ಆ್ಯಪ್ನಗರ

ಹಾನಗಲ್ಲನಲ್ಲಿ ಕಾರ್ಮಿಕ ಇಲಾಖೆ ಕಚೇರಿ ತೆರೆಯಲಿ

ಹಾನಗಲ್ಲ: ತಾಲೂಕಿನ ಪ್ರತಿ ಗ್ರಾಮದಲ್ಲಿ ವಿವಿಧ ಕೆಲಸದಲ್ಲಿ ತೊಡಗಿಕೊಂಡ ಕಾರ್ಮಿಕರು ಇದ್ದಾರೆ, ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಬಹುತೇಕ ಕಾರ್ಮಿಕರು ನೊಂದಣಿ ಮಾಡಿಸಿಲ್ಲ, ಸ್ಥಳೀಯವಾಗಿ ಕಾರ್ಮಿಕ ಕಚೇರಿ ಇಲ್ಲದಿರುವುದು ತೊಡಕಾಗಿದೆ ಎಂದು ಲೋಕ್‌ಮಂಚ್‌ ಸಂಘಟಕ ಮಂಜುನಾಥ ಕುದರಿ ಆಪಾದಿಸಿದರು.

Vijaya Karnataka 27 Apr 2019, 5:00 am
ಹಾನಗಲ್ಲ: ತಾಲೂಕಿನ ಪ್ರತಿ ಗ್ರಾಮದಲ್ಲಿ ವಿವಿಧ ಕೆಲಸದಲ್ಲಿ ತೊಡಗಿಕೊಂಡ ಕಾರ್ಮಿಕರು ಇದ್ದಾರೆ, ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಬಹುತೇಕ ಕಾರ್ಮಿಕರು ನೊಂದಣಿ ಮಾಡಿಸಿಲ್ಲ, ಸ್ಥಳೀಯವಾಗಿ ಕಾರ್ಮಿಕ ಕಚೇರಿ ಇಲ್ಲದಿರುವುದು ತೊಡಕಾಗಿದೆ ಎಂದು ಲೋಕ್‌ಮಂಚ್‌ ಸಂಘಟಕ ಮಂಜುನಾಥ ಕುದರಿ ಆಪಾದಿಸಿದರು.
Vijaya Karnataka Web HVR-26HGL3
ಹಾನಗಲ್ಲಿನಲ್ಲಿ ಕಾರ್ಮಿಕರ ಹಿತ ಕಾಯುವ ಲೋಕ್‌ಮಂಚ್‌ ಪದಾಧಿಕಾರಿಗಳ ಸಭೆಯಲ್ಲಿ ಮಂಜುನಾಥ ಕುದರಿ ಮಾತನಾಡಿದರು.


ಶುಕ್ರವಾರ ಇಲ್ಲಿನ ರೋಶನಿ ಸಮಾಜ ಸೇವ ಸಂಸ್ಥೆಯಲ್ಲಿ ಲೊಯೋಲಾ ಮತ್ತು ಲೋಕ್‌ಮಂಚ್‌ ಸಂಘಟನೆ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿನ ಕಾರ್ಮಿಕರು ನೋಂದಣಿಗಾಗಿ ಬ್ಯಾಡಗಿಗೆ ಅಲೆದಾಡುತ್ತಿದ್ದಾರೆ. ಆದರೆ ಅಧಿಕಾರಿಗಳ ಸ್ಪಂದನೆ ಸಿಗುತ್ತಿಲ್ಲ ಎಂದರು.

ಹಾನಗಲ್ಲ ತಾಲೂಕಿನ ಕಾರ್ಮಿಕರನ್ನು ಬ್ಯಾಡಗಿ ಕಾರ್ಮಿಕ ಕಚೇರಿ ವ್ಯಾಪ್ತಿಗೆ ಸೇರಿಸಲಾಗಿದೆ, ಇದು ಕಾರ್ಮಿಕರ ಸೌಲಭ್ಯಗಳಿಗೆ ಅನಾನುಕೂಲತೆ ಆಗುತ್ತಿದೆ, ಕಾರ್ಮಿಕ ದಿನಾಚರಣೆ ಮುನ್ನಾದಿನ ಇಲ್ಲಿನ ಕಾರ್ಮಿಕರ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್‌ ಡಿಂಪಲ್‌ ಮಾತನಾಡಿ, ಕಾರ್ಮಿಕರ ಜಾಗೃತಿಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಕಾರ್ಮಿಕರ ನೋಂದಣಿ, ನವೀಕರಣ ವಿಷಯದಲ್ಲಿ ಇಲಾಖೆಗೆ ಒಂದಷ್ಟೂ ಕಾಳಜಿ ಇಲ್ಲ. ಹಾನಗಲ್ಲ ತಾಲೂಕಿನ ಶೇ 70 ರಷ್ಟು ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿಲ್ಲ ಎಂದರು.

ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಕಾಯಕ ಬಂಧÜುಗಳು ಎಲ್ಲಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಇಲಾಖೆಯಿಂದ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳಿವೆ. ಆದರೆ ಈ ಬಗ್ಗೆ ಜಾಗೃತಿಯೂ ಇಲ್ಲ. ನೋಂದಣಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸುವವರೂ ಇಲ್ಲ. ಕಾರ್ಮಿಕರು ನೋಂದಣಿಗೆ ಅಲೆದಾಡಿ, ಬೆಸತ್ತು ಸುಮ್ಮನಾಗಿದ್ದಾರೆ. ಹಾನಗಲ್ಲ ತಾಲೂಕಿನ 109 ಕಾರ್ಮಿಕರು ಅರ್ಜಿ ಸಲ್ಲಿಸಿದರೆ, ತಿಂಗಳುಗಳ ಕಳೆದ ಮೇಲೆ ಅದರಲ್ಲಿ 10 ಅರ್ಜಿಗಳು ಮಾತ್ರ ಸ್ವೀಕೃತವಾದವು. ಉಳಿದವಕ್ಕೆ ಸುಳ್ಳು ಕಾರಣ ಹೇಳಿ ತಿರಸ್ಕರಿಸಿದರು. ನೋಂದಣಿಯೇ ಆಗದಿದ್ದರೆ ಸರಕಾರದ ಸೌಲಭ್ಯ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಲೋಯಲಾ ಸಮಾಜ ಸೇವಾ ಸಂಸ್ಥೆ ಸಂಯೋಜಕ ಮಹೇಶ ಚಹ್ವಾಣ ಮಾತನಾಡಿ, ದುರುದ್ಧೇಶದಿಂದ ಕಾರ್ಮಿಕರ ನೋಂದಣಿ ಆಗುತ್ತಿಲ್ಲ. ಬ್ಯಾಡಗಿ ಕಚೇರಿಯಲ್ಲಿನ ನೌಕರರು ಉದ್ಧೇಶಪೂರ್ವಕವಾಗಿ ನಮ್ಮ ಅರ್ಜಿಗಳನ್ನು ನಿರಾಕರಿಸುತ್ತಿರುವುದು, ಸತಾಯಿಸುತ್ತಿರುವುದು ಸಂಶಯ ಮೂಡಿಸುತ್ತಿದೆ. ಕಾರ್ಮಿಕ ದಿನಾಚರಣೆಯ ದಿನದಿಂದಲಾದರೂ, ಹಾನಗಲ್ಲಿನಲ್ಲಿ ಕಾರ್ಮಿಕ ಇಲಾಖೆ ಕಚೇರಿ ಕಾರ್ಯಾರಂಭ ಮಾಡಲಿ. ಹಾನಗಲ್ಲ ತಾಲೂಕಿನ ಕಾರ್ಮಿಕರ ನೋವಿಗೆ ಸ್ಪಂಧಿಸಲಿ ಎಂದರು.

ಲೋಕಮಂಚ ಸಂಘಟನೆಯ ರಾಮಚಂದ್ರ ಶಿಡ್ಲಾಪೂರ, ಟಿ.ಎನ್‌.ಕೊಪ್ಪದ, ಚಂದ್ರಶೇಖರ ಸಾಳುಂಕೆ, ರೋಶನಿ ಸಮಾಜಸೇವಾ ಸಂಸ್ಥೆ ಸಂಯೋಜಕ ಕಲ್ಲಪ್ಪ ನಾಯ್ಕರ ಈ ಸಂದರ್ಭದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ