ಆ್ಯಪ್ನಗರ

ಬಿಸಿಯೂಟದಲ್ಲಿ ನುಶಿ ಹುಳ

ಹಾವೇರಿ: ತಾಲೂಕಿನ ಹನುಮನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದಲ್ಲಿ ನುಶಿ ಹುಳ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಅಡುಗೆ ಸಹಾಯಕಿಯರ ವಿರುದ್ಧ ಎಸ್‌ಡಿಎಂಸಿ ಅಧ್ಯಕ್ಷ ರು, ಪಾಲಕರು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka 19 Jul 2019, 5:00 am
ಹಾವೇರಿ: ತಾಲೂಕಿನ ಹನುಮನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದಲ್ಲಿ ನುಶಿ ಹುಳ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಅಡುಗೆ ಸಹಾಯಕಿಯರ ವಿರುದ್ಧ ಎಸ್‌ಡಿಎಂಸಿ ಅಧ್ಯಕ್ಷ ರು, ಪಾಲಕರು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web HVR-18 HAVERI 10


ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್‌ ಕೋಳೂರ ಮಾತನಾಡಿ, ಶಾಲೆ ಪ್ರಾರಂಭಗೊಂಡು ಎರಡು ತಿಂಗಳು ಗತಿಸಿದೆ. ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಕಳೆದ ವಾರದಿಂದ ನುಶಿ ಹುಳಗಳು ಪತ್ತೆಯಾಗುತ್ತಿದ್ದು, ವಿದ್ಯಾರ್ಥಿಗಳು ಮನೆಗೆ ಬಂದು ಮಧ್ಯಾಹ್ನ ಊಟ ಮಾಡಿ ಹೋಗುತ್ತಿದ್ದಾರೆ. ಇದರ ಬಗ್ಗೆ ಮುಖ್ಯೋಪಾಧ್ಯಾಯರು ಕಣ್ಣು ಮುಚ್ಚಿ ಕುಳಿತಿರುವುದು ವಿಷಾದಕರ ಸಂಗತಿ ಎಂದರು.

ಶಾಲೆಗೆ ವಿತರಿಸಿದ ತೊಗರಿ, ಬೇಳೆ ಕಾಳು, ಅಕ್ಕಿ ಇತರೆ ಧಾನ್ಯಗಳು ಕಳಪೆಯಾಗಿವೆ. ಸರಕಾರಿ ಶಾಲೆಗಳಿಗೆ ಗುಣಮಟ್ಟದ ಆಹಾರ ಧಾನ್ಯಗಳನ್ನು ವಿತರಿಸಲು ಸೂಚಿಸಿದ್ದರು. ಅಡುಗೆ ಸಹಾಯಕಿಯರು ಧಾನ್ಯಗಳನ್ನು ಸ್ವಚ್ಛಗೊಳಿಸದೇ ಕಳಪೆ ಧಾನ್ಯದಿಂದ ತಯಾರಿಸಿದ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇದರಿಂದ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಶೀಘ್ರ ಶಿಕ್ಷ ಣ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡು ಮಕ್ಕಳ ಆರೋಗ್ಯವನ್ನು ಕಾಪಾಡಬೇಕು ಆಗ್ರಹಿಸಿದರು.

ಕೂಡಲೇ ಶಾಲೆಗೆ ಡಿಡಿಪಿಐ ಹಾಗೂ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ಭೇಟಿ ನೀಡಿ ಆಹಾರ, ಶೌಚಾಲಯ, ಪಠ್ಯಪುಸ್ತಕ, ವಿದ್ಯುತ್‌, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಕೊಡುವುದನ್ನು ಸ್ಥಗಿತಗೊಳಿಸಬೇಕು ಎಂದು ಪಾಲಕರು ಆಗ್ರಹಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಎಚ್‌.ಎಸ್‌. ಬೇಳಾರ ಮಾತನಾಡಿ, ಈ ಶಾಲೆಯಲ್ಲಿ 1-7ನೇ ತರಗತಿ ಶಿಕ್ಷ ಣ ನಡೆಯುತ್ತಿದ್ದು ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಏಕಾಏಕಿ ಬಿಸಿಯೂಟದಲ್ಲಿ ನುಶಿ ಹುಳ ಕಾಣಿಸಿಕೊಂಡಿದ್ದು ತೀವ್ರ ಆತಂಕ ಸೃಷ್ಟಿಯಾಗಿದೆ. ಹಾಗೂ ಅಡುಗೆ ಸಹಾಯಕಿಯರು ಬಿಸಿಯೂಟ ತಯಾರಿಸುವಲ್ಲಿ ಅಕ್ಕಿ, ಬೆಳೆ ಕಾಳುಗಳನ್ನು ಸ್ವಚ್ಛಗೊಳಿಸಿ ಅಡುಗೆ ತಯಾರಿಸುವಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ರು, ಪಾಲಕರ ನಡುವೆ ವಾಗ್ವಾದ ನಡೆಯಿತು. ಗ್ರಾಮಸ್ಥರಾದ ಬಸವರಾಜ ಬಂಕಾಪುರ, ಪುಟ್ಟಪ್ಪ ಕೋಡಿಹಳ್ಳಿ, ಹಾಲಪ್ಪ ಬಾಲಕ್ಕನವರ, ಲೋಕನಗೌಡ ಲೆಕ್ಕನಗೌಡ್ರ, ರುದ್ರಗೌಡ ಪಾಟೀಲ, ಪರಮೇಶಗೌಡ, ಶರಣಪ್ಪ ಬಂಕಾಪುರ, ಮಲ್ಲಪ್ಪ ಬಂಕಾಪುರ, ಗಣೇಶ ಕೋಡಿಹಳ್ಳಿ, ಕಾಳಪ್ಪ ಕಮ್ಮಾರ ಸೇರಿದಂತೆ ಹಲವಾರು ಪಾಲಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ