಕು ಎಂದರು.

ಬಿತ್ತಿದ್ದನ್ನೇ ಬೆಳೆಯನ್ನಾಗಿ ಕಾಣಬೇಕಾಗುತ್ತದೆ. ಒಳ್ಳೆಯದನ್ನೇ ಅಪೇಕ್ಷಿಸಿದಾಗ ಒಳ್ಳೆಯದನ್ನೇ ಪಡೆಯುತ್ತೇವೆ. ಶಿಕ್ಷಣ ವಂಚಿತರಿಗೆ ಅಸಹಾಯಕರಿಗೆ ಸಹಾಯ ಸಹಕಾರ ಮಾಡಬೇಕು. ದಾನ ಧರ್ಮದ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದರು. ಜೀವನದಲ್ಲಿಉತ್ತಮ ಕಾರ್ಯಕ್ರಮಕ್ಕೆ ಸಮಯ ಮೀಸಲಿರಿಸಿ, ಪ್ರತಿವರ್ಷ ದೇವರ ಪೂಜೆ, ಸಂಧ್ಯಾವಂದನೆ, ಯೋಗ, ಧ್ಯಾನದಂತಹ ಧಾರ್ಮಿಕ ಆಚರಣೆ ಆಚರಿಸುವುದು ಧರ್ಮ ಜಾಗೃತಿಗಾಗಿ ಎಂದರು.

ವಿರಕ್ತಮಠದ ಸಂಗನಬಸವ ಶ್ರೀಗಳು ಸಾನ್ನಿಧ್ಯವಹಿಸಿ ಮಾತನಾಡಿ, ಸದ್ಯ ಅರಮನೆಯಲ್ಲಿಅರಸನ ಕಾಣಲು ಸಿಗಲಾರನು. ಗುರುಮಠ ಮಾನ್ಯಗಳ ಜೀವಂತಿಕೆ ನಾಡಿನಲ್ಲಿಇಂದು ಹಾಳಾಗಿಲ್ಲ. ಸತ್ಯದ ನಿಲುವು ತಿಳಿಯಲು ಧರ್ಮಭೋಧನೆ, ಉಪದೇಶಗಳು, ಧರ್ಮಸಾರಗಳು ತಿಳಿದುಕೊಳ್ಳಬೇಕು. ಮಠಗಳು ಪ್ರಜ್ಞಾವಂತರನ್ನು ತಯಾರಿಸುವ ಜೀವಂತಿಕೆಯ ಕೇಂದ್ರಗಳು ಎಂದ ಅವರು ಕಲಿಸಿಕೊಡುವ ತಾಣಗಳು. ಸಂಸ್ಕೃತಿ ಧರ್ಮೋಪದೇಶ ಸದ್ಗುಣಗಳನ್ನು ಕಲಿತು ಆತ್ಮಸಾಕ್ಷಿಯಿಂದ ನಡೆದುಕೊಳ್ಳಬೇಕು ಎಂದರು.

ಬೆಳಿಗ್ಗೆ ಸವಣೂರು ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಗಳ ಭವ್ಯ ಮೆರವಣಿಗೆ ಸಕಲವಾದ್ಯ ವೈಭವಗಳೊಂದಿಗೆ ಜರುಗಿತು.

ದೈವಜ್ಞ ಸಮಾಜದ ಅಧ್ಯಕ್ಷ ಸುಧಾಕರ ದೈವಜ್ಞ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಾಂತ ಪಾಲನಕರ, ವಾಸುದೇವ ರಾಯ್ಕರ, ಪ್ರಕಾಶ ವರ್ಣೇಕರ, ದತ್ತಣ್ಣ ವರ್ಣೇಕರ, ಮೋಹನ ರಾಯ್ಕರ, ದಿವಾಕರ ವರ್ಣೇಕರ, ವೀಣಾ ಕುರ್ಡೆಕರ, ವಿನಾಯಕ ರಾಯ್ಕರ, ನಾಗರಾಜ ರಾಯ್ಕರ, ಶ್ರೀಕಾಂತ ದುಂಡಿಗೌಡ್ರ, ಜ್ಞಾನೇಶ್ವರಿ ದೈವಜ್ಞ ಮಹಿಳಾ ಸಮಾಜದ ಅಧ್ಯಕ್ಷರು ಸರ್ವ ಸದಸ್ಯರು. ದೈವಜ್ಞ ಕ್ಷೇಮಾಭಿವೃದ್ಧಿ ಸಂಘ ಬಂಕಾಪುರ, ಶಿಗ್ಗಾವಿ, ಸವಣೂರು ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ