ಆ್ಯಪ್ನಗರ

ಸೌಲಭ್ಯ ಪಡೆಯಲು ಸಂಘಟಿತರಾಗಿ

ಸವಣೂರು : ರೈತರು ಸಂಘಟಿತರಾಗುವ ಮೂಲಕ ತಮಗೆ ಸಿಗಬೇಕಾದ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ ಬಾರ್ಕಿ ಹೇಳಿದರು.

Vijaya Karnataka 10 Feb 2019, 5:00 am
ಸವಣೂರು : ರೈತರು ಸಂಘಟಿತರಾಗುವ ಮೂಲಕ ತಮಗೆ ಸಿಗಬೇಕಾದ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ ಬಾರ್ಕಿ ಹೇಳಿದರು.
Vijaya Karnataka Web organized to get the facility
ಸೌಲಭ್ಯ ಪಡೆಯಲು ಸಂಘಟಿತರಾಗಿ


ತಾಲೂಕಿನ ಈಚಲಯಲ್ಲಾಪೂರ ಗ್ರಾಮದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘಟನೆ ಮೂಲಕ ರೈತರು ಒಗ್ಗಟ್ಟು ಪ್ರದರ್ಶನ ಮಾಡಿದಲ್ಲಿ ಹೋರಾಟಗಳಿಗೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಹಕಾರವಾಗಲಿದೆ ಎಂದರು.

ನೂತನ ಗ್ರಾಮ ಘಟಕದ ಅಧ್ಯಕ್ಷ ಕರಿಯಪ್ಪ ದೇವಗಿರಿ ಮತ್ತು ರೈತ ಸಂಘದ ತಾಲೂಕಾಧ್ಯಕ್ಷ ನೀಲಪ್ಪ ಹರಿಜನ ಮಾತನಾಡಿದರು. ರೈತ ಸಂಘದ ಪದಾಧಿಕಾರಿಗಳಾದ ಮುತ್ತಪ್ಪ ಗಾಂಜಿ, ವೇಂಕಪ್ಪ ಬಂಡಿವಡ್ಡರ, ಮೋದಿನಸಾಬ್‌ ಚಾಕರಿ, ಫಕ್ಕೀರಪ್ಪ ಮಲ್ಲಾಡದ, ಮಾಂತೇಶ ಇಚ್ಚಂಗಿ, ಶೇಖಪ್ಪ ಕಮ್ಮಾರ, ಶಿವಪ್ಪ ದೊಡ್ಡಕುರುಬರ, ಮಂಜುನಾಥ ಈಳಗೇರ, ಶಾಂತವ್ವ ಬಂಡಿವಡ್ಡವರ, ನೀಲವ್ವ ದ್ಯಾವನೂರ, ಮಹಬೂಬ್ಬಿ ರಾಟಿ, ಫಕ್ಕಿರೇಶ ಭಜಂತ್ರಿ, ಸಿದ್ದಪ್ಪ ಈರಗೊಂಡ, ಗುಡ್ಡಪ್ಪ ಬಣಕಾರ, ಶಿವಲಿಂಗಪ್ಪ ಹಟ್ಟಿ, ರೈತ ಮುಖಂಡರು ಹಾಗೂ ಇತರರು ಪಾಲ್ಗೊಂಡಿದ್ದರು. ರೈತ ಸಂಘದ ಪದಾಧಿಕಾರಿಗಳಾದ ಎಂ.ಎಚ್‌.ಸಂಗೂರ ಹಾಗೂ ಡಿ.ಜಿ.ಬಣಕಾರ ಕಾರ್ಯಕ್ರಮ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ