ಆ್ಯಪ್ನಗರ

ಪ್ಲಾಸ್ಟಿಕ್‌ ಬಳಕೆ ಜೀವಸಂಕುಲಕ್ಕೆ ಮಾರಕ:ಬಿಂಗಾಪೂರ

ಅಕ್ಕಿಆಲೂರು : ಜೀವಸಂಕುಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಬಳಕೆ ಕುರಿತು ಸಮುದಾಯದಲ್ಲಿಅರಿವು ಮೂಡಿಸುವ ಕಾರ್ಯ ಪ್ರಾಮಾಣಿಕವಾಗಿ ನಡೆಯಬೇಕಿದೆ ಎಂದು ಗ್ರಾಪಂ ಸದಸ್ಯ ಇಮಾಮಸಾಬ ಬಿಂಗಾಪೂರ ಹೇಳಿದರು.

Vijaya Karnataka 20 Oct 2019, 5:00 am
ಅಕ್ಕಿಆಲೂರು : ಜೀವಸಂಕುಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಬಳಕೆ ಕುರಿತು ಸಮುದಾಯದಲ್ಲಿಅರಿವು ಮೂಡಿಸುವ ಕಾರ್ಯ ಪ್ರಾಮಾಣಿಕವಾಗಿ ನಡೆಯಬೇಕಿದೆ ಎಂದು ಗ್ರಾಪಂ ಸದಸ್ಯ ಇಮಾಮಸಾಬ ಬಿಂಗಾಪೂರ ಹೇಳಿದರು.
Vijaya Karnataka Web plastic use is fatal to life bingapura
ಪ್ಲಾಸ್ಟಿಕ್‌ ಬಳಕೆ ಜೀವಸಂಕುಲಕ್ಕೆ ಮಾರಕ:ಬಿಂಗಾಪೂರ


ಕಂಚಿನೆಗಳೂರಿನಲ್ಲಿಗ್ರಾಪಂ ಆಶ್ರಯದಲ್ಲಿನಡೆದ ಪ್ಲಾಸ್ಟಿಕ್‌ ಮುಕ್ತ ಗ್ರಾಮ ಜನಾಂದೋಲನ ಕಾರ್ಯಕ್ರಮದಲ್ಲಿಭಾಗವಹಿಸಿ ಅವರು ಮಾತನಾಡಿದರು. ಪ್ಲಾಸ್ಟಿಕ್‌ ಬಗೆಗೆ ಸಾರ್ವಜನಿಕರಲ್ಲಿಕಾಟಾಚಾರಕ್ಕೆ ಜಾಗೃತಿ ಮೂಡಿಸಲಾಗುತ್ತಿರುವುದು ಸರಿಯಲ್ಲ. ಭವಿಷ್ಯದ ಹಿತದೃಷ್ಟಿಯಿಂದ ಈಗಲೇ ಪ್ಲಾಸ್ಟಿಕ್‌ ತ್ಯಜಿಸುವ ನಿರ್ಣಯ ಕೈಗೊಳ್ಳಬೇಕಿದೆ. ಗಿಡಮರ ಬೆಳೆಸದಿದ್ದರೆ ಭವಿಷ್ಯದಲ್ಲಿಸಂಕಷ್ಟ ತಪ್ಪಿದ್ದಲ್ಲಎಂದು ಎಚ್ಚರಿಸಿದ ಅವರು ನನ್ನ ಗ್ರಾಮ ಸ್ವಚ್ಛ ಮತ್ತು ಸುಂದರ ಹಾಗೂ ಆರೋಗ್ಯವಂತವಾಗಿಸುವ ಹೊಣೆ ನಮ್ಮೆಲ್ಲರದ್ದು. ಇದಕ್ಕೆ ಇನ್ನೊಬ್ಬರತ್ತ ಬೊಟ್ಟು ಮಾಡಿ ತೋರಿಸುವುದು ಬೇಡ ಎಂದರು.

ಇದೇ ಸಂದರ್ಭದಲ್ಲಿಪ್ರತಿಜ್ಞಾ ವಿಧಿ ಸ್ವೀಕರಿಸಿ ಪ್ಲಾಸ್ಟಿಕ್‌ ಬಳಕೆ ಬಗೆಗೆ ಅರಿವು ಮೂಡಿಸಲು ಸಂಕಲ್ಪಿಸಲಾಯಿತು. ಗ್ರಾಪಂ ಸದಸ್ಯರಾದ ಸುರೇಶ ಅರಳೇಶ್ವರ, ರಾಮಚಂದ್ರ ಮಲಗುಂದ, ಪ್ರಮುಖರಾದ ಗೋಪಾಲಪ್ಪ ಗಿರಿಯಣ್ಣನವರ, ಶಿವಾನಂದ ತುಮರಿ, ಶಿವರಾಜ್‌ ನೆಲವಿಗಿ ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ