ಆ್ಯಪ್ನಗರ

ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯಿಂದ ಅನಾಥ ವೃದ್ಧೆ ಅಂತ್ಯಸಂಸ್ಕಾರ

ಶಿಗ್ಗಾವಿ: ಸುಮಾರು ದಿನಗಳಿಂದ ವೃದ್ಧಾಶ್ರಮದಲ್ಲಿವಾಸವಾಗಿ ಭಾನುವಾರ ಮೃತಪಟ್ಟ ಕುಂದಗೋಳ ಪಟ್ಟಣದ ಅನಾಥ ವೃದ್ಧೆಯೊಬ್ಬರ ಅಂತ್ಯ ಸಂಸ್ಕಾರಕ್ಕೆ ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಆಶ್ರಯವಾಗಿದೆ.

Vijaya Karnataka 9 Sep 2019, 5:00 am
ಶಿಗ್ಗಾವಿ: ಸುಮಾರು ದಿನಗಳಿಂದ ವೃದ್ಧಾಶ್ರಮದಲ್ಲಿವಾಸವಾಗಿ ಭಾನುವಾರ ಮೃತಪಟ್ಟ ಕುಂದಗೋಳ ಪಟ್ಟಣದ ಅನಾಥ ವೃದ್ಧೆಯೊಬ್ಬರ ಅಂತ್ಯ ಸಂಸ್ಕಾರಕ್ಕೆ ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಆಶ್ರಯವಾಗಿದೆ.
Vijaya Karnataka Web 8SGN-7_23


ಬಾನುಬಿ ನಾಸವಾಲೆ 76ವರ್ಷದ ವೃದ್ಧೆಯೊಬ್ಬರು ಸಂಬಂಧಿಗಳಲ್ಲದೆ ಸುಮಾರು ದಿನಗಳಿಂದ ವೃದ್ಧಾಶ್ರಮದಲ್ಲಿವಾಸವಾಗಿದ್ದಳು. ಅನಾಥ ವೃದ್ಧೆ ಯೋಗ, ಕ್ಷೇಮದೊಂದಿಗೆ ಅನಾರೋಗ್ಯ ಚಿಕಿತ್ಸೆ ನೀಡಿ ಪೋಷಣೆ ಮಾಡುತ್ತಿದ್ದ ಡಾ.ರಾಣೆ ತಿರ್ಲಾಪುರ, ಡಾ.ಮೃತ್ಯುಂಜಯ ತಿರ್ಲಾಪುರ, ಅಂತಃಕರಣ ಮೆರೆದಿದ್ದರು.

ಮೃತಪಟ್ಟ ಈ ವೃದ್ಧೆಯ ಅಂತ್ಯ ಸಂಸ್ಕಾರವನ್ನು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಮೃತ್ಯುಂಜಯ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ, ನಾಗರೀಕರ ಸಹಕಾರದೊಂದಿಗೆ ಮುಸ್ಲಿಂ ಸಂಪ್ರದಾಯದಂತೆ ಶಿಗ್ಗಾವಿ ಪಟ್ಟಣದಲ್ಲಿಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ