ಆ್ಯಪ್ನಗರ

ಪ್ಲಾಸ್ಟಿಕ ಮುಕ್ತವಾಗಿಸಲು ಜನರ ಸಹಕಾರ ಮುಖ್ಯ

ರಾಣೇಬೆನ್ನೂರ : ಭವಿಷ್ಯದ ಪೀಳಿಗೆ ಸಲುವಾಗಿ ನಾವೆಲ್ಲರೂ ಜಲ ಸಂರಕ್ಷಣೆಯಲ್ಲಿತೊಡಗಿಸಿಕೊಳ್ಳಬೇಕು ಹಾಗೂ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಬೇಕು ಎಂದು ನಗರಸಭೆ ಪೌರಾಯುಕ್ತ ಡಾ.ಮಹಾಂತೇಶ ಎನ್‌. ಹೇಳಿದರು.

Vijaya Karnataka 28 Sep 2019, 5:00 am
ರಾಣೇಬೆನ್ನೂರ : ಭವಿಷ್ಯದ ಪೀಳಿಗೆ ಸಲುವಾಗಿ ನಾವೆಲ್ಲರೂ ಜಲ ಸಂರಕ್ಷಣೆಯಲ್ಲಿತೊಡಗಿಸಿಕೊಳ್ಳಬೇಕು ಹಾಗೂ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಬೇಕು ಎಂದು ನಗರಸಭೆ ಪೌರಾಯುಕ್ತ ಡಾ.ಮಹಾಂತೇಶ ಎನ್‌. ಹೇಳಿದರು.
Vijaya Karnataka Web 26RNR2_23
ರಾಣೇಬೆನ್ನೂರಿನಲ್ಲಿಆಯೋಜಿಸಲಾಗಿದ್ದ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆಯ(ನೀಡ್ಸ್‌) ರಜತ ಮಹೋತ್ಸವ ಸಮಾರಂಭವನ್ನು ಡಾ.ಮಹಾಂತೇಶ ಉದ್ಘಾಟಿಸಿದರು.


ನಗರದ ಸ್ಟೇಷನ್‌ ರಸ್ತೆ ವರ್ತಕರ ಸಮುದಾಯ ಭವನದಲ್ಲಿಗುರುವಾರ ಏರ್ಪಡಿಸಲಾಗಿದ್ದ ಸ್ಥಳೀಯ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆಯ(ನೀಡ್ಸ್‌) ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿಪರಿಸರ ಜಾಗೃತಿ ಮತ್ತು ಜೈವಿಕ ಇಂಧನ ಬಳಕೆ ಕುರಿತು ಜನರಲ್ಲಿಅರಿವು ಮೂಡಿಸುವ ಕಾರ್ಯ ಮಾಡುತ್ತಿರುವ ನೀಡ್ಸ್‌ ಸಂಸ್ಥೆಯ ಕಾರ್ಯ ಶ್ಲಾಘನೀಯ. ನಗರದಲ್ಲಿಯೂ ಕೂಡ ನೀಡ್ಸ್‌ ಸಂಸ್ಥೆ ಸಹಯೋಗದಲ್ಲಿನಗರಸಭೆ ವತಿಯಿಂದ 500 ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ನಗರಸಭೆ ವತಿಯಿಂದ ಬರುವ ಅ.2ರಿಂದ ನಗರವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕೆ ನಗರದ ಜನತೆ ಸಹಕಾರ ನೀಡಬೇಕು ಎಂದರು.

ಹಾವೇರಿ ಹೊಸಮಠದ ಬಸವಶಾಂತಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ, ಸುಜಲಾನ್‌ ಫೌಂಡೇಶನ್‌ದ ದೀಪಕ ಕ್ಷೀರಸಾಗರ, ಫೇವಾರ್ಡ್‌ ಸಂಸ್ಥೆಯ ಆಂಜನೇಯರಡ್ಡಿ, ಕೃಷಿ ಇಲಾಖೆ ಉಪನಿರ್ದೇಶಕಿ ಸ್ಪೂರ್ತಿ, ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ಕೆ.ಸಿ.ಕೋಮಲಾಚಾರ್‌, ಡಾ.ನಾರಾಯಣ ಪವಾರ, ರವೀಂದ್ರಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನೀಡ್ಸ್‌ ಸಂಸ್ಥೆಯ ಅಧ್ಯಕ್ಷೆ ಮಾರುತಿ ದೇವಧರ ಅಧ್ಯಕ್ಷತೆ ವಹಿಸಿದ್ದರು. ಎಚ್‌.ಎಫ್‌.ಅಕ್ಕಿ, ಬಿ.ಎಚ್‌.ಗಣಿ, ಶಶಿಕಲಾ ರವಿಶಂಕರ, ವನಮಾಲಾ ತುಮ್ಮಿನಕಟ್ಟಿ, ಎಚ್‌.ಪಿ.ಕನಕೇರಿ, ಆರ್‌.ಜಗನ್ನಾಥ, ಶಿವಕುಮಾರ, ನವೀನಕುಮಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ