ಆ್ಯಪ್ನಗರ

8 ದಿನದಲ್ಲಿ ಕೆರೆ ಸರ್ವೆಗೆ ಸೂಚನೆ

ಬ್ಯಾಡಗಿ : ತಾಲೂಕಿನಲ್ಲಿ ಒತ್ತುವರಿಯಾದ ಕೆರೆಗಳ ಸರ್ವೆಯನ್ನು 8 ದಿನಗಳೊಳಗೆ ಮಾಡಿ ವರದಿ ಸಲ್ಲಿಸಬೇಕು ಎಂದು ತಹಶೀಲ್ದಾರ ಗುರು ಬಸವರಾಜ ಅವರು ಸಣ್ಣ ನೀರಾವರಿ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Vijaya Karnataka 22 Jun 2019, 5:00 am
ಬ್ಯಾಡಗಿ : ತಾಲೂಕಿನಲ್ಲಿ ಒತ್ತುವರಿಯಾದ ಕೆರೆಗಳ ಸರ್ವೆಯನ್ನು 8 ದಿನಗಳೊಳಗೆ ಮಾಡಿ ವರದಿ ಸಲ್ಲಿಸಬೇಕು ಎಂದು ತಹಶೀಲ್ದಾರ ಗುರು ಬಸವರಾಜ ಅವರು ಸಣ್ಣ ನೀರಾವರಿ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Vijaya Karnataka Web HVR-21BYD3B
ಹಾವೇರಿ ತಹಶೀಲ್ದಾರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ರೈತರು ಚರ್ಚಿಸಿದರು.


ತಾಲೂಕಿನ ಹಿರೇನಂದಿಹಳ್ಳಿ ಕೆರೆ ಒತ್ತುವರಿ ಮಾಡಿ ರೈತರು ಉಳುಮೆ ಮಾಡುತ್ತಿರುವ ಬಗ್ಗೆ ರೈತರು, ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಕರೆದಿದ್ದ ಸರ್ವೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಸಣ್ಣ ನೀರಾವರಿ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳ ವರದಿಯನ್ನು ಪರಿಶೀಲನೆ ನಡೆಸಿದ ನಂತರ ಮಾತನಾಡಿದ ತಹಶೀಲ್ದಾರ ಗುರು ಬಸವರಾಜ, ಮೂಲ ನಕ್ಷೆ ಪ್ರಕಾರ ಹಾಗೂ ಭೂ ಸ್ವಾಧೀನ ಪ್ರಕ್ರಿಯೆ ನಂತರದ ಕೆರೆ ವಿಸ್ತೀರ್ಣವನ್ನು ದಾಖಲೆಗಳ ಮೂಲಕ ಇನ್ನೆಂಟು ದಿನಗಳಲ್ಲಿ ಹಾಜರುಪಡಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಸರ್ವೇ ಅಧಿಕಾರಿಗಳು ಉಳಿದ ಎಂಟು ದಿನದಲ್ಲಿ ಕೆರೆಯ ಸರ್ವೆ ಕಾರ‍್ಯ ಮುಗಿಸಿಕೊಡಲೇಬೇಕು ಎಂದು ತಾಕೀತು ಮಾಡಿದರು.

ಹೋರಾಟ ಅನಿವಾರ್ಯ:
ಇದಕ್ಕೂ ಮೊದಲು ಮಾತನಾಡಿದ ರೈತ ಮುಖಂಡ ಶಶಿಧರಸ್ವಾಮಿ ಛತ್ರದ ಮಠ, ಸರ್ವೆ ಅಧಿಕಾರಿಗಳ ನಿರ್ಲಕ್ಷ ್ಯಕ್ಕೆ ತಾಲೂಕಿನ ಬಹುತೇಕ ಕೆರೆಗಳು ಒತ್ತುವರಿಯಾಗಿದ್ದು, ಕೆರೆಗಳ ಸೂಕ್ತ ಸರ್ವೆ ನಡೆದಿಲ್ಲ ಮತ್ತು ಸೂಕ್ತ ದಾಖಲಾತಿಯನ್ನು ಸಹ ಅಧಿಕಾರಿಗಳು ಇಟ್ಟುಕೊಂಡಿಲ್ಲ. ಮುಂದಿನ 15 ದಿನಗಳಲ್ಲಿ ಕೆರೆಗಳ ಸರ್ವೆ ಕಾರ‍್ಯ ಮುಗಿಸದಿದ್ದಲ್ಲಿ ಹೋರಾಟ ಅನಿವಾರ‍್ಯ ಎಂದು ಎಚ್ಚರಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಶಶಿಧರ ಸ್ವಾಮಿ, ಹೀರೆನಂದಿಹಳ್ಳಿಯ ಪುರಾತನ ಕೆರೆ 380ಕ್ಕೂ ಹೆಚ್ಚು ಎಕರೆ ಹೊಂದಿತ್ತು. ಈಗ ಏಷ್ಟು ಉಳಿದಿದೆ ಎಂಬ ಮಾಹಿತಿ ಕೂಡ ಲಭ್ಯವಾಗುತ್ತಿಲ್ಲ. ಉಳಿದಿರುವ ಕೆರೆಯಲ್ಲಿ ಈಗಾಗಲೆ ಹಲವಾರು ಎಕರೆಯಷ್ಟು ಉಳಿಮೆ ಮಾಡಿಕೊಂಡಿದ್ದಾರೆ. ಇದನ್ನೆಲ್ಲ ಪರಿಶೀಲನೆ ಮಾಡಲು ನೀವೆಷ್ಟು ಬಾರಿ ಕೆರೆಗೆ ಭೇಟಿ ನೀಡಿದ್ದೀರಿ ಮೊದಲು ತಿಳಿಸಿ ಎಂದು ಪಟ್ಟು ಹಿಡಿದರು. ಇದಕ್ಕೆ ಉತ್ತರಿಸಲಾಗದೇ ಸಣ್ಣ ನಿರಾವರಿ ಹಾಗೂ ಸರ್ವೆ ಇಲಾಖೆ ಅಧಿಕಾರಿ ಮೌನಕ್ಕೆ ಶರಣಾದರು.

ಕಿರಣಕುಮಾರ ಗಡಿಗೋಳ ಮಾತನಾಡಿ, ಈಗಾಗಲೆ ಹಲವಾರು ಬಾರಿ ಭೂಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ಭೂಮಿಯನ್ನು ನೀಡಿದ ಕೆಲವರು ಇನ್ನೂ ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾಗಿ ತಿಳಿದು ಬಂದಿದೆ. ಆದರೆ ಈಗಿರುವ ಸರಕಾರಿ ಕೆರೆಯ ಜಾಗೆಯನ್ನು ಅತೀಕ್ರಮಣ ಮಾಡಿ ಬಿತ್ತನೆ ಕಾರ‍್ಯಕ್ಕೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ? ಕೆರೆ ನುಂಗಲು ಮುಂದಾಗಿರುವವರ ವಿರುದ್ಧ ಕ್ರಮಕ್ಕೆ ಯಾಕೆ ತಾಲೂಕಾಡಳಿತ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ