ಆ್ಯಪ್ನಗರ

ಯುವಕನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಶಿಗ್ಗಾವಿ: ಧಾರವಾಡ ಜಿಲ್ಲೆ ಗರಗ ಗ್ರಾಮದಲ್ಲಿನ ಕ್ಷ ತ್ರೀಯ ಸಮಾಜದ ಯುವಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ, ತಾಲೂಕು ಕ್ಷ ತ್ರೀಯ ಒಕ್ಕೂಟದ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಶಿರಸ್ತೇದಾರ ರವಿ ಕೊರವರ ಅವರಿಗೆ ಮನವಿ ಅರ್ಪಿಸಿದರು.

Vijaya Karnataka 5 Jul 2019, 5:00 am
ಶಿಗ್ಗಾವಿ: ಧಾರವಾಡ ಜಿಲ್ಲೆ ಗರಗ ಗ್ರಾಮದಲ್ಲಿನ ಕ್ಷ ತ್ರೀಯ ಸಮಾಜದ ಯುವಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ, ತಾಲೂಕು ಕ್ಷ ತ್ರೀಯ ಒಕ್ಕೂಟದ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಶಿರಸ್ತೇದಾರ ರವಿ ಕೊರವರ ಅವರಿಗೆ ಮನವಿ ಅರ್ಪಿಸಿದರು.
Vijaya Karnataka Web HVR-4SGN-2


ಪಟ್ಟಣದ ಪುರಸಭೆ ವೃತ್ತದಿಂದ ಆರಂಭವಾದ ಪ್ರತಿಭಟನಾ ರಾರ‍ಯಲಿ ಸಂತೆ ಮೈದಾನ, ಪೇಟೆ ಮುಖ್ಯ ರಸ್ತೆ, ಹಳೆ ಬಸ್‌ ನಿಲ್ದಾಣ, ಪಿಎಲ್‌ಡಿ ಬ್ಯಾಂಕ್‌ ವೃತ್ತ, ಹೊಸ ಬಸ್‌ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಯಲ್ಲಿ ತಮಟೆ ಬಾರಿಸುವ ಮೂಲಕ ಸಂಚರಿಸಿ ತಹಶೀಲ್ದಾರ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿದರು. ಅಮಾಯಕ ಯುವಕನ ಮೇಲೆ ಹಲ್ಲೆಗೈದ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಕ್ಷ ತ್ರೀಯ ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಲಕ್ಷ ್ಮಣ ಗಂಡಗಾಳೆ ಮಾತನಾಡಿ, ಗರಗ ಗ್ರಾಮದ ಯುವಕರಾದ ಅಲ್ಲಸಾಬ ನದಾಫ, ಎಳವಯ್ಯ ಚಿಕ್ಕಮಠ, ರುದ್ರಪ್ಪ ಉಳ್ಳನವರ, ಸಿದ್ದಯ್ಯ ಚಿಕ್ಕೋಪ, ಮಡಿವಾಳಪ್ಪ ಕಾಳಿ, ಪೀರಜಾದೆ ಗುಲಾಬ ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ತೋಡೆ ಭಾಗಕ್ಕೆ ವಿದ್ಯುತ್‌ ಶಾಕ್‌ ನೀಡುವ ಮೂಲಕ ಚಿತ್ರಹಿಂಸೆ ನೀಡಿದ್ದಾರೆ. ಹಲ್ಲೆಗೊಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವಾಗ ಆ ಯುವಕನನ್ನು ಧಾರವಾಡಕ್ಕೆ ಕರೆ ತಂದು 2 ಗುಂಟೆ ಜಾಗವನ್ನು ಒತ್ತಾಯ ಪೂರ್ವಕವಾಗಿ ಖರೀದಿ ಪತ್ರ ಬರೆಸಿಕೊಂಡಿದ್ದಾರೆ. ಅಲ್ಲದೆ ಯುವಕ ತಂದೆ ತಾಯಿಗೆ ಜೀವ ಬೆದರಿಕೆ ನೀಡಿದ್ದಾರೆ. ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಯುವಕ ಸಾವು ಬದುಕಿನ ನಡುವೆ ಹೊರಾಡುತ್ತಿದ್ದಾನೆ.

ತಕ್ಷ ಣ ಹಲ್ಲೆ ಮಾಡಿರುವ ವ್ಯಕ್ತಿಗಳನ್ನು ಬಂಧಿಸಿ ಗೊಂಡಾ ಕಾಯ್ದೆಯಡಿ ಶಿಕ್ಷೆ ನೀಡಬೇಕು. ಗಡಿಪಾರು ಮಾಡಬೇಕು. ಈ ಘಟನೆ ಖಂಡಿಸಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮಾಜದ ಜಿಲ್ಲಾ ಅಧ್ಯಕ್ಷ ನಾಗರಾಜ ಪುಲಿ, ಸುಭಾಸ ಚವ್ಹಾಣ, ಕೇದಾರೆಪ್ಪ ಬಗಾಡೆ, ಕೃಷ್ಣಾಜಿ ಕಲಾಲ, ಭೀಮಸೇನ ಹಿರೂಲಾಲ, ಸುಕೀಷ್‌ ಮುಳೆ, ಹನುಮಂತಪ್ಪ ಗೊಂದಳೆ, ನಾಗರಾಜ ಪೋಲೆ, ನಿಂಗಪ್ಪ ಮಾರನಬಿಡ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಘಟಕದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ