ಆ್ಯಪ್ನಗರ

ಇಂದು ಪೋಷಕರ ಜಾಗೃತಿ ಶಿಬಿರ

ರಾಣೇಬೆನ್ನೂರ: ಸ್ಥಳೀಯ ಶ್ರೀ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆ, ಅಂಧ ಮಕ್ಕಳ ವಸತಿ ಶಾಲೆ, ಶ್ರವಣ ನ್ಯೂನತೆ ಮಕ್ಕಳಿಗೆ ಬೋಧಿಸುವ ವಿಶೇಷ ಶಿಕ್ಷಕರ ತರಬೇತಿ ಕೇಂದ್ರ ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ಇವರುಗಳ ಸಂಯುಂಕ್ತಾಶ್ರಯದಲ್ಲಿವಿಶ್ವ ಕಿವುಡ ಮಕ್ಕಳ ದಿನಾಚರಣೆ, ಕಾನೂನು ಅರಿವು ನೆರವು, ಪೊಷಕರ ಜಾಗೃತಿ ಶಿಬಿರ ಮತ್ತು ಚರ್ಚೆ ಕಾರ್ಯಕ್ರಮವನ್ನು ಸೆ.27ರಂದು ಸಂಜೆ 5ಕ್ಕೆ ಮಾರುತಿನಗರದ ಶಾಲಾ ಆವರಣದಲ್ಲಿಏರ್ಪಡಿಸಲಾಗಿದೆ.

Vijaya Karnataka 27 Sep 2019, 5:00 am
ರಾಣೇಬೆನ್ನೂರ: ಸ್ಥಳೀಯ ಶ್ರೀ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆ, ಅಂಧ ಮಕ್ಕಳ ವಸತಿ ಶಾಲೆ, ಶ್ರವಣ ನ್ಯೂನತೆ ಮಕ್ಕಳಿಗೆ ಬೋಧಿಸುವ ವಿಶೇಷ ಶಿಕ್ಷಕರ ತರಬೇತಿ ಕೇಂದ್ರ ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ಇವರುಗಳ ಸಂಯುಂಕ್ತಾಶ್ರಯದಲ್ಲಿವಿಶ್ವ ಕಿವುಡ ಮಕ್ಕಳ ದಿನಾಚರಣೆ, ಕಾನೂನು ಅರಿವು ನೆರವು, ಪೊಷಕರ ಜಾಗೃತಿ ಶಿಬಿರ ಮತ್ತು ಚರ್ಚೆ ಕಾರ್ಯಕ್ರಮವನ್ನು ಸೆ.27ರಂದು ಸಂಜೆ 5ಕ್ಕೆ ಮಾರುತಿನಗರದ ಶಾಲಾ ಆವರಣದಲ್ಲಿಏರ್ಪಡಿಸಲಾಗಿದೆ.
Vijaya Karnataka Web parent awareness campaign today
ಇಂದು ಪೋಷಕರ ಜಾಗೃತಿ ಶಿಬಿರ


ಹರಿಹರ ನಂದಿಗುಡಿ ಬ್ರಹನ್ಮಠದ ಸಿದ್ಧರಾಮೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು. ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಬಿ.ಜಿ.ಪ್ರಮೋದ ಉದ್ಘಾಟಿಸುವರು. ಸೇವಾ ಅಂಧರ ಸಂಸ್ಥೆಯ ಕಾರ್ಯದರ್ಶಿ ರೇಣುಕಾ ಶಿವಕುಮಾರ ಅಧ್ಯಕ್ಷತೆ ವಹಿಸುವರು. ಪ್ರಧಾನ ಹಿರಿಯ ನ್ಯಾಯಾಧೀಶ ಶಿವರಾಜ ಪಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಮಕೃಷ್ಣ ಪಠಗಣ್ಣನವರ, ತಹಸೀಲ್ದಾರ ಸಿ.ಎಸ್‌.ಕುಲಕರ್ಣಿ, ನಗರಸಭೆ ಪೌರಾಯುಕ್ತ ಡಾ.ಮಹಾಂತೇಶ ಎನ್‌., ಜಿಲ್ಲಾವಿಕಲಚೇತನ ಕಲ್ಯಾಣಾಧಿಕಾರಿ ಎಂ.ವಿ.ಮಠದ, ಶಹರ ಸಿಪಿಐ ಲಿಂಗನಗೌಡ ನೆಗಳೂರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್‌. ಇನ್ನಿತರರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ