ಆ್ಯಪ್ನಗರ

ಕೆಲಸಕ್ಕೆ ಬಾರದ ಅಧಿಕಾರಿ, ಸಿಬ್ಬಂದಿ

ಬ್ಯಾಡಗಿ: ಮಳೆ ಪ್ರವಾಹ ಹಿನ್ನೆಲೆಯಲ್ಲಿ ಪರಿಹಾರ ಕಾರ‍್ಯಗಳನ್ನು ಕೈಗೊಳ್ಳವ ಎಲ್ಲ ಇಲಾಖೆ ಅಧಿಕಾರಿಗಳಿಗೆ ಶನಿವಾರ ಹಾಗೂ ಭಾನುವಾರವೂ ಕೆಲಸಕ್ಕೆ ಹಾಜರಾಗುವಂತೆ ನೀಡಿದ್ದ ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆ ಕ್ಯಾರೆ ಅನ್ನದ ಪಟ್ಟಣದ ವಿವಿಧ ಇಲಾಖೆ ಅಧಿಕಾರಿಗಳು ಕೆಲಸಕ್ಕೆ ಗೈರುಹಾಜರಾಗಿದ್ದರು.

Vijaya Karnataka 12 Aug 2019, 5:00 am
ಬ್ಯಾಡಗಿ: ಮಳೆ ಪ್ರವಾಹ ಹಿನ್ನೆಲೆಯಲ್ಲಿ ಪರಿಹಾರ ಕಾರ‍್ಯಗಳನ್ನು ಕೈಗೊಳ್ಳವ ಎಲ್ಲ ಇಲಾಖೆ ಅಧಿಕಾರಿಗಳಿಗೆ ಶನಿವಾರ ಹಾಗೂ ಭಾನುವಾರವೂ ಕೆಲಸಕ್ಕೆ ಹಾಜರಾಗುವಂತೆ ನೀಡಿದ್ದ ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆ ಕ್ಯಾರೆ ಅನ್ನದ ಪಟ್ಟಣದ ವಿವಿಧ ಇಲಾಖೆ ಅಧಿಕಾರಿಗಳು ಕೆಲಸಕ್ಕೆ ಗೈರುಹಾಜರಾಗಿದ್ದರು.
Vijaya Karnataka Web HVR-11BYD6A


ಎಲ್ಲಾ ಸರಕಾರಿ ಕಛೇರಿಗಳಲ್ಲಿ ಶನಿವಾರ ಹಾಗೂ ಭಾನುವಾರವು ಅಧಿಕಾರಿಗಳು ಹಾಜರಿರುವಂತೆ ಜಿಲ್ಲಾಧಿಕಾರಿಗಳು ಸ್ಪಷ್ಟ ಆದೇಶ ನೀಡಿದ್ದರು. ಆದರೆ ಪಟ್ಟಣದಲ್ಲಿ ಕೆಲ ಇಲಾಖೆ ಅಧಿಕಾರಿಗಳು ಕೆಲಸಕ್ಕೆ ಹಾಜರಾಗಿರಲಿಲ್ಲ.

ಶೇ.50 ರಷ್ಟು ಮಾತ್ರ ಅಧಿಕಾರಿಗಳು:
ನೆರೆ ಪರಿಹಾರ ಕಾರ‍್ಯಕ್ಕೆ ಪ್ರಾಮುಖ್ಯತೆ ನೀಡಬೇಕಾದ ತಾಲೂಕಾಡಳಿತ ಕಛೇರಿಯಲ್ಲಿಯೇ ಅರ್ಧದಷ್ಟು ಸಿಬ್ಬಂದಿ ಬಂದಿರಲಿಲ್ಲ. ಕೆಲ ಹೊರಗುತ್ತಿಗೆ ಹಾಗೂ ಸರಕಾರಿ ಸಿಬ್ಬಂದಿ ಹೊರತು ಪಡಿಸಿದರೇ ಮಹಿಳಾ ಸಿಬ್ಬಂದಿಯ ಸುಳಿವೇ ಕಚೇರಿಯಲ್ಲಿರಲಿಲ್ಲ.

ಮುಚ್ಚಿದ ಬಾಗಿಲು ತೆಗೆದಿಲ್ಲ: ಪಟ್ಟಣದಲ್ಲಿನ ಕೆಲ ಇಲಾಖೆಗಳು ಹೆಸರಿಗೆ ಮಾತ್ರ ಬಾಗಿಲು ತೆಗೆದಿದ್ದವು. ಆದರೆ ಒಳಗೆ ಡಿ.ದರ್ಜೆ ನೌಕರರು ಇಲ್ಲವೇ ಹೊರಗುತ್ತಿಗೆ ಆಧಾರದಲ್ಲಿ ಕಾರ‍್ಯ ನಿರ್ವಹಿಸುತ್ತಿರುವ ಕೆಲ ಸಿಬ್ಬಂದಿಗಳನ್ನು ಹೊರತುಪಡಿಸಿ ಇನ್ಯಾವುದೇ ಸರಕಾರಿ ಅಧಿಕಾರಿಗಳು ಕಂಡು ಬರಲಿಲ್ಲ. ಅಲ್ಲದೇ ನೋಂದಣಿ ಇಲಾಖೆ, ಕಾರ್ಮಿಕ ಇಲಾಖೆ, ಬಿಸಿಎಂ ಇಲಾಖೆಗಳು ಹಾಕಿದ ಬಾಗಿಲನ್ನು ತೆಗೆಯಲೇ ಇಲ್ಲ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ