ಆ್ಯಪ್ನಗರ

ಚುನಾವಣೆ ಬಂದಾಗ ಮಾತ್ರ ಹಳ್ಳಿಯ ನೆನಪು: ವಿನಯ್‌ ಕುಲಕರ್ಣಿ

ಶಿಗ್ಗಾವಿ: ನಾವು ಗೋರಕ್ಷ ಕರು ಎಂದು ರಾಜಕೀಯ ಮಾಡುವವರ ಮನೆಯಲ್ಲಿ ಒಂದು ಹಸು ಸಾಕಿಲ್ಲ. ಕನಿಷ್ಠ ನಾಯಿ, ಕತ್ತೆ, ಕುದುರೆಯೂ ಸಾಕಿಲ್ಲ. ನಾನು ರೈತನ ಮಗನಾಗಿ ಹಸು, ನಾಯಿ, ಕುದುರೆ ಸಾಕಿದ್ದೇನೆ ಒಂದು ಸಾರಿ ನಮ್ಮ ಡೈರಿಗೆ ಬಂದು ನೋಡಿ ಎಂದು ಸಂಸದ ಪ್ರಲ್ಹಾದ ಜೋಶಿ ಅವರಿಗೆ ಪರೋಕ್ಷ ವಾಗಿ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಸವಾಲು ಎಸೆದರು.

Vijaya Karnataka 9 Apr 2019, 5:00 am
ಶಿಗ್ಗಾವಿ: ನಾವು ಗೋರಕ್ಷ ಕರು ಎಂದು ರಾಜಕೀಯ ಮಾಡುವವರ ಮನೆಯಲ್ಲಿ ಒಂದು ಹಸು ಸಾಕಿಲ್ಲ. ಕನಿಷ್ಠ ನಾಯಿ, ಕತ್ತೆ, ಕುದುರೆಯೂ ಸಾಕಿಲ್ಲ. ನಾನು ರೈತನ ಮಗನಾಗಿ ಹಸು, ನಾಯಿ, ಕುದುರೆ ಸಾಕಿದ್ದೇನೆ ಒಂದು ಸಾರಿ ನಮ್ಮ ಡೈರಿಗೆ ಬಂದು ನೋಡಿ ಎಂದು ಸಂಸದ ಪ್ರಲ್ಹಾದ ಜೋಶಿ ಅವರಿಗೆ ಪರೋಕ್ಷ ವಾಗಿ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಸವಾಲು ಎಸೆದರು.
Vijaya Karnataka Web HVR-8SGN-2


ಸೋಮವಾರ ಪಟ್ಟಣದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾರದೋ ಅಲೆಯಲ್ಲಿ ಧಾರವಾಡ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಸಂಸದರಾದವರು ಹಳ್ಳಿಗೂ ಹೋಗಿಲ್ಲ. ಅಲ್ಲಿಯ ಜನರು ಅನುಭವಿಸುವ ಸಮಸ್ಯೆಯೂ ಗೊತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ಹಳ್ಳಿಗಳನ್ನು ನನೆಪಿಸಿಕೊಳ್ಳುವರಿಗೆ ಈ ಬಾರಿ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಮಾಜ ಒಡೆದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜಕಾರಣ ಮಾಡುವವರು ನಮ್ಮ ಕ್ಷೇತ್ರಕ್ಕೆ ಬೇಕಾ? ಕ್ಷೇತ್ರಕ್ಕೆ ಶೂನ್ಯ ಸಾಧನೆಗೈದ ಜೋಶಿ ಅವರನ್ನು ಮನೆಗೆ ಕಳುಹಿಸಿ, ನಿಮ್ಮ ಸೇವಕನಾಗಿ ನನ್ನನ್ನು ಲೋಕಸಭೆಗೆ ಕಳುಹಿಸಿ. ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಕುಲಕರ್ಣಿ ಮನವಿ ಮಾಡಿದರು.

ಮಾಜಿ ಶಾಸಕ ಸೈಯದ ಅಜ್ಜಂಪೀರ ಖಾದ್ರಿ ಮಾತನಾಡಿ, ವಿನಯ ಕುಲಕರ್ಣಿ ಅವರಲ್ಲಿರುವ ಜನಪರ ಕಾಳಜಿ, ಸಾಮಾಜಿಕ ನ್ಯಾಯ ಅರಿತು ಪಕ್ಷ ದ ವರಿಷ್ಠರು ಟಿಕೆಟ್‌ ನೀಡಿದ್ದಾರೆ. 15 ದಿನ ನಿದ್ರೆಸದೇ ಅವರ ಗೆಲುವಿಗೆ ಶ್ರಮಿಸಬೇಕು. ಎಲ್ಲ ಸಮಾಜಗಳು ಅವರನ್ನು ಬೆಂಬಲಿಸಿವೆ. ಪ್ರೋತ್ಸಾಹಿಸಿ ಒಗ್ಗಟ್ಟಿನಿಂದ ಅವರ ಗೆಲುವಿಗೆ ಕಂಕಣ ಬದ್ಧರಾಗಿ ಶ್ರಮಿಸುತ್ತಿದ್ದಾರೆ ಎಂದರು.

ಮುಖಂಡರಾದ ಡಾ.ಫಕ್ಕೀರಗೌಡ್ರ ಪಾಟೀಲ, ಗುರುನಗೌಡ್ರ ಪಾಟೀಲ,ಮಂಜುನಾಥ ಮಣ್ಣಣ್ಣವರ, ಶಿವಾನಂದ ಬಾಗೂರು, ವೀರೇಶ ಆಜೂರು, ಸುರೇಶ ಹುಲಗೂರು, ಶಂಭು ಕತ್ತಿ, ಪ್ರಶಾಂತ ದುಂಡಿಗೌಡ್ರ ಸೇರಿದಂತೆ ಸಮಾವೇಶದಲ್ಲಿ ತಾಪಂ-ಜಿಪಂ ಕಾಂಗ್ರೆಸ್‌ ಸದಸ್ಯರು, ಮುಖಂಡರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರು, ಪದಾಧಿಕಾರಿಗಳು, ಜೆಡಿಎಸ್‌ ಪಕ್ಷ ದ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ