ಆ್ಯಪ್ನಗರ

ಪುಷ್ಪ ಕೃಷಿಯಿಂದ ಸಾಕಷ್ಟು ಲಾಭ

ಅಕ್ಕಿಆಲೂರು: ಪುಷ್ಪ ಕೃಷಿ ರೈತ ಸಮೂಹದ ಕೈ ಹಿಡಿಯಲಿದೆ. ಈ ನಿಟ್ಟಿನಲ್ಲಿ ರೈತ ಸಮೂಹ ಪುಷ್ಪ ಕೃಷಿಯತ್ತ ಚಿತ್ತ ಹರಿಸುವ ಅಗತ್ಯವಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗರತ್ನಾ ಹೆಗಡೆ ಹೇಳಿದರು.

Vijaya Karnataka 18 Jun 2019, 5:00 am
ಅಕ್ಕಿಆಲೂರು: ಪುಷ್ಪ ಕೃಷಿ ರೈತ ಸಮೂಹದ ಕೈ ಹಿಡಿಯಲಿದೆ. ಈ ನಿಟ್ಟಿನಲ್ಲಿ ರೈತ ಸಮೂಹ ಪುಷ್ಪ ಕೃಷಿಯತ್ತ ಚಿತ್ತ ಹರಿಸುವ ಅಗತ್ಯವಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗರತ್ನಾ ಹೆಗಡೆ ಹೇಳಿದರು.
Vijaya Karnataka Web plenty of profit from flower cultivation
ಪುಷ್ಪ ಕೃಷಿಯಿಂದ ಸಾಕಷ್ಟು ಲಾಭ


ತಿಳವಳ್ಳಿಯ ಪ್ರಭಾವತಿ ಕಛವಿ ಇವರ ಮಲ್ಲಿಗೆ ಹೂವಿನ ಪ್ಲಾಟ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದ ಅಡಿ ಆಯೋಜಿಸಲಾಗಿದ್ದ ಪುಷ್ಪ ಕೃಷಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೀರಿನ ಸದ್ಭಳಕೆಗೆ ರೈತ ಸಮೂಹ ವಿಶೇಷ ಗಮನ ಹರಿಸಬೇಕಿದೆ. ಕೃಷಿಯಲ್ಲಿ ಹನಿ ನೀರೂ ಸಹ ಉಪಯುಕ್ತವಾಗಿದೆ. ನೀರಿನ ಸದ್ಭಳಕೆಯ ವಿಚಾರ ಗ್ರಾಮೀಣ ಪ್ರದೇಶದಲ್ಲಿ ಜಾಗೃತಗೊಳ್ಳುವ ಅಗತ್ಯವಿದೆ. ಭೂಮಿಯ ಸತ್ವತೆಯನ್ನು ಹಾಳು ಮಾಡಿಕೊಳ್ಳದೇ ತಾಂತ್ರಿಕತೆ, ವೈಜ್ಞಾನಿಕತೆಯ ಸಹಾಯದಿಂದ ರೈತರು ಹೆಚ್ಚು ಹೆಚ್ಚು ಇಳುವರಿ ಪಡೆಯುವಲ್ಲಿ ಆಸಕ್ತಿ ವಹಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಪುಷ್ಪ ಕೃಷಿ ಆರ್ಥಿಕ ಸಬಲತೆಗೆ ಕಾರಣವಾಗುತ್ತಿದೆ. ಕಡಿಮೆ ಭೂಮಿಯಲ್ಲಿಯೇ ಪುಷ್ಪ ಕೃಷಿಯಲ್ಲಿ ತೊಡಗಬಹುದಾಗಿದೆ ಎಂದರು.

ಯೋಜನೆಯ ತಾಲೂಕಾ ಕೃಷಿ ಅಧಿಕಾರಿ ಪ್ರದೀಪ ಆರ್‌. ಮಾತನಾಡಿ, ರಸಗೊಬ್ಬರದ ಅತಿಯಾದ ಬಳಕೆ ತಡೆಗಟ್ಟುವ ಮೂಲಕ ಸಾವಯವ ಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ಇಂತಹ ಕೃಷಿ ತರಬೇತಿ ಕಾರ್ಯಕ್ರಮ ಹೆಚ್ಚೆಚ್ಚು ನಡೆಯಬೇಕಿದೆ. ಆ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ ಎಂದು ಹೇಳಿದ ಅವರು ಪುಷ್ಪ ಕೃಷಿಯ ಬಗೆಗೆ ಮಾಹಿತಿ ನೀಡುವ ಉದ್ದೇಶದಿಂದ ಯೋಜನೆ ಇಂಥ ತರಬೇತಿ ಕಾರ್ಯಕ್ರಮ ನಡೆಸುತ್ತಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಈರಪ್ಪ ದ್ಯಾವಜ್ಜನವರ, ಪ್ರಕಾಶ್‌ ದ್ಯಾವಜ್ಜನವರ, ಪುಷ್ಪ ಕೃಷಿಯ ವಿಧಾನ, ಸಸಿ ತಯಾರಿ, ನಾಟಿ, ಪೋಷಣೆ, ಪಾಲನೆ, ಮಾರುಕಟ್ಟೆ ಸೇರಿದಂತೆ ಇತರ ವಿಷಯಗಳ ಕುರಿತು ಮಾಹಿತಿ ನೀಡಿದರು. ಯೋಜನೆಯ ವಲಯ ಮೇಲ್ವಿಚಾರಕಿ ವಾಣಿ, ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಬಡಿಗೇರ, ಸೇವಾ ಪ್ರತಿನಿಧಿ ವಿಜಯ ಕ್ಯಾತಣ್ಣನವರ, ಭಾಗ್ಯಶ್ರೀ ದೊಡ್ಡಮನಿ, ಯಶೋಧಾ ಡಮ್ಮಳ್ಳಿ ಸೇರಿದಂತೆ ಇನ್ನೂ ಹಲವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ