ಆ್ಯಪ್ನಗರ

ಶಾಂತಿದಾಯಕ ಬದುಕಿಗೆ ಸಂಸ್ಕಾರ ಅವಶ್ಯ: ಸೋಮೇಶ್ವರ ಶ್ರೀ

ಬ್ಯಾಡಗಿ: ಎಲ್ಲ ಧರ್ಮಗಳ ಸಾರ ಒಂದೇ ಆಗಿದ್ದು, ಸರ್ವ ಧರ್ಮಗಳನ್ನು ಗೌರವದಿಂದ ಕಾಣುವ ಸಂಸ್ಕಾರವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದು ಪುಷ್ಪ ಗಿರಿ ಮಹಾಸಂಸ್ಥಾನದ ಸೋಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.

Vijaya Karnataka 21 May 2019, 5:00 am
ಬ್ಯಾಡಗಿ: ಎಲ್ಲ ಧರ್ಮಗಳ ಸಾರ ಒಂದೇ ಆಗಿದ್ದು, ಸರ್ವ ಧರ್ಮಗಳನ್ನು ಗೌರವದಿಂದ ಕಾಣುವ ಸಂಸ್ಕಾರವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದು ಪುಷ್ಪ ಗಿರಿ ಮಹಾಸಂಸ್ಥಾನದ ಸೋಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
Vijaya Karnataka Web HVR-20BYD5


ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ನೂತನ ಗಂಗಾಪರಮೇಶ್ವರಿ ಹಾಗೂ ಬಸವೇಶ್ವರ ದೇವಸ್ಥಾನಗಳ ಉದ್ಘಾಟನೆ, ಕಳಸಾರೋಹಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದರು. ಶಾಂತಿದಾಯಕ ಬದುಕಿಗೆ ಸಂಸ್ಕಾರದ ಅವಶ್ಯಕತೆ ಬಹಳಷ್ಟಿದೆ, ಧಾರ್ಮಿಕ ತಳಹದಿಯಲ್ಲಿ ಲೌಕಿಕ ಬದುಕನ್ನು ರೂಪಿಸಿಕೊಂಡಾಗ ಮಾತ್ರ ಸಾಧ್ಯವಾಗಲಿದೆ ಎಂದರು.

ಸಾಮರಸ್ಯ ಹಾಳು: ಸಂಸ್ಕಾರದ ಕೊರತೆಯಿಂದ ಮನುಷ್ಯ ಜೀವನ ಅಧಃಪತನದತ್ತ ಸಾಗುತ್ತಿದೆ. ಪ್ರಾಪಂಚಿಕ ಆಸೆಗಳಿಗೆ ಮನುಷ್ಯ ತಮ್ಮಲ್ಲಿರುವ ಪರಮೋಚ್ಚ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾನೆ, ಅಲ್ಪ ಸುಖಕ್ಕಾಗಿ ಅನೇಕ ಕೃತ್ಯಗಳನ್ನು ಮಾಡುತ್ತಿದ್ದೇವೆ, ಇದರಿಂದ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದ್ದು, ಪುರಾತನ ಕಾಲದಿಂದಲೂ ನಡೆದು ಬಂದ ಪುರಾಣ ಪ್ರವಚನಗಳು, ಶರಣರ ಹಾಗೂ ದಾರ್ಶನಿಕರ ಸಂದೇಶಗಳನ್ನು ಸಾರುವ ಧಾ ರ್ಮಿಕ ಕೈಂಕರ್ಯಗಳನ್ನು ಕೈಗೊಂಡಾಗ ಸಮಾಜದಲ್ಲಿ ಶಾಂತಿ, ನೆಮ್ಮದಿಯಂತಹ ವಾತಾವರಣ ನಿರ್ಮಾಣವಾಗುತ್ತದೆ ಎಂದರು.

ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ ಮಾತನಾಡಿ,ಆಧುನಿಕ ಜಂಜಾಟದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಂದ ಜನ ವಿಮುಖರಾಗುತ್ತಿದ್ದು, ಧರ್ಮಭೋದನೆ ತಿಳಿಯುವ ಗೋಜಿಗೆ ಹೋಗುತ್ತಿಲ್ಲ, ಹಾಗಾಗಿ ಸಾಮಾಜಿಕ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗುತ್ತಿದೆ. ಇಂದು ಧರ್ಮಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವ ಅವಶ್ಯಕತೆ ಇದೆ. ಕಾಯಕದಲ್ಲಿ ನಾವು ದೈವತ್ವವನ್ನು ಕಾಣುವುದನ್ನು ರೂಡಿಸಿಕೊಳ್ಳಬೇಕು ಎಂದರು.

ಜಗದೀಶ ಕಣಗಲಬಾವಿ, ವಿರಭದ್ರಪ್ಪ ಗೊಡಾಚಿ, ಚನಬಸಪ್ಪ ನಿಟ್ಟೂರ, ಶಿವರಾಯಪ್ಪ ಹುಳ್ಳೆರ, ಸುರೇಶಪ್ಪ ಬಾರ್ಕಿ, ಚನಬಸಪ್ಪ ಅನಜಿ, ಪಕ್ಕಿರಪ್ಪ ಹುಳ್ಳೆ ರ, ಜಗದೀಶ ಮಂಕಾವಿ, ಗುತ್ತೇಪ್ಪ ಬಾರ್ಕಿ, ಜಿತೇಂದ್ರ ಸುಣಗಾರ, ರುದ್ರಗೌಡ ಕಾಡನ ಗೌಡ್ರ, ನಿಂಗಪ್ಪ ಹೆಗ್ಗಣ್ಣನವರ, ಚಂದ್ರಪ್ಪ ಬಾರ್ಕಿ, ಮಲ್ಲನಗೌಡ ಚನ್ನಗೌಡ್ರ, ಜಯಣ್ಣ ಮಲ್ಲಿಗಾರ, ರುದ್ರಪ್ಪ ಹೊಂಕಣ ಗಣೇಶಪ್ಪ ಬಾರ್ಕಿ ಉಪಸ್ಥಿತದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ