ಹಾವೇರಿ: ಸರಳ, ಶಾಂತಿಯುತವಾಗಿ ಚುನಾವಣೆ ಎದುರಿಸಲು ಜಿಲ್ಲಾ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಹೇಳಿದರು.
ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನದ ದಿನದಂದು ವಿಶೇಷ ಭದ್ರತೆಗಾಗಿ 6 ಜನ ಡಿಎಸ್ಪಿ, 18 ಜನರ ಸಿಪಿಐ, 20 ಜನ ಪಿಎಸ್ಐ, 98 ಎಎಸ್ಐ, 139 ಕಾನಸ್ಟೇಬಲ್, 998 ಹೂಂಗಾಡ್ಸ್ ಸಿಬ್ಬಂದಿ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆಯಿಂದ ಉಡುಪಿ, ಚಿಕ್ಕಮಂಗಳೂರು ಸೇರಿದಂತೆ ಹೊರ ಜಿಲ್ಲೆಗಳನ್ನು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಖಿ ಮತಗಟ್ಟೆಗಳಲ್ಲಿ ವಿಶೇಷವಾಗಿ ಮಹಿಳಾ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣೆ ಭದ್ರತೆಯ ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ 518 ವಿವಿಧ ಶಸ್ತ್ರಗಳ ಬಳಕೆದಾರರಿದ್ದು, ಅದರಲ್ಲಿ 497 ವಶಕ್ಕೆ ಪಡೆದುಕೊಳ್ಳಲಾಗಿದೆ. 21 ಶಸ್ತ್ರಗಳನ್ನು ವಿವಿಧ ಕಾರಣಗಳಿಂದ ಜಿಲ್ಲಾಧಿಕಾರಿಗಳ ವಿನಾಯತಿ ಪಡೆದು ನೀಡಲಾಗಿದೆ. ಚುನಾವಣೆ ನೀತಿ ಸಂಹಿತೆ ಘೋಷಣೆಯಾಗಿದ್ದರಿಂದ ಇಲ್ಲಿಯವರೆಗೂ 933 ಜಾಮೀನು ರಹಿತ ಪ್ರಕರಣಗಳು ದಾಖಲಾಗಿವೆ. 1278 ಮುಂಜಾಗೃತ ಕ್ರಮ ದೂರು ದಾಖಲಿಸಿಕೊಳ್ಳಾಗಿದೆ. 114 ಕ್ರಿಮಿನಲ್ ಗೂಂಡಾ ಪ್ರಕರಣಗಳು ದಾಖಲಾಗಿವೆ. 218 ದುರ್ಬಲ ವರ್ಗಗಳ ಪ್ರಕರಣಗಳು ದಾಖಲಾಗಿವೆ. 142 ಹಳೆಯ ಕೇಸ್ಗಳು ಇವೆ. 498 ಸಿವಿಲ್ ಕೇಸ್ಗಳು ಪ್ರಕರಣಗಳು ದಾಖಲಾಗಿವೆ. ಆದರೆ ಈ ಬಾರಿ ಚುನಾವಣೆ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗಳ ಗಡಿಪಾರು ಮಾಡುವಂತ ಕೇಸ್ಗಳು ಇಲ್ಲದ ಕಾರಣ ಜಿಲ್ಲೆಯಲ್ಲಿ ಯಾರನ್ನು ಗಡಿಪಾರು ಮಾಡಲಾಗಿಲ್ಲ ಎಂದು ತಿಳಿಸಿದರು.
ಇದುವರೆಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ಕುರಿತು 14 ಪ್ರಕರಣಗಳು ದಾಖಲಾಗಿವೆ. 18 ಅಬಕಾರಿ ಪ್ರಕರಣಗಳು, 1.52 ಲಕ್ಷ ರೂ. ಮೊತ್ತ ಮದ್ಯ ವಶಪಡಿಸಿಕೊಳ್ಳಾಗಿದೆ ಎಂದು ಹೇಳಿದರು.
ಜಿಪಂ ಸಿಇಒ ಕೆ.ಲೀಲಾವತಿ ಮಾತನಾಡಿ, ಪಿ.ಡಬ್ಲ್ಯೂಡಿ ವೋಟರ್ಗಳ ಮತದಾನ ಮಾಹಿತಿ ಹಾಗೂ ಮತದಾನ ಸೌಲಭ್ಯಗಳ ಕುರಿತಂತೆ ಉಸ್ತುವಾರಿ ಅಧಿಕಾರಿಗಳನ್ನು ಹಾಗೂ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. 560 ಜನ ಸ್ಕೌಟ್ ಆಂಡ್ ಗೈಡ್ಸ್ ಸ್ವಯಂ ಸೇವಕರು, ಒಂಭತ್ತನೇ ತರಗತಿಯಿಂದ ಪಿ.ಯು.ಸಿ. ವ್ಯಾಸಂಗ ಮಾಡುವ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಆಯೋಗದ ಮಾರ್ಗಸೂಚಿಯಂತೆ ಈ ವಿದ್ಯಾರ್ಥಿಗಳಿಗೆ ಚುನಾವಣಾ ಕರ್ತವ್ಯ ನಿರ್ವಹಿಸಿದ ಕುರಿತು ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣಾ ಭಾಜಪೇಯಿ, ಸಹಾಯಕ ಚುನಾವಣಾಧಿಕಾರಿ ಗೋವಿಂದರೆಡ್ಡಿ ಇದ್ದರು.
ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನದ ದಿನದಂದು ವಿಶೇಷ ಭದ್ರತೆಗಾಗಿ 6 ಜನ ಡಿಎಸ್ಪಿ, 18 ಜನರ ಸಿಪಿಐ, 20 ಜನ ಪಿಎಸ್ಐ, 98 ಎಎಸ್ಐ, 139 ಕಾನಸ್ಟೇಬಲ್, 998 ಹೂಂಗಾಡ್ಸ್ ಸಿಬ್ಬಂದಿ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆಯಿಂದ ಉಡುಪಿ, ಚಿಕ್ಕಮಂಗಳೂರು ಸೇರಿದಂತೆ ಹೊರ ಜಿಲ್ಲೆಗಳನ್ನು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಖಿ ಮತಗಟ್ಟೆಗಳಲ್ಲಿ ವಿಶೇಷವಾಗಿ ಮಹಿಳಾ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣೆ ಭದ್ರತೆಯ ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ 518 ವಿವಿಧ ಶಸ್ತ್ರಗಳ ಬಳಕೆದಾರರಿದ್ದು, ಅದರಲ್ಲಿ 497 ವಶಕ್ಕೆ ಪಡೆದುಕೊಳ್ಳಲಾಗಿದೆ. 21 ಶಸ್ತ್ರಗಳನ್ನು ವಿವಿಧ ಕಾರಣಗಳಿಂದ ಜಿಲ್ಲಾಧಿಕಾರಿಗಳ ವಿನಾಯತಿ ಪಡೆದು ನೀಡಲಾಗಿದೆ. ಚುನಾವಣೆ ನೀತಿ ಸಂಹಿತೆ ಘೋಷಣೆಯಾಗಿದ್ದರಿಂದ ಇಲ್ಲಿಯವರೆಗೂ 933 ಜಾಮೀನು ರಹಿತ ಪ್ರಕರಣಗಳು ದಾಖಲಾಗಿವೆ. 1278 ಮುಂಜಾಗೃತ ಕ್ರಮ ದೂರು ದಾಖಲಿಸಿಕೊಳ್ಳಾಗಿದೆ. 114 ಕ್ರಿಮಿನಲ್ ಗೂಂಡಾ ಪ್ರಕರಣಗಳು ದಾಖಲಾಗಿವೆ. 218 ದುರ್ಬಲ ವರ್ಗಗಳ ಪ್ರಕರಣಗಳು ದಾಖಲಾಗಿವೆ. 142 ಹಳೆಯ ಕೇಸ್ಗಳು ಇವೆ. 498 ಸಿವಿಲ್ ಕೇಸ್ಗಳು ಪ್ರಕರಣಗಳು ದಾಖಲಾಗಿವೆ. ಆದರೆ ಈ ಬಾರಿ ಚುನಾವಣೆ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗಳ ಗಡಿಪಾರು ಮಾಡುವಂತ ಕೇಸ್ಗಳು ಇಲ್ಲದ ಕಾರಣ ಜಿಲ್ಲೆಯಲ್ಲಿ ಯಾರನ್ನು ಗಡಿಪಾರು ಮಾಡಲಾಗಿಲ್ಲ ಎಂದು ತಿಳಿಸಿದರು.
ಇದುವರೆಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ಕುರಿತು 14 ಪ್ರಕರಣಗಳು ದಾಖಲಾಗಿವೆ. 18 ಅಬಕಾರಿ ಪ್ರಕರಣಗಳು, 1.52 ಲಕ್ಷ ರೂ. ಮೊತ್ತ ಮದ್ಯ ವಶಪಡಿಸಿಕೊಳ್ಳಾಗಿದೆ ಎಂದು ಹೇಳಿದರು.
ಜಿಪಂ ಸಿಇಒ ಕೆ.ಲೀಲಾವತಿ ಮಾತನಾಡಿ, ಪಿ.ಡಬ್ಲ್ಯೂಡಿ ವೋಟರ್ಗಳ ಮತದಾನ ಮಾಹಿತಿ ಹಾಗೂ ಮತದಾನ ಸೌಲಭ್ಯಗಳ ಕುರಿತಂತೆ ಉಸ್ತುವಾರಿ ಅಧಿಕಾರಿಗಳನ್ನು ಹಾಗೂ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. 560 ಜನ ಸ್ಕೌಟ್ ಆಂಡ್ ಗೈಡ್ಸ್ ಸ್ವಯಂ ಸೇವಕರು, ಒಂಭತ್ತನೇ ತರಗತಿಯಿಂದ ಪಿ.ಯು.ಸಿ. ವ್ಯಾಸಂಗ ಮಾಡುವ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಆಯೋಗದ ಮಾರ್ಗಸೂಚಿಯಂತೆ ಈ ವಿದ್ಯಾರ್ಥಿಗಳಿಗೆ ಚುನಾವಣಾ ಕರ್ತವ್ಯ ನಿರ್ವಹಿಸಿದ ಕುರಿತು ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣಾ ಭಾಜಪೇಯಿ, ಸಹಾಯಕ ಚುನಾವಣಾಧಿಕಾರಿ ಗೋವಿಂದರೆಡ್ಡಿ ಇದ್ದರು.