ಆ್ಯಪ್ನಗರ

ಅಧಿಕಾರಿಗಳ ಗೈರು: ಗ್ರಾಮಸಭೆಯಲ್ಲಿ ಗದ್ದಲ

ತುಮ್ಮಿನಕಟ್ಟಿ : ರಾಣೇಬೆನ್ನೂರು ತಾಲೂಕಿನ ಮಾಳನಾಯಕನಹಳ್ಳಿ ಗ್ರಾಪಂ ವತಿಯಿಂದ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಗ್ರಾಮ ಸಭೆ ನಡೆಯಿತು.

Vijaya Karnataka 13 Jul 2019, 5:00 am
ತುಮ್ಮಿನಕಟ್ಟಿ : ರಾಣೇಬೆನ್ನೂರು ತಾಲೂಕಿನ ಮಾಳನಾಯಕನಹಳ್ಳಿ ಗ್ರಾಪಂ ವತಿಯಿಂದ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಗ್ರಾಮ ಸಭೆ ನಡೆಯಿತು.
Vijaya Karnataka Web officers absenteeism bustle in the gram sabha
ಅಧಿಕಾರಿಗಳ ಗೈರು: ಗ್ರಾಮಸಭೆಯಲ್ಲಿ ಗದ್ದಲ


ಗ್ರಾಮಸಭೆ ನೋಡಲ್‌ ಅಧಿಕಾರಿ ಸೇರಿದಂತೆ 6 ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದರು. ಅವರು ಬಂದಮೇಲೆ ಗ್ರಾಮಸಭೆ ಮಾಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು.

ನಂತರ ಗ್ರಾಪಂ ಸದಸ್ಯ ಯಲ್ಲಪ್ಪ ರೆಡ್ಡಿ ಮಾತನಾಡಿ, ಪ್ರತಿಸಲ ಗ್ರಾಮ ಸಭೆಗೆ ನೋಡಲ್‌ ಅಧಿಕಾರಿ ಬರುವದಿಲ್ಲ ತಮ್ಮ ಇಲಾಖೆಯ ಯಾರೋ ಒಬ್ಬರನ್ನು ಕಳುಹಿಸಿಕೊಡುತ್ತಾರೆ. ಇನ್ನೂ 6 ಇಲಾಖೆ ಅಧಿಕಾರಿಗಳು ಬರಬೇಕು ಇಲ್ಲವಾದರೆ ಅವರಿಗೆ ನೋಟಿಸ್‌ ಕೊಡಬೇಕೆಂದು ಆಗ್ರಹಿಸಿದರು.

ಗ್ರಾಪಂ ವ್ಯಾಪ್ತಿಗೆ ಬರುವ ಪತ್ತೇಪುರ, ಕೂಸಗಟ್ಟಿ, ತಿಮ್ಮನಹಳ್ಳಿ, ಮೆಣಸಿನಹಾಳ, ಮಾಳನಾಯಕನಹಳ್ಳಿ, ಬಡಬಸಾಪುರ, ಸಣ್ಣಸಂಗಾಪುರ, ಚಿಕ್ಕಮಾಗನುರು ಗ್ರಾಮಗಳಲ್ಲಿ ವಾರ್ಡ ಸಭೆ ಮಾಡಿ ಗ್ರಾಮ ಸಭೆ ಮಾಡುತ್ತಿದ್ದೇವೆ. ಆದರೂ ಅಧಿಕಾರಿಗಳು ಬಂದಿರುವದಿಲ್ಲ. ಇದುವರೆಗೆ ವಾರ್ಡ್‌ ಸಭೆ ಮಾಡಿದ್ದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ ಎಂದರು. ಇನ್ನು ಮುಂದೆಯಾದರೂ ಗ್ರಾಮ ಸಭೆಗೆ ಅಧಿಕಾರಿಗಳು ತಪ್ಪದೆ ಬರಬೇಕೆಂದು ಹೇಳಿದರು.

ಗ್ರಾಮಸ್ಥರ ಗದ್ದಲ ಗಲಾಟೆಯಲ್ಲಿಯೇ ವಿವಿಧ ವಸತಿ ಯೋಜನೆಯಡಿ ಅರ್ಹ ಫಲಾನುಬಾವಿಗಳ ಆಯ್ಕೆ ಮಾಡಲಾಯಿತು.

ಗ್ರಾಪಂ ಅದ್ಯಕ್ಷ ಜಗದೀಶಯ್ಯ ಗೌಡರ್‌, ಗ್ರಾಪಂ ಪಿಡಿಓ ದೇವರಾಜ ಜಿ, ಸುರೇಶ ಸಾಂತನವರ, ಮಂಜಮ್ಮ ಮಾಸೂರ ಕುಸುಮವ್ವ ಶೆಟ್ಟಿಕೇರಿ, ದೇವರಾಜ ದೊಡ್ಡಮನಿ, ಮಂಜಪ್ಪ ಹಿತ್ತಲಮನಿ, ಕುಮಾರ ಗಂಜಿ, ಮಲ್ಲೇಶ ಮಾಳಗಿ, ಅಂಗನವಾಡಿ ಕಾರ್ಯಕರ್ತೆಯತು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ