ಆ್ಯಪ್ನಗರ

ಅಂಚೆ ಜೀವ ವಿಮಾ ಕಾರಾರ‍ಯಗಾರ

ಹಾವೇರಿ: ಅಂಚೆ ಜೀವ ವಿಮೆ ಕೇವಲ ಸರಕಾರಿ ನೌಕರರಿಗೆ ಮಾತ್ರ ಇಲ್ಲ. ವಕೀಲರು, ವೈದ್ಯರು ಇತರರು ಯೋಜನೆಯ ಸದುಪಯೋಗಪಡೆದುಕೊಳ್ಳಬೇಕೆಂದು ಹಾವೇರಿ ಅಂಚೆ ವಿಭಾಗದ ಅಧೀಕ್ಷಕ ರಮೇಶ ಪ್ರಭು ಹೇಳಿದರು.

Vijaya Karnataka 1 Mar 2020, 5:00 am
ಹಾವೇರಿ: ಅಂಚೆ ಜೀವ ವಿಮೆ ಕೇವಲ ಸರಕಾರಿ ನೌಕರರಿಗೆ ಮಾತ್ರ ಇಲ್ಲ. ವಕೀಲರು, ವೈದ್ಯರು ಇತರರು ಯೋಜನೆಯ ಸದುಪಯೋಗಪಡೆದುಕೊಳ್ಳಬೇಕೆಂದು ಹಾವೇರಿ ಅಂಚೆ ವಿಭಾಗದ ಅಧೀಕ್ಷಕ ರಮೇಶ ಪ್ರಭು ಹೇಳಿದರು.
Vijaya Karnataka Web postal life insurance contractor
ಅಂಚೆ ಜೀವ ವಿಮಾ ಕಾರಾರ‍ಯಗಾರ


ಹೀರೆಕೆರೂರು ಪಟ್ಟದ ನ್ಯಾಯಾಲಯ ಆವರಣದಲ್ಲಿನಡೆದ ಅಂಚೆ ಜೀವ ವಿಮಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಅಂಚೆ ಜೀವ ವಿಮಾ ಯೋಜನೆಯು ಇಲ್ಲಿಯವರೆಗೆ ಕೇವಲ ಸರಕಾರಿ ಹಾಗೂ ಅರೆ ಸರಕಾರಿ ನೌಕರ ವರ್ಗದವರಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಯೋಜನೆಯನ್ನು ವೈದ್ಯರು, ಎಂಜಿನೀಯರ್‌ ಹಾಗೂ ವಕೀಲರಿಗೆ ವಿಸ್ತರಿಸಲಾಗಿದೆ. 'ಕಡಿಮೆ ಕಂತು, ಹೆಚ್ಚು ಬೋನಸ್‌' ಎಂಬ ಧ್ಯೇಯ ಹೊಂದಿರುವ ಅಂಚೆ ಜೀವ ವಿಮೆಯ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು.

ಅಡ್ವಕೇಟ್‌ ಬಾರ್‌ ಅಸೋಸಿಯೇಶನ್‌ ಅಧ್ಯಕ್ಷ ಜಯದೇವ ಹೊಳೆಆನ್ವೇರಿ ಅಧ್ಯಕ್ಷತೆ ವಹಿಸಿದ್ದರು. ಹಿರೆಕೇರೂರಿನ ಪೋಸ್ಟ್‌ ಮಾಸ್ಟರ್‌ ರಮೇಶ ಅಬ್ಬಿಗೇರಿ, ರಾಣೇಬೆನ್ನೂರಿನ ಅಂಚೆ ಉಪನಿರೀಕ್ಷಕ ಆನಂದ ವಂದಾಲ, ಹಾವೇರಿಯ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ ರಾಜು ಕೋಪರ್ಡೆ, ಹಿರೆಕೇರೂರಿನ ಅಡ್ವೋಕೇಟ್‌ ಬಾರ್‌ ಅಸೋಸಿಯೇಶನ್‌ ಕಾರ್ಯದರ್ಶಿ ಮಾರುತಿ ಜೋಕನಾಳ, ಹಿರಿಯ ವಕೀಲ ಎನ್‌.ಜಿ. ಬಣಕಾರ, ಪಿ.ವಿ. ಕೆರೂಡಿ, ಎಸ್‌ ಬಿ ತಿಪ್ಪಣ್ಣವರ, ನ್ಯಾಯಾಲಯದ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ