ಆ್ಯಪ್ನಗರ

50 ಸಸಿ ನೆಟ್ಟ ಸೃಷ್ಠಿ ಪಾಟೀಲ

ಹಿರೇಕೆರೂರು: ಪರಿಸರದ ಮಹತ್ವ ಗೊತ್ತಿಲ್ಲದೆ, ಅದನ್ನು ಹಾಳು ಮಾಡುತ್ತಿರುವುದರಿಂದ ಜನಜೀವನದಲ್ಲಿ ಅಶಾಂತಿ, ಕಿರಿಕಿರಿ ಹೆಚ್ಚಾಗುತ್ತಿದೆ ಎಂದು ಚಿತ್ರನಟಿ ಸೃಷ್ಠಿ ಪಾಟೀಲ್‌ ಹೇಳಿದರು.

Vijaya Karnataka 8 Jun 2019, 5:00 am
ಹಿರೇಕೆರೂರು: ಪರಿಸರದ ಮಹತ್ವ ಗೊತ್ತಿಲ್ಲದೆ, ಅದನ್ನು ಹಾಳು ಮಾಡುತ್ತಿರುವುದರಿಂದ ಜನಜೀವನದಲ್ಲಿ ಅಶಾಂತಿ, ಕಿರಿಕಿರಿ ಹೆಚ್ಚಾಗುತ್ತಿದೆ ಎಂದು ಚಿತ್ರನಟಿ ಸೃಷ್ಠಿ ಪಾಟೀಲ್‌ ಹೇಳಿದರು.
Vijaya Karnataka Web HVR-7HKR 1


ಅವರು ಶುಕ್ರವಾರ ಕೌರವ ಶಿಕ್ಷ ಣ ಸಂಸ್ಥೆಯ ಆಶ್ರಯದಲ್ಲಿ ಪಟ್ಟಣದ ಬಿ.ಹೆಚ್‌.ಬನ್ನಿಕೋಡ್‌ ಬಡಾವಣೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 50 ಸಸಿ ನೆಟ್ಟು ಮಾತನಾಡಿದ ಅವರು, ನೆಟ್ಟ 50 ಸಸಿಗಳನ್ನು ಕೌರವ ಶಿಕ್ಷ ಣ ಸಂಸ್ಥೆ ದತ್ತು ಪಡೆದು ಹೆಮ್ಮರವಾಗಿ ಬೆಳೆಸುವುದಾಗಿ ಪ್ರತಿಜ್ಞೆ ಮಾಡಿದರು.

ನಾವು ಗಿಡ, ಮರ ನಾಶ ಮಾಡುತ್ತಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ತಾಪಮಾನ ಕಡಿಮೆ ಮಾಡಲು ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಮರಗಳನ್ನಾಗಿ ಬೆಳೆಸಬೇಕು. ಇದರಿಂದ ಮಳೆಯಾಗಿ ಕೆರೆ, ಕಟ್ಟೆಗಳು ತುಂಬಿ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ ಎಂದು ಹೇಳಿದರು.

ಸಿಪಿಐ ಮಂಜುನಾಥ್‌ ಪಂಡಿತ್‌ ಮಾತನಾಡಿ, ಪರಿಸರ ಹಾನಿಗೆ ನಾವೇ ಹೊಣೆಗಾರರಾಗಿದ್ದೇವೆ. ಆದ್ದರಿಂದ ಪ್ರತಿಯೊಬ್ಬರು ಸ್ವಚ್ಛ ಪರಿಸರ ಕಾಪಾಡಲು ಗಿಡ, ಮರಗಳನ್ನು ಹೆಚ್ಚು ಹೆಚ್ಚು ಬೆಳೆಸಬೇಕು ಎಂದರು.

ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ಮಾತನಾಡಿದರು. ಪ.ಪಂ ಸದಸ್ಯರಾದ ಗುರುಶಾಂತ ಯತ್ತಿನಹಳ್ಳಿ, ರಜಿಯಾ ಬೇಗಮ್‌ ಅಸಾದಿ, ರತ್ನವ್ವ ತಿಪ್ಪಣ್ಣನವರ, ಅಂಬರೀಷ ಹೂಗಾರ, ಸರಿತಾ ಬಣಕಾರ, ಎಸ್‌.ಹೆಚ್‌.ಸವಿತಾ, ಕೆ.ವಾಸೀಮಾಬಾನು, ರಂಜಿತಾ ವೈಶ್ಯರ, ಹೇಮಾವತಿ ರೆಡ್ಡೇರ, ಬಸಮ್ಮ ಒಡೇನಪುರ, ಶೃತಿ ಮಡಿವಾಳರ ಹಾಗೂ ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿ ಇದ್ದರು. ಮುಖ್ಯೋಪಾದ್ಯಾಯ ಶಾಂತೇಶ ಪೂಜಾರ ಸ್ವಾಗತಿಸಿದರು, ಶಿಕ್ಷ ಕ ಮಂಜುನಾಥ ಒಂಟಕರ್‌ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ