ಆ್ಯಪ್ನಗರ

ಪೌಷ್ಟಿಕ ಆಹಾರ ದಿನಾಚರಣೆ

ಸವಣೂರು: ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಅವಶ್ಯ ಎಂದು ತಾಪಂ.ಸದಸ್ಯೆ ರತ್ನಾ ವಗ್ಗನವರ ಹೇಳಿದರು.

Vijaya Karnataka 18 Sep 2019, 5:00 am
ಸವಣೂರು: ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಅವಶ್ಯ ಎಂದು ತಾಪಂ.ಸದಸ್ಯೆ ರತ್ನಾ ವಗ್ಗನವರ ಹೇಳಿದರು.
Vijaya Karnataka Web nutritional food day
ಪೌಷ್ಟಿಕ ಆಹಾರ ದಿನಾಚರಣೆ


ಸವಣೂರು ತಾಲೂಕಿನ ಚಿಲ್ಲೂರಬಡ್ನಿ ಗ್ರಾಮದಲ್ಲಿಶಿಶು ಅಭಿವೃದ್ದಿ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರಡಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿಜರುಗಿದ ಪೋಷಣಾ ಅಭಿಯಾನ ಹಾಗೂ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತರಕಾರಿ ವಿಟಾಮಿನ ಉಳ್ಳ ಹಣ್ಣುಗಳನ್ನು ಹೆಚ್ಚು ತಿನ್ನುವುದರಿಂದ ಕಬ್ಬಿಣಾಂಶ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿಗರ್ಭಿಣಿಯರು ಯಾವುದೇ ರೋಗಗಳಿಗೆ ತುತ್ತಾಗದೆ ಸದೃಢವಾಗಿರಲು ಸಾಧ್ಯ ಹಾಗೂ ಜನಿಸಿದ ಮಗು ಕೂಡ ದಷ್ಟ-ಪುಷ್ಟವಾಗಿ ಬೆಳೆಯುತ್ತದೆ ಎಂದರು.

ಬಾಲ್ಯವಿವಾಹ ಕುರಿತು ಉಪನ್ಯಾಸವನ್ನು ಕಾರಡಗಿ ಪ್ರಾಥಮಿಕ ಆರೋಗ್ಯ ಸಹಾಯಕ ಶರಣಪ್ಪ ಕಲ್ಲಮ್ಮನವರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಲಕ್ಷತ್ರ್ಮವ್ವ ಶ್ಯಾಗೋಟಿ ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕಿ ಅನ್ನಪೂರ್ಣ ಹಳ್ಳಿಗುಡಿ, ಕಿರಿಯ ಮಹಿಳಾ ಸಹಾಯಕಿ ವಿಮಲಾಕ್ಷಿ ಹಾಗೂ ಗ್ರಾಮಸ್ಥರು ಮಹಿಳೆಯರು ಇತರರು ಇದ್ದರು. ರಾಜೇಶ್ವರಿ ಕಲ್ಮಠ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ