ಆ್ಯಪ್ನಗರ

ಮಕ್ಕಳ ಹಕ್ಕು ರಕ್ಷ ಣೆಗಾಗಿ ಪೋಸ್ಕೊ ಜಾರಿ

ಹಾನಗಲ್ಲ : ಪೋಸ್ಕೊ ಕಾಯ್ದೆಯಿಂದ ಮಕ್ಕಳ ಹಕ್ಕುಗಳ ರಕ್ಷ ಣೆಯ ಗಂಭೀರತೆ ಹೆಚ್ಚಿದೆ. ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷ ಣೆಗಾಗಿ ಕಾನೂನು ಸೇವಾ ಪ್ರಾಧಿಕಾರವು ಉಚಿತ ಕಾನೂನು ಸೇವೆಯ ಕಾರ್ಯ ನಿರ್ವಹಿಸುತ್ತಿದೆ ಎಂದು ಹಾನಗಲ್ಲ ಸಿವಿಲ್‌ ಜಡ್ಜ್‌ ಎಫ್‌.ವಿ.ಕೆಳಗೇರಿ ಹೇಳಿದರು.

Vijaya Karnataka 1 Dec 2018, 5:00 am
ಹಾನಗಲ್ಲ : ಪೋಸ್ಕೊ ಕಾಯ್ದೆಯಿಂದ ಮಕ್ಕಳ ಹಕ್ಕುಗಳ ರಕ್ಷ ಣೆಯ ಗಂಭೀರತೆ ಹೆಚ್ಚಿದೆ. ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷ ಣೆಗಾಗಿ ಕಾನೂನು ಸೇವಾ ಪ್ರಾಧಿಕಾರವು ಉಚಿತ ಕಾನೂನು ಸೇವೆಯ ಕಾರ್ಯ ನಿರ್ವಹಿಸುತ್ತಿದೆ ಎಂದು ಹಾನಗಲ್ಲ ಸಿವಿಲ್‌ ಜಡ್ಜ್‌ ಎಫ್‌.ವಿ.ಕೆಳಗೇರಿ ಹೇಳಿದರು.
Vijaya Karnataka Web HBL-3011-2-3-29HGL2
ಹಾನಗಲ್ಲ ಕುಮಾರೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶೆ ಎಫ್‌.ವಿ.ಕೆಳಗೇರಿ ಉದ್ಘಾಟಿಸಿದರು.


ಇಲ್ಲಿನ ಕುಮಾರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬಾಲನ್ಯಾಯ ಅಧಿನಿಯಮ, ಮಕ್ಕಳ ಹಕ್ಕುಗಳ ಕುರಿತು ಕಾರ್ಯಾಗಾರ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಶಿಕ್ಷ ಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ನಿಯಮಗಳು ಜಾರಿಗೊಳ್ಳುತ್ತಿವೆ. ಮಕ್ಕಳಿಗೆ ಶಿಕ್ಷ ಣ ಕೊಡಿಸುವ ಗುರುತರ ಜವಾಬ್ದಾರಿಯನ್ನು ಪಾಲಕರು ನೆರವೇರಿಸಬೇಕು ಎಂದರು.

ಹಾನಗಲ್ಲ ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕೊತಂಬರಿ ಮಾತನಾಡಿ, ಇದು ಪ್ರತಿಭಾವಂತರ ಶತಮಾನ. ಪ್ರತಿಭೆಗೆ ತಕ್ಕ ಅವಕಾಶಗಳು ಈಗ ಸಿಗುತ್ತಿವೆ. ಶಿಕ್ಷ ಣದಿಂದ ವಿಕಾಸ ಸಾಧ್ಯವಿದೆ ಎಂಬ ಜಾಗೃತಿಯು ಪಾಲಕರಲ್ಲಿ ಮೂಡತೊಡಗಿದೆ. ಮಕ್ಕಳ ಹಕ್ಕುಗಳ ರಕ್ಷ ಣೆ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದರು.

ವಕೀಲರಾದ ಜಿ.ವಿ.ಕಂಬಾಳಿಮಠ, ಎಸ್‌.ಎಂ.ಹಾದಿಮನಿ ಉಪನ್ಯಾಸ ನೀಡಿದರು. ವಕೀಲರ ಸಂಘದ ಉಪಾಧ್ಯಕ್ಷ ಎಸ್‌.ಟಿ.ಕಾಮನಹಳ್ಳಿ, ಆರ್‌.ಎಸ್‌.ತಳವಾರ, ಪ್ರಾಚಾರ್ಯ ಟಿ.ಎನ್‌.ಕಾಮನಹಳ್ಳಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ