ಆ್ಯಪ್ನಗರ

ನಾಮಪತ್ರ ವಾಪಸ್‌ ಪಡೆದ ಶ್ರೀಗಳು

ಹಿರೇಕೆರೂರು/ರಟ್ಟೀಹಳ್ಳಿ: ಉಪ ಚುನಾವಣೆಗೆ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಟ್ಟೀಹಳ್ಳಿ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಗುರುವಾರ ನಾಮಪತ್ರ ವಾಪಸ್‌ ಪಡೆಯುವ ಮೂಲಕ 3-4 ದಿನಗಳಿಂದ ಮೂಡಿದ ಗೊಂದಲಕ್ಕೆ ತೆರೆ ಎಳೆದ

Vijaya Karnataka 22 Nov 2019, 5:00 am
ಹಿರೇಕೆರೂರು/ರಟ್ಟೀಹಳ್ಳಿ: ಉಪ ಚುನಾವಣೆಗೆ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಟ್ಟೀಹಳ್ಳಿ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಗುರುವಾರ ನಾಮಪತ್ರ ವಾಪಸ್‌ ಪಡೆಯುವ ಮೂಲಕ 3-4 ದಿನಗಳಿಂದ ಮೂಡಿದ ಗೊಂದಲಕ್ಕೆ ತೆರೆ ಎಳೆದರು.
Vijaya Karnataka Web nomination withdrawn sri
ನಾಮಪತ್ರ ವಾಪಸ್‌ ಪಡೆದ ಶ್ರೀಗಳು


ಹಿರೇಕೆರೂರು ತಹಸೀಲ್ದಾರ್‌ ಕಚೇರಿಗೆ ನಾಮಪತ್ರ ವಾಪಸ್‌ ಪಡೆಯಲು ಆಗಮಿಸಿದ ಶ್ರೀಗಳಿಗೆ ಸಿಎಂ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಹೂಮಾಲೆ ಹಾಕಿ ಸ್ವಾಗತಿಸಿದರು. ಬಳಿಕ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ವಾಪಸ್‌ ಪಡೆದರು.

ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ, ಚನ್ನಗಿರಿ ತಾಲೂಕಿನ ತಾವರೆಕೆರೆ ಶ್ರೀ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಹುಣಸಗಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು ಮತ್ತಿತರರು ಇದ್ದರು. ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಶ್ರೀಗಳು ನಾಮಪತ್ರ ವಾಪಸ್‌ ಪಡೆಯಲು ಆಗಮಿಸಿದಾಗ ಜೆಡಿಎಸ್‌ ಪಕ್ಷದ ಯಾವೊಬ್ಬ ಕಾರ್ಯಕರ್ತರು, ಮುಖಂಡರು ಇರಲಿಲ್ಲ.

ನಾಮಪತ್ರ ವಾಪಸ್‌ ಪಡೆದ ಬಳಿಕ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿಎಂ ಪ್ರತಿನಿಧಿಯಾಗಿ ಸಂಸದ ಬಿ.ವೈ.ರಾಘವೇಂದ್ರ ಅವರು ಭರವಸೆ ನೀಡಿದ್ದಾರೆ. ತಾಲೂಕಿನ ಜನರ ಆಶೋತ್ತರ ಇಡೇರಿಸುವ ಭರವಸೆ ಮೇರೆಗೆ ನಾಮಪತ್ರ ವಾಪಸ್‌ ಪಡೆಯುತ್ತಿದ್ದೆನೆ. ಅಲ್ಲದೇ ಹಿರಿಯ ಮಠಾಧೀಶರ ಆದೇಶವೂ ಆಗಿದೆ. ಕುಮಾರಸ್ವಾಮಿಯವರೂ ನಿಮಗೆ ಒತ್ತಡವಾದರೆ ನಾಮಪತ್ರ ವಾಪಸ್‌ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ. ಆ ಕಾರಣದಿಂದ ನಾಮಪತ್ರ ವಾಪಸ್‌ ಪಡೆಯುತ್ತಿದ್ದೆನೆ ಎಂದು ಹೇಳಿದರು.

ಬಿ.ವೈ.ರಾಘವೇಂದ್ರ ಮಾತನಾಡಿ, ಶ್ರೀಗಳು ಜೆಡಿಎಸ್‌ದಿಂದ ಸ್ಪರ್ಧೆ ಮಾಡಿದ್ದರು. ರಂಭಾಪುರಿ, ಉಜ್ಜಯನಿ ಪೀಠದ ಶ್ರೀಗಳ ಸಮ್ಮುಖದಲ್ಲಿತಾಲೂಕಿನ ಜನರ ಆಶೋತ್ತರಗಳಿಗೆ ಪೂರಕವಾದ ಕೆಲಸ ಮಾಡುವ ಭರವಸೆ ನೀಡಿದ್ದೆವೆ. ಭರವಸೆ ಬಳಿಕ ಸ್ವಾಮೀಜಿ ನಾಮಪತ್ರ ವಾಪಸ್‌ ಪಡೆದಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿಎಸ್‌.ಎಸ್‌.ಪಾಟೀಲ,ಲಿಂಗರಾಜ ಚಪ್ಪರದಹಳ್ಳಿ, ಜಗದೀಶ ಪಾಟೀಲ, ಡಿ.ಸಿ.ಪಾಟೀಲ, ಮಹೇಂದ್ರ ಬಡಳ್ಳಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ