ಆ್ಯಪ್ನಗರ

ಬಿಜೆಪಿಯ ಯಾವುದೇ ಶಾಸಕರು ಮಾರಾಟಕ್ಕಿಲ್ಲ - ಡಿಸಿಎಂ ಲಕ್ಷ್ಮಣ ಸವದಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅತೃಪ್ತ ಶಾಸಕರನ್ನು ಸೆಳೆಯುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಸವದಿ, “ಆ ರೀತಿ ಆಗುವುದು ಬೇರೆ ಪಕ್ಷದಲ್ಲಿ, ನಮ್ಮಲ್ಲಿ ಅಲ್ಲ. ಹೀಗಾಗಿ ಯಾರೂ ಮಾರಾಟವಾಗುವುದಿಲ್ಲ, ಯಾರೂ ಸೆಳೆಯುವುದಿಲ್ಲ,” ಎಂದು ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು.

Vijaya Karnataka 29 May 2020, 6:25 pm

ಹಾವೇರಿ: ಬಿಜೆಪಿಯ ಯಾವುದೇ ಶಾಸಕರು ಮಾರಾಟಕ್ಕಿಲ್ಲ. ಅವರೆಲ್ಲರು ಅತ್ಯಂತ ಪ್ರಾಮಾಣಿಕರು, ನಿಷ್ಠೆಯನ್ನು ಹೊಂದಿರುವ ಶಾಸಕರು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
Vijaya Karnataka Web Laxman Savadi


ಬಿಜೆಪಿಯಲ್ಲಿ ಭಿನ್ನಮತ ಶುರುವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅತೃಪ್ತ ಶಾಸಕರನ್ನು ಸೆಳೆಯುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಆ ರೀತಿ ಆಗುವುದು ಬೇರೆ ಪಕ್ಷದಲ್ಲಿ, ನಮ್ಮಲ್ಲಿ ಅಲ್ಲ. ಹೀಗಾಗಿ ಯಾರು ಮಾರಾಟವಾಗುವುದಿಲ್ಲ, ಯಾರೂ ಸೆಳೆಯುವುದಿಲ್ಲ,” ಎಂದು ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು.

'ಕತ್ತಿ' ಮಸೆಯುತ್ತಿರುವ ಅತ್ಯಾಪ್ತರು: ಸಿದ್ದು ಆಯ್ತು ಈಗ ಬಿಎಸ್‌ವೈ ಸರದಿ!

ಶಾಸಕರ ರಹಸ್ಯ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, “ಈ ಬಗ್ಗೆ ಉಮೇಶ ಕತ್ತಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. 'ಉತ್ತರ ಕರ್ನಾಟಕದ ಅನೇಕ ಶಾಸಕರು ಊಟಕ್ಕೆ ಸೇರಿದ್ದೇವೆ. ಕೊರೊನಾದ ಈ ಸಂದರ್ಭ ಊಟಕ್ಕೆ ತೊಂದರೆ ಆಗಬಾರದು ಅಂತ ಒಂದೆಡೆ ಕೂತಿದ್ದೇವೆ' ಎಂದಿದ್ದಾರೆ. ಯಾವುದೇ ಭಿನ್ನಮತ, ಕಾರ್ಯಾಚರಣೆ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ ನಾವು ಹೇಳುವುದು ಏನೂ ಇಲ್ಲ,” ಎಂದು ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

'ರಾಜ್ಯದಲ್ಲಿ ಶೀಘ್ರ ಚುನಾವಣೆ, ಬಿಜೆಪಿಯವರಿಂದಲೇ ಸರಕಾರ ಪತನʼ: ಡಿ.ಕೆ.ಸುರೇಶ್‌ ಭವಿಷ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ